ಆಸ್ಟ್ರೇಲಿಯ: ಪುತ್ತಿಗೆ ಶ್ರೀಗಳಿಗೆ ಅಭಿನಂದನೆ
Team Udayavani, Jan 29, 2018, 11:03 AM IST
ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಸ್ಟ್ರೇಲಿಯಕ್ಕೆ ಭೇಟಿ ನೀಡಿದ ಸಂದರ್ಭ ಕ್ವೀನ್ಸ್ಲಂಡ್ ಬ್ರಿಸ್ಬೇನ್ನಲ್ಲಿ ಬ್ಲೇರ್ ಸಂಸದ್ ಸದಸ್ಯ, ಸಚಿವ ಶಯೆನ್ ನ್ಯೂಮನ್ ಅವರು ಬುಧವಾರ ಅಭಿನಂದಿಸಿದರು. ಅವರಿಬ್ಬರೂ ಆಸ್ಟ್ರೇಲಿಯಾದ ಅಭಿವೃದ್ಧಿಯಲ್ಲಿ ಭಾರತೀಯ ಸಮುದಾಯದವರು ಸಲ್ಲಿಸಿದ ಕೊಡುಗೆ ಬಗ್ಗೆ ಚರ್ಚಿಸಿದರು. ಭಾರತದಿಂದ ಬಂದವರು ಎದುರಿಸುತ್ತಿರುವ ಸಮಸ್ಯೆಗಳು, ವಿವಿಧ ನೀತಿಗಳು ಭಾರತೀಯ ಸಮುದಾಯದ ಮೇಲೆ ಆಗುತ್ತಿ ರುವ ಪರಿಣಾಮಗಳ ಕುರಿತು ಸ್ವಾಮೀಜಿ ವಿವರಿಸಿದರು.
ಸಚಿವರು ಸ್ವಾಮೀಜಿಯವರಿಗೆ ದೇವಿ ಜಗನ್ಮಾತೆಯ ಚಿತ್ರವಿರುವ ಸ್ಮರಣಿಕೆ ನೀಡಿ ಗೌರವಿಸಿದರು. ಸಚಿವರನ್ನು ಸ್ವಾಮೀಜಿ ಉಡುಪಿಗೆ ಆಹ್ವಾನಿಸಿದರು. ಉಭಯ ಸಮುದಾಯದವರನ್ನು ಒಂದುಗೂಡಿಸುವ ಸ್ವಾಮೀಜಿಯವರ ಪ್ರಯತ್ನವನ್ನು ಸಚಿವರು ಶ್ಲಾ ಸಿದರು. ಆಸ್ಟ್ರೇಲಿಯಕ್ಕೆ ಆಗಾಗ್ಗೆ ಬಂದು ಧಾರ್ಮಿಕ ಸಂದೇಶವನ್ನು ಬಿತ್ತರಿಸಬೇಕೆಂದು ಸಚಿವರು ವಿನಂತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ
ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್ನದ್ದು: ಮೀನಾಕ್ಷಿ ಲೇಖಿ