ಆಯುಷ್ಮಾನ್ ಭಾರತ್ ಅರ್ಜಿಗೆ ಜನಜಂಗುಳಿ
ಕಾರ್ಕಳ ತಾಲೂಕು ಆಸ್ಪತ್ರೆ ಹೊರರೋಗಿಗಳಿಗೆ ತೊಂದರೆ
Team Udayavani, Mar 29, 2019, 6:00 AM IST
ಕಾರ್ಕಳ: ಸಾರ್ವಜನಿಕ ತಾಲೂಕು ಆಸ್ಪತ್ರೆ ಕೌಂಟರ್ ಮುಂದೆ ಆಯುಷ್ಮಾನ್ ಭಾರತ್ ವಿಮೆ ಅರ್ಜಿ ಪಡೆಯಲು ಬಹುದೊಡ್ಡ ಸರತಿ ಸಾಲು ಉಂಟಾದ ಪರಿಣಾಮ ಹೊರರೋಗಿಗಳು ರಶೀದಿ ಪಡೆಯಲು, ರೋಗಿಗಳ ದಾಖಲಾತಿ, ಡಿಸಾcರ್ಜ್ ಸಂಬಂಧಿಸಿದ ಕಾರ್ಯಗಳಿಗೆ ತೊಂದರೆ ಪಡಬೇಕಾಯಿತು.
ಬೇರೆ ಸಿಬಂದಿಯಿಲ್ಲ
ಸಾರ್ವಜನಿಕ ಆಸ್ಪತ್ರೆ ಕೇಂದ್ರದಲ್ಲಿ ಬಿಲ್ಲಿಂಗ್ ಕೌಂಟರ್, ಹೊರರೋಗಿ, ಒಳರೋಗಿಗಳ ದಾಖಲೆ, ಸಂಧ್ಯಾಸುರಕ್ಷಾ ಯೋಜನೆ ಫಲಾನುಭವಿಗಳ ಅರ್ಜಿ ಸಕಾಲಕ್ಕೆ ಅಪ್ಲೋಡ್ ಮಾಡುವ ಕಾರ್ಯ, ಗರ್ಭಿಣಿಯರಿಗೆ ಸಂಬಂಧಿಸಿದ ದಾಖಲೆ, ವಿಮೆಗಾಗಿ ರೋಗಿಗಳ ಫೋಟೋ ತೆಗೆಯುವ ಕಾರ್ಯ, ಪೊಲೀಸರ ಮಾಹಿತಿ ಕೇಂದ್ರವೆಲ್ಲಕ್ಕೂ ಒಂದೇ ಕೌಂಟರ್ ಅನ್ನು ಜನರು ಅವಲಂಬಿಸಬೇಕಾಗಿದೆ.
ಇದೀಗ ಆಯುಷ್ಮಾನ್ ಭಾರತ್ ಅರ್ಜಿ ಪಡೆಯಲು ಇದೇ ಕೌಂಟರ್ ಬಳಕೆ ಮಾಡುವುದರಿಂದ ಸೇವೆ ವಿಳಂಬ ವಾಗುತ್ತಿದ್ದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೌಂಟರ್ನಲ್ಲಿ ಕೇವಲ ಮೂರು ಮಂದಿ ಕಾರ್ಯನಿರ್ವಹಿಸುತ್ತಿರುವ ಕಾರಣ ಸಾರ್ವಜನಿಕರಿಗೆ ತ್ವರಿತ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.
ಪತ್ಯೇಕ ಕೌಂಟರ್ ತೆರೆಯಲಿ
ಎಲ್ಲ ಸೇವೆಯೂ ಒಂದೇ ಕೌಂಟರ್ನಲ್ಲಿ ನೀಡುವುದಾದರೂ ಹೇಗೆ? ಆಯುಷ್ಮಾನ್ ಭಾರತ್ ಯೋಜನೆಗೆ ಪ್ರತ್ಯೇಕ ಕೌಂಟರ್ ತೆರೆಯಬೇಕೆಂದು ಸಾಲು ನಿಂತ ವ್ಯಕ್ತಿಯಲ್ಲೊಬ್ಬರಾದ ಜಗದೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾಲೂಕಿಗೊಂದೇ ಕೇಂದ್ರ
ಆಯುಷ್ಮಾನ್ ಭಾರತ್ ವಿಮೆ ಅರ್ಜಿಯನ್ನು ಸದ್ಯ ತಾಲೂಕು ಆಸ್ಪತ್ರೆಯಲ್ಲಿ ಮಾತ್ರ ಸ್ವೀಕರಿಸಲಾಗುತ್ತಿದೆ. ಮಾ. 2ರಿಂದ ಅರ್ಜಿ ಸ್ವೀಕಾರಕ್ಕೆ ಚಾಲನೆ ದೊರೆತಿದ್ದು, ಪ್ರತಿದಿನ ಸುಮಾರು 200 ಮಂದಿ ಅರ್ಜಿ ಸಲ್ಲಿಸಲು ಆಗಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ