ಹೊಸ ಖ್ಯಾತ ಪ್ರಸಂಗಗಳ ಯಶಸ್ವಿ ಪ್ರದರ್ಶನ

ಬಡಗುತಿಟ್ಟು ಯಕ್ಷಗಾನ ತಿರುಗಾಟ

Team Udayavani, Mar 5, 2020, 5:49 AM IST

ಹೊಸ ಖ್ಯಾತ ಪ್ರಸಂಗಗಳ ಯಶಸ್ವಿ ಪ್ರದರ್ಶನ

ಬಸ್ರೂರು: ಬಡಗುತಿಟ್ಟಿನ ಯಕ್ಷಗಾನ ಮೇಳಗಳು ಈಗ ತಿರುಗಾಟ ನಡೆಸುತ್ತಿವೆ. ಮುಂದಿನ ಮೇ ತನಕ ಈ ತಿರುಗಾಟ ಮುಂದುವರಿಯುತ್ತದೆ. ಬಡಗುತಿಟ್ಟಿನಲ್ಲಿ ಟೆಂಟ್‌ ಮೇಳಗಳಿರುವುದು ಎರಡೇ. ಅವುಗಳೆಂದರೆ ಶ್ರೀ ಸಾಲಿಗ್ರಾಮ ಮತ್ತು ಶ್ರೀ ಪೆರ್ಡೂರು ಮೇಳ.

ಶ್ರೀ ಸಾಲಿಗ್ರಾಮ ಮೇಳದವರು ಈ ಬಾರಿ ದೇವದಾಸ್‌ ಈಶ್ವರ ಮಂಗಲರ “ಚಂದ್ರಮುಖೀ ಸೂರ್ಯಸಖೀ’ ಪ್ರಸಂಗವನ್ನು ಯಶಸ್ವಿಯಾಗಿ ಆಡುತ್ತಿದ್ದು ಶತದಿನದ ಸಂಭ್ರಮವನ್ನೂ ಕಂಡಿದೆ. ಶ್ರೀ ಪೆರ್ಡೂರು ಮೇಳದವರು ಪ್ರೊ. ಪವನ್‌ ಕಿರಣಕೆರೆ ಅವರ “ಮಾನಸ ಗಂಗಾ’ ಪ್ರಸಂಗವನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. ಇದಲ್ಲದೆ ಸಾಲಿಗ್ರಾಮ ಮೇಳದವರಿಂದ ಅಲ್ತಾರು ನಂದೀಶ್‌ ಶೆಟ್ಟಿ ವಿರಚಿತ “ವಚನ ವಲ್ಲರಿ’, ಪೆರ್ಡೂರು ಮೇಳದವರಿಂದ ಮಣೂರು ವಾಸುದೇವ ಮಯ್ಯ ವಿರಚಿತ “ಸೂರ್ಯ ಸಂಕ್ರಾಂತಿ’ ಪ್ರಸಂಗಗಳು ಯಶಸ್ವಿ ಪ್ರದರ್ಶನಗೊಳ್ಳುತ್ತಿವೆ.

ಬೇರೆ ಪ್ರಸಂಗಗಳ ಪ್ರದರ್ಶನ
ಈ ಎರಡು ಪ್ರಸಂಗಗಳು ಮಾತ್ರವಲ್ಲದೆ ಇನ್ನೂ ಕೆಲವು ಹೊಸ ಪ್ರಸಂಗಗಳನ್ನು ಈ ಎರಡು ಮೇಳಗಳು ಯಶಸ್ವಿಯಾಗಿ ಪ್ರದರ್ಶಿಸುತ್ತಿವೆ. ಶ್ರೀ ಸಾಲಿಗ್ರಾಮ ಮತ್ತು ಶ್ರೀ ಪೆರ್ಡೂರು ಮೇಳಗಳಲ್ಲದೆ ಬಡಗುತಿಟ್ಟಿನಲ್ಲಿ ಹಲವು ಹರಕೆಯಾಟದ, ಸೇವಾ ಬಯಲಾಟದ ಮೇಳಗಳಿವೆ. ಮುಖ್ಯವಾಗಿ ಶ್ರೀ ಮಂದಾರ್ತಿ ಮೇಳ ಐದು ಮೇಳಗಳನ್ನು ಹೊಂದಿದ್ದು ಹರಕೆಯಾಟದ ಒತ್ತಡದಲ್ಲಿದೆ. ಇದಲ್ಲದೆ ಶ್ರೀ ಮಾರಣಕಟ್ಟೆ ಎರಡು ಮೇಳಗಳಿದ್ದು ಈ ಬಾರಿ ಮತ್ತೂಂದು ಮೂರನೇ ಮೇಳವನ್ನೂ ತಿರುಗಾಟದಲ್ಲಿ ನಡೆಸುತ್ತಿದ್ದಾರೆ.

ಉಳಿದಂತೆ ಶ್ರೀ ಸೌಕೂರು, ಶ್ರೀ ಹಿರಿಯಡಕ, ಶ್ರೀ ಮಡಾಮಕ್ಕಿ, ಶ್ರೀ ಹಾಲಾಡಿ, ಶ್ರೀ ಅಮೃತೇಶ್ವರಿ, ಶ್ರೀ ಸಿಗಂಧೂರು, ಶ್ರೀ ಆಜ್ರಿ ಮೇಳ ಚೋನಮನೆ, ಶ್ರೀ ಮೇಗರಹಳ್ಳಿ, ಶ್ರೀ ಗೋಳಿಗರಡಿ, ಶ್ರೀ ನೀಲಾವರ ಮೇಳಗಳು ಒಂದೊಂದೇ ಮೇಳವನ್ನು ಹೊಂದಿದ್ದು ಯಶಸ್ವಿ ತಿರುಗಾಟವನ್ನು ನಡೆಸುತ್ತಿವೆ. ಶ್ರೀ ಕಮಲಶಿಲೆ ಮೇಳ ಎರಡು ಮೇಳಗಳನ್ನು ಹೊಂದಿದ್ದು ಯಶಸ್ವಿ ತಿರುಗಾಟವನ್ನು ನಡೆಸುತ್ತಿವೆ.

ಬಯಲಾಟದ ಕೆಲವು ಮೇಳಗಳು ಮಾತ್ರ ಕೇವಲ ಪೌರಾಣಿಕ ಪ್ರಸಂಗಗಳನ್ನಷ್ಟೇ ಆಡುತ್ತಿದ್ದರೆ ಉಳಿದ ಬಯಲಾಟದ ಮೇಳಗಳು ಹೊಸ ಪ್ರಸಂಗಗಳನ್ನು ಪ್ರದರ್ಶಿಸುತ್ತಿವೆ. ಮತ್ತೆ ಕೆಲವು ಬಯಲಾಟದ ಮೇಳಗಳು ಈ ಬಾರಿಯ ತಿರುಗಾಟದಲ್ಲೇ ಪ್ರಥಮವಾಗಿ ಪ್ರದರ್ಶಿಸಿದ ಯಕ್ಷಗಾನ ಪ್ರಸಂಗವೂ ಇದೆ. ಹಿರಿಯಡಕ ಮೇಳದವರಿಂದ
“ಗರುಡೊದ್ಭವ’ , “ಮೂಷಿಕ ವಾಹನ’, ಮಡಾಮಕ್ಕಿ ಮೇಳದವರಿಂದ “ಮಹಾಶಕ್ತಿ ಮಂತ್ರದೇವತೆ ಯಶಸ್ವಿ ಪ್ರದರ್ಶನಗೊ ಳ್ಳುತ್ತಿರುವ ಪ್ರಸಂಗಗಳು.

ಪೌರಾಣಿಕ ಪ್ರಸಂಗ
ಯಶಸ್ವಿ ಪ್ರದರ್ಶನ
ಈ ಬಾರಿ ಪೌರಾಣಿಕ ಹಿಟ್‌ ಪ್ರಸಂಗಗಳು “ಭೀಷ್ಮ ವಿಜಯ’, “ಭೀಷ್ಮ-ಭೀಷ್ಮ-ಭೀಷ್ಮ’,
“ಬ್ರಹ್ಮಕಪಾಲ’, “ಶಶಿಪ್ರಭಾ ಪರಿಣಯ” ಯಶಸ್ವಿ ಪ್ರದರ್ಶನಗಳಿಂದೊಡಗೂಡಿದೆ.

ಬಯಸಿದರೆ ಬಯಲಾಟ
ಕಾಲಮಿತಿ ಪ್ರದರ್ಶನ
ಬಯಲಾಟದ ಕೆಲವು ಮೇಳಗಳು ಆಡಿಸುವವರು ಬಯಸಿದರೆ ಕಾಲಮಿತಿ ಪ್ರದರ್ಶನವನ್ನೂ ಮಾಡಿದ್ದಾರೆ. ಒಂದೇ ಯಜಮಾನರ ಬೇರೆ ಬೇರೆ ಮೇಳಗಳಲ್ಲಿ ಕಲಾವಿದರು ಎರಡೆರಡು ಕಡೆ ವೇಷ ಮಾಡಿದ ಪ್ರಸಂಗವೂ ಇದೆ. ಬಡಗು ತಿಟ್ಟಿನಲ್ಲಿ ಕೆಲವು ಹೆಸರಾಂತ ಕಲಾವಿದರು ಈಗ ಇಲ್ಲ . ಹೊಸ ಹೊಸ ಪೀಳಿಗೆಯ ಭರವಸೆಯ ಕಲಾವಿದರು ಮತ್ತೆ ಮತ್ತೆ ಮೂಡಿಬರುತ್ತಿರುವುದು ಯಕ್ಷಗಾನ ಕ್ಷೇತ್ರಕ್ಕೆ ಆಶಾಕಿರಣವಾಗಿದೆ.

ಒಟ್ಟಿನಲ್ಲಿ ಯಕ್ಷಗಾನ ಕಲೆ ಕರಾವಳಿಯಲ್ಲಿ ಬಡವಾಗಲಿಲ್ಲ. ಬೆಂಗಳೂರು, ಮುಂಬಯಿ ನಗರಗಳಲ್ಲೂ ಯಶಸ್ವಿ ಪ್ರದರ್ಶನ ನೀಡಿದ ಉದಾಹರಣೆಗಳಿವೆ. ಮತ್ತೆ ಮತ್ತೆ ಹೊಸ ಮೇಳಗಳು ಹುಟ್ಟಿಕೊಳ್ಳುತ್ತಿರುವುದು ಯಕ್ಷರಸಿಕರ ಪಾಲಿಗೆ ಆಶಾಕಿರಣವಾಗಿ ಕಂಡುಬರುತ್ತಿದೆ.

-  ದಯಾನಂದ ಬಳ್ಕೂರು

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.