ಬಾಳ್ಕಟ್ ಅಚ್ಚುಕಟ್ಟು ಪ್ರದೇಶಗಳಿಗೆ ಬೇಕು ವಾರಾಹಿ ನೀರು
Team Udayavani, May 6, 2018, 6:30 AM IST
ಸಿದ್ದಾಪುರ: ಏರುತ್ತಿರುವ ತಾಪಮಾನದ ಪರಿಣಾಮ ನೀರಿನ ಅಭಾವ ಹೆಚ್ಚುತ್ತಿದ್ದು, ನೀರಿನ ನಿರ್ವಹಣೆ ಸರಿಯಾಗಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಿದ್ದಾಪುರ ಗ್ರಾಮದ ಮೂಲಕ ಹಾದು ಹೋಗುವ ವಾರಾಹಿ ಕಾಲುವೆಯ ನೀರನ್ನೂ ಸಿದ್ದಾಪುರ ಕೆಳಾಪೇಟೆಯ ಕಾಶಿಕಾಲು ಕೆರೆಗೆ ಹಾಯಿಸಿ, ಅಲ್ಲಿಂದ ನೈಸರ್ಗಿಕದತ್ತವಾಗಿ ಹರಿಯುವ ನಾಲೆಯಲ್ಲಿ ಹರಿಸಬೇಕೆಂಬ ಒತ್ತಾಯವಿದೆ.
ಹೀಗೆ ಮಾಡಬಹುದು…
ವಾರಾಹಿ ಕಾಲುವೆ ನೀರನ್ನು ಐರಬೈಲುವಿನಿಂದ ಪೈಪ್ಲೈನ್ ಮೂಲಕ ಬಾಳ್ಕಟ್ ನದಿಯ ಮೂಲವಾದ ಕಾಶಿಕಾಲು ಕೆರೆಗೆ ಹಾಯಿಸಬೇಕು. ಆಗ ನೈಸರ್ಗಿಕ ನಾಲೆಗಳಲ್ಲಿ ನೀರು ಹರಿಯುತ್ತದೆ. ಇದರಿಂದ ಸಿದ್ದಾಪುರ, ಅಂಪಾರು, ಆಜ್ರಿ ಮತ್ತು ಕೊಡ್ಲಾಡಿ ಹೀಗೆ ಹತ್ತಾರು ಗ್ರಾಮದ ಹಳ್ಳಿಗಳ ಕೃಷಿ ಭೂಮಿಗೆ ಹಾಗೂ ಕುಡಿಯುವ ನೀರಿನ ಮೂಲಕ್ಕೆ ಅನುಕೂಲವಾಗುತ್ತದೆ. ಇದಕ್ಕೆ ಕಡಿಮೆ ಮೊತ್ತದ ಹಣ ಬೇಕಿದ್ದು, ಯೋಜನೆಯಿಂದ ಎಲ್ಲೂ ಪರಿಸರ ನಾಶ ಅಥವಾ ಭೂಮಿ ಒತ್ತುವರಿ ಅಗತ್ಯ ಇರುವುದಿಲ್ಲ ಎನ್ನುವುದು ಬಾಳ್ಕಟ್ಟು ನದಿ ನೀರು ಬಳಕೆದಾರರ ಅಭಿಪ್ರಾಯವಾಗಿದೆ.
ಪ್ರಯೋಜನವೇನು?
ವಾರಾಹಿ ನೀರನ್ನು ಬಾಳ್ಕಟ್ ನಾಲೆಯಲ್ಲಿ 20ಕಿ. ಮೀ. ದೂರ ಹರಿಯಲು ಅನುಕೂಲ ಕಲ್ಪಿಸಿದಲ್ಲಿ ಸುಮಾರು 410 ಹೆಕ್ಟೇರ್ ಕೃಷಿ ಭೂಮಿಗೆ ಅನುಕೂಲವಾಗುತ್ತದೆ. ಜತೆಗೆ ಕುಡಿಯುವ ನೀರಿನ ಮೂಲವೂ ವೃದ್ಧಿಸುತ್ತದೆ.
ಯಾರಿಗೆಲ್ಲ ಉಪಯೋಗ?
ಕೊಳ್ಕೆಬೈಲು, ಜಡ್ಡಿನಬೈಲು, ಅಕ್ಕುಂಜೆ, ಕೊಡ್ಗಿ, ಗುಳಿಗದ್ದೆ, ಹೆಗ್ಗೇರಿ, ಮಣಿಗಾರಡಿ, ಚೋನಾಳಿ, ಹೆರಬೈಲು, ಅಂಪಾರು ಗ್ರಾಮದ ಶ್ಯಾನ್ಕಟ್ಟು, ಬಾಳ್ಕಟ್, ಆಜ್ರಿ ಗ್ರಾಮದ ಕನ್ನಾಲಿ, ಮಾರ್ಡಿ, ಗಂಗಾಡಿ, ಹೊಲದಮನೆ, ಮೂರು ಸಾಲು ಪ್ರದೇಶಕ್ಕೂ ಅನುಕೂಲವಾಗುತ್ತದೆ. ಈ ನಾಲೆಯು ಕನ್ನಾಲಿ ಮಾರ್ಗವಾಗಿ ಕೊಡ್ಲಾಡಿ ಗ್ರಾಮದಲ್ಲಿ ಕುಬಾj ನದಿಗೆ ಜೋಡಣೆಯಾಗುತ್ತದೆ. ಕುಬಾj ನದಿಯ ಮೂಲಕ ನೀರು ಮುಂದುವರಿದಲ್ಲಿ ಮುಂದಿನ ಭೂ ಪ್ರದೇಶಗಳಿಗೂ ನೀರಿನ ಸೌಲಭ್ಯ ಕಲ್ಪಿಸಿದಂತಾಗುತ್ತದೆ.
ಕುಡಿಯುವ ನೀರಿಗೆ ಅನುಕೂಲ
ಬಾಳ್ಕಟ್ ಅಚ್ಚುಕಟ್ಟು ಪ್ರದೇಶಗಳಿಗೆ ವಾರಾಹಿ ಕಾಲುವೆ ನೀರು ಏತ ನೀರಾವರಿ ಮೂಲಕ ಹರಿಸುವುದರಿಂದ ನೈಸರ್ಗಿಕ ತೋಡುಗಳ ಮೂಲಕ ಕೃಷಿ, ಕುಡಿಯುವ ನೀರಿಗೆ ಅನುಕೂಲ. ಈ ಯೋಜನೆಯಿಂದ ಸಿದ್ದಾಪುರ ಅಲ್ಲದೇ ಪಕ್ಕದ ಗ್ರಾಮಗಳಿಗೂ ಉಪಯೋಗವಾಗುತ್ತದೆ.
– ಎಸ್. ರಾಜೀವ ಶೆಟ್ಟಿ ಶಾನ್ಕಟ್ಟು,
ಕಾರ್ಯದರ್ಶಿ, ಬಾಳ್ಕಟ್ಟು ನದಿ ನೀರು ಬಳಕೆದಾರರ ವೇದಿಕೆ
– ಸತೀಶ ಆಚಾರ್ ಉಳ್ಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
MUST WATCH
ಹೊಸ ಸೇರ್ಪಡೆ
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ