ಉಡುಪಿ ಜಿಲ್ಲೆಯಲ್ಲಿ ಬ್ಯಾಂಕ್ ವ್ಯವಹಾರ ಸಂಪೂರ್ಣ ಸ್ಥಗಿತ
Team Udayavani, May 31, 2018, 10:43 AM IST
ಉಡುಪಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೇಶಾದ್ಯಂತ ಬುಧವಾರ ನಡೆದ ಸಾರ್ವತ್ರಿಕ ಮುಷ್ಕರದಂತೆ ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಉಡುಪಿಯ ಕೆನರಾ ಬ್ಯಾಂಕ್ ಎದುರು ಪ್ರತಿಭಟನೆ ನಡೆಯಿತು. ಬ್ಯಾಂಕ್ಗಳು ವ್ಯವಹಾರ ಸ್ಥಗಿತಗೊಳಿಸಿದ್ದವು.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ನ ಜಿಲ್ಲಾ ಸಂಚಾಲಕ ಹೆರಾಲ್ಡ್ ಡಿ’ಸೋಜಾ, ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಜಿಲ್ಲಾಧ್ಯಕ್ಷ ರಾಮ್ ಮೋಹನ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಸಿಂಡಿಕೇಟ್ ಬ್ಯಾಂಕಿನ ರವಿ, ಶಶಿಧರ ಶೆಟ್ಟಿ, ಕೆನರಾ ಬ್ಯಾಂಕ್ನ ವರದರಾಜ, ರಾಕೇಶ್, ಭಾರತೀಯ ಸ್ಟೇಟ್ಬ್ಯಾಂಕ್ನ ಕೆ.ಆರ್. ಶೆಣೈ, ಪ್ರಕಾಶ್ ಜೋಗಿ, ಕರ್ಣಾಟಕ ಬ್ಯಾಂಕ್ನ ನಿತ್ಯಾನಂದ, ರವಿಶಂಕರ್, ಕಾರ್ಪೊರೇಶನ್ ಬ್ಯಾಂಕ್ನ ರಘು ರಾಮಕೃಷ್ಣ ಬಲ್ಲಾಳ್, ನಾಗೇಶ್ ನಾಯಕ್, ಅಧಿಕಾರಿಗಳ ಸಂಘ ಟನೆಯ ಜಯಪ್ರಕಾಶ್ ರಾವ್, ಹೇಮಂತ್ ಯು. ಉಪಸ್ಥಿತರಿದ್ದರು.