ಅಪರೂಪದ ಘಟನೆಗೆ ಸಾಕ್ಷಿಯಾದ ಬಾರಾಡಿ ಕಂಬಳ: ನಾಲ್ಕು ಬಾರಿ ನಡೆದ ಒಂದು ಸೆಮಿ ಫೈನಲ್ ಪಂದ್ಯ


Team Udayavani, Dec 15, 2019, 2:24 PM IST

adda

Representative Image

ಮಣಿಪಾಲ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೀಗ ಕಂಬಳದ ಕಹಳೆಯದ್ದೇ ಸದ್ದು. ಪ್ರತಿ ಶನಿವಾರ ಒಂದಲ್ಲ ಒಂದು ಕಡೆ ಕಂಬಳ ನಡೆಯುತ್ತಿದೆ. ಅಂತೆಯೇ ಡಿಸೆಂಬರ್ 14 ಮತ್ತು 15ರಂದು ಬಾರಾಡಿ ಬೀಡಿನಲ್ಲಿ ನಡೆದ ಸೂರ್ಯ ಚಂದ್ರ ಜೋಡುಕರೆ ಕಂಬಳ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ.

ದಾಖಲೆಯ 34 ನೇ ವರ್ಷದ ಬಾರಾಡಿ ಬೀಡು ಜೋಡುಕರೆ ಕಂಬಳದಲ್ಲಿ ಸುಮಾರು 156 ಜೋಡಿ ಕೋಣಗಳು ಭಾಗವಹಿಸಿದ್ದು, ಶನಿವಾರ ಬೆಳಿಗ್ಗೆ ಆರಂಭವಾಗಿತ್ತು. ಆರು ವಿಭಾಗದ ಕೋಣಗಳು ಜಿದ್ದಿಗೆ ಬಿದ್ದವರಂತೆ ಸ್ಪರ್ಧೆ ನೀಡಿ ಕಂಬಳದ ಮೆರುಗು ಹೆಚ್ಚಿಸಿದ್ದವು.

ಎಲ್ಲಾ ವಿಭಾಗದ ಕೋಣಗಳು ಸೆಮಿ ಫೈನಲ್ ಕೂಟ ಮುಗಿಸಿ ಅಂತಿಮ ಹಂತಕ್ಕೆ ಸಾಗುತ್ತಿದ್ದರೆ ಒಂದು ವಿಭಾಗದ ಸೆಮಿ ಫೈನಲ್ ಇನ್ನೂ ಮುಗಿದಿರಲಿಲ್ಲ. ಯಾಕೆಂದರೆ ಆ ವಿಭಾಗದ ಒಂದು ಸ್ಪರ್ಧೆ ಮತ್ತೆ ಮತ್ತೆ ಟೈ ಆಗುತ್ತಿತ್ತು.

ಅಡ್ಡಹಲಗೆ ವಿಭಾಗದಲ್ಲಿ ಸ್ಪರ್ಧಿಸಿದ್ದ ಹಂಕರ್ಜಾಲ್ ಭಿರ್ಮಣ್ಣ ಶೆಟ್ಟಿ  ಮತ್ತು ಬೋಳಾರ ತ್ರಿಶಾಲ್ ಪೂಜಾರಿಯವರ ಕೋಣಗಳು ಸೆಮಿ ಫೈನಲ್ ಸುತ್ತಿಗೇರಿದ್ದರು. ಆದರೆ ಸೆಮಿ ಫೈನಲ್ ಸ್ಪರ್ಧೆಯ ತೀವ್ರತೆ ಎಷ್ಟಿತ್ತೆಂದರೆ ಒಂದು ಬಾರಿಯ ಸೆಮಿ ಫೈನಲ್ ನಲ್ಲಿ ಪ್ರಕಟವಾಗಬೇಕಿದ್ದ ಫಲಿತಾಂಶ ನಾಲ್ಕು ಬಾರಿ ನಡೆಯಿತು. ಮೊದಲ ಮೂರು ಬಾರಿಯ ಓಟದಲ್ಲೂ ಎರಡು ಜೋಡಿ ಕೋಣಗಳೂ ಸರಿಸಮನಾಗಿ ಹೆಜ್ಜೆ ಹಾಕಿದ್ದವು. ಹೀಗಾಗಿ ಮೊದಲ ಮೂರು ಓಟದಲ್ಲೂ ವಿಜೇತರನ್ನು ಘೋಷಿಸಲಾಗಲಿಲ್ಲ.

ಮೂರು ಬಾರಿ ಸರಿ ಸಮನಾಡಿ ಓಡಿದ ಕೋಣಗಳಿಗೆ ನಾಲ್ಕನೇ ಬಾರಿಗೆ ಕರೆ ಬದಲಿ ಮಾಡಿ ಸ್ಪರ್ಧೆಗೆ ಅವಕಾಶ ನೀಡಲಾಯಿತು. ಮೊದಲ ಮೂರು ಓಟದಲ್ಲಿ ಸೂರ್ಯ ಕರೆಯಲ್ಲಿ ಓಡಿದ್ದ ಹಂಕರ್ಜಾಲು ಈಗ ಚಂದ್ರ ಕರೆಯಲ್ಲೂ, ಚಂದ್ರ ಕರೆಯಲ್ಲಿ ಓಡಿದ ಬೋಳಾರ ಸೂರ್ಯ ಕರೆಯಲ್ಲಿ ಓಡುವುದೆಂದು ತೀರ್ಮಾನಕ್ಕೆ ಬರಲಾಯಿತು. ಒಂದು ವೇಳೆ ನಾಲ್ಕನೇ ಬಾರಿಯೂ ಸರಿಸಮವೆಂದು ತೀರ್ಪು ಬಂದರೆ ಈರ್ವರನ್ನೂ ಜಂಟಿ ದ್ವಿತೀಯ ಸ್ಥಾನಿಯೆಂದು ಘೋಷಿಸುವ ನಿರ್ಧಾರಕ್ಕೆ ಬರಲಾಗಿತ್ತು. ( ಮತ್ತೊಂದು ಸೆಮಿ ಫೈನಲ್ ನಲ್ಲಿ ಮೋರ್ಲ ಗಿರೀಶ್ ಆಳ್ವರ ಕೋಣಗಳು ಫೈನಲ್ ಗೇರಿದ್ದವು)

ಮತ್ತೆ ನಾಲ್ಕನೇ ಬಾರಿಗೆ ಅದೇ ಕೋಣಗಳು ಕಂಬಳ ಕರೆಗೆ ಇಳಿದಾಗ ಸಮಸ್ಥ ಕಂಬಳಾಭಿಮಾನಿಗಳ ಚಿತ್ತ ಅತ್ತ ನೆಟ್ಟಿತ್ತು.’ ಅಲಾ ಬುಡಿಯೆರ್’ ಎಂದು ಕೇಳಿದಾಕ್ಷ ಮತ್ತೆ ಅದೇ ವೇಗದಲ್ಲಿ, ಅದೇ ಗಾಂಭೀರ್ಯದಿಂದ ಉಭಯ ಜೋಡಿಗಳು ಓಡಿದ್ದವು. ಪ್ರೇಕ್ಷಕರೆಲ್ಲಾ ಕಾತರದಿಂದ ನೋಡುತ್ತಿದ್ದಂತೆ ಮತ್ತೆ ಪೈಪೋಟಿಯಲ್ಲಿ ಓಡಿದರೂ ಅಂತಿಮವಾಗಿ ಕೂದಲೆಳೆ ಅಂತರದಲ್ಲಿ ಸೂರ್ಯ ಕರೆಯ ಬೋಳಾರ ತ್ರಿಶಾಲ್ ಪೂಜಾರಿಯವರ ಕೋಣಗಳು ಗೆಲುವಿನ ರೇಖೆ ಮುಟ್ಟಿದ್ದವು.

ಕಂಬಳ ಕೂಟದಲ್ಲಿ ಅಪರೂಪ ಎಂಬಂತೆ ನಡೆಯುವ ಈ ಘಟನೆ ಕಂಬಾಳಭಿಮಾನಿಗಳ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡಿದೆ.

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.