ವರ್ಷದಿಂದ ಮುಚ್ಚಿದೆ ಬೀಜಾಡಿ ಆರೋಗ್ಯ ಉಪ ಕೇಂದ್ರ
Team Udayavani, Jan 22, 2019, 12:50 AM IST
ಕೊಟೇಶ್ವರ : ಗೋಪಾಡಿ ಗ್ರಾ.ಪಂ.ಕಚೇರಿಯ ಸನಿಹದಲ್ಲಿರುವ ಬೀಜಾಡಿ ಆರೋಗ್ಯ ಉಪ ಕೇಂದ್ರವು ಕಳೆದ ಒಂದು ವರ್ಷದಿಂದೀಚೆಗೆ ಉಪಯೋಗಕ್ಕಿಲ್ಲದೇ ಮುಚ್ಚಿದ್ದು, ಗ್ರಾಮಸ್ಥರು ಬವಣೆ ಪಡುವಂತಾಗಿದೆ.
ಬೀಜಾಡಿ ಮತ್ತು ಗೋಪಾಡಿ ಒಂದೇ ಸೂರಿನಡಿ ಗ್ರಾ.ಪಂ.ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಬೀಜಾಡಿ ಆರೋಗ್ಯ ಕೇಂದ್ರದ ನಾಮ ಫಲಕದೂಡನೆ ಈ ಭಾಗದ ಜನರಿಗೆ ಉಪಯೋಗಕಾರಿಯಾಗಿತ್ತು. ತದನಂತರ ಬೀಜಾಡಿ ಹಾಗೂ ಗೋಪಾಡಿ ಗ್ರಾ.ಪಂ.ಗಳು ಸ್ವತಂತ್ರ ಗ್ರಾ.ಪಂ. ಆಗಿ ಕಾರ್ಯನಿರ್ವಹಿಸಲು ಆರಂಭಿಸಿದ ಅನಂತರ ಆರೋಗ್ಯ ಉಪಕೇಂದ್ರವು ಸಹಾಯಕಿ ಯರ ಕೊರತೆಯಿಂದಾಗಿ ಮುಚ್ಚಿ ಕೊಂಡಿದ್ದು ಈವರೆಗೆ ಸೇವೆಗೆ ಅಲಭ್ಯವಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ ವಾಗಿದೆ.
ದೂರದ ಕೇಂದ್ರಗಳೇ ಗತಿ!
ಗೋಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 3500 ಜನರು ವಾಸವಾಗಿದ್ದು, ಇಲ್ಲಿನ ನಿವಾಸಿಗಳಿಗೆ ಸರಕಾರದ ಆರೋಗ್ಯ ತಪಾಸಣಾ ಕೇಂದ್ರದ ಕೊರತೆಯಿಂದಾಗಿ ಕುಂಭಾಶಿ ಅಥವಾ ಕೋಟೇಶ್ವರದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿದೆ. ಗೋಪಾಡಿ ಪಂಚಾಯ್ತಿಯಷ್ಟೇ ಜನಸಂಖ್ಯೆ ಬೀಜಾಡಿ ಗ್ರಾ.ಪಂ.ನಲ್ಲೂ ಜನಸಂಖ್ಯೆ ಇದ್ದರೂ ಈ ವ್ಯಾಪ್ತಿಯ ನಿವಾಸಿಗಳು ದೂರದ ಕುಂಭಾಶಿ ಹಾಗೂ ಕೋಟೇಶ್ವರ ಆರೋಗ್ಯ ಕೇಂದ್ರ ಅವಲಂಬಿಸಬೇಕಾಗಿದೆ.
ಈಡೇರದ ಬೇಡಿಕೆ
ಕಳೆದ 1 ವರುಷದಿಂದ ಆರೋಗ್ಯ ಉಪ ಕೇಂದ್ರದ ಬಗ್ಗೆ ಗ್ರಾ.ಪಂ.ವಿಶೇಷ ಸಭೆಯಲ್ಲಿ ನಿರ್ಣಯ ಮಾಡಿ ಇಲಾಖೆಗೆ ಮನವಿ ಮಾಡಲಾಗಿದೆ. ಅರೋಗ್ಯ ಇಲಾಖೆಯ ಅಧಿ ಕಾರಿಗಳಿಗೆ ಮನವಿ ಸಲ್ಲಿಸಿ ಗೋಪಾಡಿಯಲ್ಲಿರುವ ಆರೋಗ್ಯ ಉಪಕೇಂದ್ರಕ್ಕೆ ದಾದಿಯರು ಹಾಗೂ ವೈದ್ಯರ ನೇಮಕಾತಿ ಬಗ್ಗೆ ಗಮನ ಸೆಳೆಯಲಾಗಿದ್ದರೂ ಯಾವುದೇ ಕ್ರಮವನ್ನು ಇಲಾಖೆ ಕೈಗೊಂಡಿಲ್ಲ.
- ಸರಸ್ವತಿ ಜಿ. ಪುತ್ರನ್,ಅಧ್ಯಕ್ಷರು, ಗ್ರಾ.ಪಂ. ಗೋಪಾಡಿ
ಮೇಲಧಿಕಾರಿಗಳಿಗೆ ತಿಳಿಸಿ ಮುಂದಿನ ಕ್ರಮ
ಬೀಜಾಡಿ ಆರೋಗ್ಯ ಉಪಕೇಂದ್ರ ಮುಚ್ಚಿರುವ ಬಗ್ಗೆ ಗಮನಕ್ಕೆ ಬಂದಿದೆ ಅಲ್ಲಿನ ಸಮಸ್ಯೆ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಡಾ| ನಾಗಭೂಷಣ ಉಡುಪ, ಕುಂದಾಪುರ ತಾಲೂಕು ವೈದ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ