ಬೀಜಾಡಿ ಕಡಲ ತೀರ: ಮದ್ಯದ ಬಾಟಲಿಗಳ ಆಗರ


Team Udayavani, Jun 6, 2019, 6:10 AM IST

bottle

ಕುಂದಾಪುರ: ಸಮುದ್ರ ತಟಗಳನ್ನ ರಕ್ಷಿಸಿ! ಹೀಗೊಂದು ಕೂಗು ಎದ್ದಿದೆ. ಕಾರ್ಖಾನೆಗಳ ತ್ಯಾಜ್ಯ ನೀರು ಜಲಚರಗಳಿಗೆ ಆಪತ್ತು ತಂದೊಡ್ಡುತ್ತಿರುವಂತೆಯೇ ಸಮುದ್ರ ಕಲ್ಮಶದ ಜತೆಗೆ ಮನುಷ್ಯ ಕುಡಿದು ಎಸೆಯುವ ಬಾಟಲಿಗಳೂ ಇನ್ನೊಂದು ದೊಡ್ಡ ಅಪಾಯ ತಂದೊಡ್ಡುತ್ತಿವೆ.

ಮೋಜು ಮಸ್ತಿಗೆಂದೇ ಸಮುದ್ರ ತೀರಕ್ಕೆ ಬರುವ ಕೆಲವರು ಕುಡಿದು ಎಸೆದು ಹೋಗುವ ಮದ್ಯದ ಬಾಟಲಿಗಳ ರಾಶಿಯನ್ನು ಶುಚಿಗೊಳಿಸುವುದೇ ಸ್ವಯಂಸೇವಕರಿಗೆ ದೊಡ್ಡ ತಲೆ ನೋವಾಗಿದೆ. ಪ್ರತೀ ವಾರ ಮದ್ಯದ ಬಾಟಲಿಗಳ ಪ್ರಮಾಣ ಹೆಚ್ಚುತ್ತಲೇ ಹೋಗುತ್ತಿದೆ. ಈ ವಿಚಾರದಲ್ಲಿ ಪ್ರವಾಸಿಗರೂ ಸ್ವಯಂ ಜಾಗೃತರಾಗುತ್ತಿಲ್ಲ.

ಹಲವು ಅಭಿಯಾನ
ಸುತ್ತಮುತ್ತಲಿನ ಪರಿಸರ ಸುಂದರ ವಾಗಿರಬೇಕೆಂದು ಹೊರಟವರು ಕರಾವಳಿ ಫ್ರೆಂಡ್ಸ್‌ ಬೀಜಾಡಿ. ಬೀಜಾಡಿ, ಗೋಪಾಡಿ ಗ್ರಾ.ಪಂ., ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಜತೆ ಸೇರಿ ಬೀಜಾಡಿ ಬೀಚ್‌ ಅನ್ನು ಚೊಕ್ಕಟಗೊಳಿಸಿದ ಶ್ರೇಯ ಇವರಿಗಿದೆ. ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಸತತ 15 ವಾರಗಳಿಂದ ಸ್ವತ್ಛತಾ ಕಾರ್ಯ ನಡೆಸುತ್ತಿದೆ. ಇದರ ಪ್ರೇರಣೆಯಿಂದ ಸಂಘಟನೆಗಳು ಸ್ವತ್ಛತೆಯೆಡೆಗೆ ಮನ ಮಾಡುತ್ತಿವೆ.

ಶ್ರಮದ ಫ‌ಲ
ಕರಾವಳಿ ಫ್ರೆಂಡ್ಸ್‌ ಸ್ವತ್ಛತೆಗಾಗಿ ಒಂದರ್ಥದಲ್ಲಿ ರಕ್ತವನ್ನೇ ಹರಿಸಿದ್ದಾರೆ. ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ನ ಹಲವರು 7-8 ಬ್ಯಾಗ್‌ ಆಗುವಷ್ಟು ಮದ್ಯದ ಬಾಟಲಿಗಳನ್ನು 200 ಮೀಟರ್‌ ಅಡಿಯಲ್ಲಿ ಸಂಗ್ರಹಿಸಿದ್ದಾರೆ. ಈ ವೇಳೆ ಸ್ವಯಂಸೇವಕರಿಗೆ ಒಡೆದು ಹೋದ ಬಾಟಲಿಯಿಂದ ಗಾಯಗಳಾಗಿವೆ. ಹೀಗೆ ರಾಶಿ ರಾಶಿ ಬಾಟಲುಗಳಿಂದ ನಮ್ಮ ಸಮುದ್ರ ತಟವನ್ನು ನಡೆಯಲಾಗದ ಜಾಗವಾಗಿಸುತ್ತಿರುವುದರ ಬಗ್ಗೆ ಜನತೆ ಗಮನಹರಿಸಬೇಕು. ಈ ಪರಿಸರ ಕೆಟ್ಟ ಕೆಲಸಗಳಿಂದ ಮುಕ್ತವಾಗಿರಬೇಕೆನ್ನುವ ಆಗ್ರಹ ಸ್ಥಳೀಯರದ್ದು.

ನಡೆಯಲು ಅಸಾಧ್ಯ
ಗಾಜಿನ ಬಾಟಲಿಗಳು, ಪ್ಲಾಸ್ಟಿಕ್‌ ಲೋಟಗಳು, ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ಬರುವ ಪಾನೀಯಗಳ ಹಾವಳಿಯಿಂದಾಗಿ ಸಮುದ್ರ ತಟದಲ್ಲಿ ತ್ಯಾಜ್ಯದ ರಾಶಿಯಾಗಿದೆ. ಜತೆಗೆ ಕುಡಿತದ ಮಜಾ ತೆಗೆದುಕೊಳ್ಳುವ ಕೆಲವರಿಂದ ಇತರ ಪ್ರವಾಸಿಗರಿಗೆ ತೊಂದರೆ ಎದುರಾಗುತ್ತಿದೆ. ಇದು ಪ್ರವಾಸೋದ್ಯಮದ ಮೇಲೂ ಹೊಡೆತ ನೀಡುತ್ತದೆ.

ಎಲ್ಲೆಂದರಲ್ಲಿ ಬಾಟಲಿಗಳು, ಒಡೆದ ಗಾಜಿನ ತುಂಡುಗಳು, ಚೂರಾಗುವ ಪ್ಲಾಸ್ಟಿಕ್‌ ಲೋಟಗಳು, ಟೆಟ್ರಾಪ್ಯಾಕ್‌ನಲ್ಲಿ ಬರುವ ಪಾನೀಯಗಳ ತ್ಯಾಜ್ಯ ಎಸೆಯಲು ಸಮುದ್ರ ತಟವೇ ಬೇಕೇ? ಮಕ್ಕಳ ಆಟಕ್ಕೆ, ಮನೆಯವರ ವಾಯು ವಿಹಾರಕ್ಕೆ ಸಮುದ್ರತಟದ ಅವಶ್ಯಕತೆ ಇಲ್ಲವೇ? ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು.

ಕಸದ ಬುಟ್ಟಿ ಇಡಲಿ
ಬೀಜಾಡಿ ಬೀಚ್‌ ತಟದಲ್ಲಿ ಕಂಡ ಹೇವರಿಕೆ ಆಗುವಂತಹ ಬಾಟಲಿಗಳ ರಾಶಿಗಳು, ಪ್ಲಾಸ್ಟಿಕ್‌ ಲೋಟದ ಚೂರುಗಳು ನಿಲ್ಲಬೇಕು. ಇದಕ್ಕಾಗಿ ಕಾನೂನು ಪಾಲನೆ ಅವಶ್ಯಕ. ಸಮುದ್ರತಟಗಳು ಕಸದ ತೊಟ್ಟಿ ಆಗದೆ, ಬಾರ್‌ ಆಗದೆ, ಎಲ್ಲರ ಪ್ರೀತಿಯ ಕಡಲಾಗಲಿ. ಮಕ್ಕಳ ಆಡದ ಮನೆಗಳಾಗಲಿ. ಇದಾಗಲು ಬಾಟಲಿಗಳು, ಪ್ಲಾಸ್ಟಿಕ್‌ ಲೋಟಗಳು ಎಲ್ಲೆಂದರಲ್ಲಿ ಬಿಸಾಡಬಾರದೆಂಬ ಕಾನೂನು ಪಾಲನೆ ಹೆಚ್ಚಾಗಬೇಕು. ಸ್ಥಳೀಯಾಡಳಿತಗಳು ಕಸದ ಬುಟ್ಟಿ ಇಡಬೇಕು.
-ಭರತ್‌ ಬಂಗೇರ, ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಸದಸ್ಯ

ಜೀವಜಂತುಗಳಿಗೆ ತೊಂದರೆ
ಸಮುದ್ರದ ಜೀವರಾಶಿಗಳು ಮೈಕ್ರೋ ಪ್ಲಾಸ್ಟಿಕ್‌ನಿಂದ ಘಾಸಿಗೊಳ್ಳುತ್ತಿವೆ. ಸಮುದ್ರ ತಟದಲ್ಲಿ ಎತ್ತಲೂ ಆಗದೆ ಅಲ್ಲೇ ಪುಡಿ ಪುಡಿ ಆಗುವ ತೆಳು ಪ್ಲಾಸ್ಟಿಕ್‌ ಲೋಟಗಳು ಸಮುದ್ರ ತಟವನ್ನು ಕಸದ ರಾಶಿಯಷ್ಟೇ ಆಗಿಸದೆ, ಸಮುದ್ರವನ್ನ ಅದರ ಜೀವರಾಶಿಯನ್ನ ಮುಗಿಸುವ ಹಂತದಲ್ಲಿದ್ದಾವೆ. ಮೀನುಗಳ ಹೊಟ್ಟೆಯಿಂದ ಮನುಷ್ಯನ ಹೊಟ್ಟೆಗೆ ರವಾನೆ ಆಗುತ್ತದೆ ಇಂತಹ ಮೈಕ್ರೋ ಪ್ಲಾಸ್ಟಿಕ್‌ ಗಳು.
-ಡಾ| ರಶ್ಮಿ ಕುಂದಾಪುರ, ವೈದ್ಯಕೀಯ ಕಾಲೇಜಿನ ಉಪನ್ಯಾಸಕರು

ಟಾಪ್ ನ್ಯೂಸ್

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ ಅಡಿಗೆ ಸಿಲುಕಿದ ಬೈಕ್; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.