ಬೆಳ್ಮಣ್ ರಸ್ತೆ ವಿಭಾಜಕ ಇನ್ನೂ ಅಸಮರ್ಪಕ
ಜಂಕ್ಷನ್ನಲ್ಲಿ ಅಳವಡಿಸಲಾಗಿದೆ ಅವೈಜ್ಞಾನಿಕ ಡಿವೈಡರ್
Team Udayavani, Oct 20, 2019, 5:19 AM IST
ಬೆಳ್ಮಣ್: ಬೆಳ್ಮಣ್ನಲ್ಲಿ ಅಳವಡಿಸಲಾದ ರಸ್ತೆ ವಿಭಾಜಕದ ಬಗ್ಗೆ ಸ್ಥಳೀಯರು ಅಸಮಾಧಾನಗೊಂಡಿದ್ದು ಈ ಡಿವೈಡರ್ಗಳಿಂದಾಗಿಯೇ ವಾಹನ ಸವಾರರು ಹಾಗೂ ಪಾದಚಾರಿಗಳ ನಡುವೆ ಸಂಚಾರದ ಗೊಂದಲ ಏರ್ಪಟ್ಟಿದೆ.
ಬೆಳ್ಮಣ್ಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದ ಇಲ್ಲಿನ ರೋಟರಿ ಸಂಸ್ಥೆ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರದ ನಿರಾಳತೆಗೆ ರಸ್ತೆ ವಿಭಾಜಕ ವನ್ನೂ ಅಳವಡಿಸಿ ಸೇವಾತತ್ಪರತೆ ಮೆರೆದಿತ್ತು. ಆದರೆ ಆ ವ್ಯವಸ್ಥೆಯನ್ನು ಪಂಚಾಯತ್ ಆಡಳಿತ ಈ ವರೆಗೂ ಸ್ವೀಕರಿಸದೆ ಇರುವುದರಿಂದ ಅಳವಡಿ ಸಿದ್ದ ವಿಭಾಜಕಗಳು ಸೂಕ್ತ ನಿರ್ವಹಣೆ ಕಾಣದೆ ವಾಹನಗಳು ವಿಭಾಜಕದ ಮೇಲೆಯೇ ಸಂಚರಿಸಿ ಬೆಂಡಾಗಿ ನೆಲಕ್ಕೊರಗಿವೆ.
ಪಂಚಾಯತ್ ಆಡಳಿತ ತಾನಾಗಿ ಮಾಡುವುದಿಲ್ಲ, ಸೇವಾ ಸಂಸ್ಥೆಸದುದ್ದೇಶದಿಂದ ನೀಡಿದ್ದ ಕೊಡುಗೆ ನಿರ್ವಹಿಸುವಲ್ಲಿಯೂ ವಿಫಲವಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.
ಗೊಂದಲದ ಗೂಡು
ಉಡುಪಿ, ಕಾರ್ಕಳ, ಮೂಡುಬಿದಿರೆ ಕಟೀಲು, ಮಂಗಳೂರು ಕಡೆಗಳಿಗೆ ಸಂಚರಿಸುತ್ತಿರುವ ಜನರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಬೆಳ್ಮಣ್ ಜಂಕ್ಷನ್ ದಾಟಿಯೇ ಸಾಗಬೇಕಿದೆ. ಇಲ್ಲಿ ಬಸ್ ಬದಲಾಯಿಸುವ ಸಹಸ್ರಾರು ಮಂದಿ ಪ್ರತಿನಿತ್ಯ ತಮ್ಮ ಖಾಸಗಿ ವಾಹನಗಳ ಮೂಲಕ ಈ ಜಂಕ್ಷನ್ ದಾಟಿಯೇ ಸಾಗುತ್ತಾರೆ. ಇಲ್ಲಿ ಶಿರ್ವ, ಕಾರ್ಕಳ, ಮುಂಡ್ಕೂರು, ಪಡುಬಿದ್ರಿ ಕಡೆಗಳಿಂದ ಬರುವ ವಾಹನಗಳು ಒಟ್ಟಾದಾಗ ಒಂದಿಷ್ಟು ಗೊಂದಲ ಏರ್ಪಡುವುದು ಸಹಜ.ಹಾಗಾಗಿ ಇಲ್ಲಿ ಡಿವೈಡರ್ ಆಳವಡಿಸಲಾಗಿದೆ ಎನ್ನುವುದು ಬೆಳ್ಮಣ್ ರೋಟರಿಯ ವಾದ. ಆದರೆ ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎನ್ನುವುದು ಪಂಚಾಯತ್ ಆಡಳಿತದ ವಾದ. ಇದರಿಂದ ಬೆಳ್ಮಣ್ ರೋಟರಿಯ ಪರಿಕಲ್ಪನೆಯ ಕನಸು ನುಚ್ಚುನೂರಾಗಿದೆ.
ಈ ಉಪಯುಕ್ತ ವಿಭಾಜಕದ ಬಗ್ಗೆ ವಾಹನ ಸವಾರರು, ಪಾದಚಾರಿಗಳಿಗೆ ಜಾಗೃತಿ ಮೂಡಿಸಬೇಕಾಗಿದ್ದ ಬೆಳ್ಮಣ್ ಪಂಚಾಯತ್ ಈ ರೀತಿಯ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಬೆಳ್ಮಣ್ ರೋಟರಿ ನೇತೃತ್ವದಲ್ಲಿ ಕಾರ್ಕಳ ಶಾಸಕರ ಅನುದಾನದ ನೆರವಿನೊಂದಿಗೆ ನಿರ್ಮಾಣಗೊಂಡ ಸುಂದರ ಪಾರ್ಕಿಂಗ್ ವ್ಯವಸ್ಥೆಯೂ ನಿರ್ಲಕ್ಷéಕ್ಕೊಳಗಾಗಿದೆ. ನಿರ್ವಹಿಸಬೇಕಾಗಿದ್ದ ಗ್ರಾ.ಪಂ. ಆಡಳಿತ ಕ್ಯಾರೇ ಅನ್ನದಿರುವುದರ ಜತೆಗೆ ವಾಗ್ಧಾನ ಮಾಡಿದ್ದ 2 ಲ. ರೂ. ಅನುದಾನ ಇನ್ನೂ ನೀಡದೆ ಮೀನಮೇಷ ಎಣಿಸುತ್ತಿದೆ. ಪಾರ್ಕಿಂಗ್, ರಸ್ತೆ ವಿಭಾಜಕಕ್ಕೆ ಲೋಕೋಪಯೋಗಿ ಇಲಾಖೆ, ಕಾರ್ಕಳ ತಹಶೀಲ್ದಾರ್, ಕಾರ್ಕಳ ಪೊಲೀಸ್ ಠಾಣೆಯಲ್ಲಿ ರೋಟರಿ ಪರವಾನಿಗೆ ಪಡೆದಿತ್ತು.
ಪಂಚಾಯತ್ ಬೆಂಬಲ ನೀಡಲಿ
ಬೆಳ್ಮಣ್ಗೆ ಸುಂದರ ಪಾರ್ಕಿಂಗ್ ಹಾಗೂ ವಿಭಾಜಕದ ವ್ಯವಸ್ಥೆ ಕಲ್ಪಿಸಿದ್ದರೂ ಪಂಚಾಯತ್ ಆಡಳಿತ ಇನ್ನೂ ಹಸ್ತಾಂತರ ಪಡೆಯದೆ ಯೋಜನೆಯ ಅರ್ಥ ಕೆಡಿಸಿದೆ. ರೋಟರಿಯಿಂದ ಇನ್ನೂ ಹಲವು ಯೋಜನೆ, ಯೋಚನೆಗಳಿದ್ದರೂ ಪಂಚಾಯತ್ನ ಈ ನಿಲುವು ಬೇಸರ ತಂದಿದೆ. ಜನೋಪಯೋಗಿ ಕೆಲಸಗಳಿಗೆ ಪಂಚಾಯತ್ ಬೆಂಬಲ ನೀಡಬೇಕು.
-ರನೀಶ್ ಶೆಟ್ಟಿ,ಬೆಳ್ಮಣ್ ರೋಟರಿಯ ನಿಕಟಪೂರ್ವ ಅಧ್ಯಕ್ಷ
ಕಾರ್ಯಪ್ರವೃತ್ತರಾಗುತ್ತೇವೆ
ಬೆಳ್ಮಣ್ ರೋಟರಿಯ ಯೋಜನೆಗಳು ಶ್ಲಾಘನೀಯ, ಪಾರ್ಕಿಂಗ್ ವ್ಯವಸ್ಥೆ ಹಾಗೂ ವಿಭಾಜಕಗಳ ವ್ಯವಸ್ಥೆ ಪಂಚಾಯತ್ಗೆ ಹಸ್ತಾಂತರವಾಗಿಲ್ಲ. ಕೂಡಲೇ ಹಸ್ತಾಂತರಕ್ಕೆ ಪಡೆದು ಕಾರ್ಯ ಪ್ರವೃತ್ತರಾಗುತ್ತೇವೆ.
-ವಾರಿಜಾ, ಬೆಳ್ಮಣ್ ಗ್ರಾಮ ಪಂಚಾಯತ್ ಅಧ್ಯಕ್ಷೆ
– ಶರತ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ