ರಸ್ತೆ ತಿರುವಿನ ಬಂಡೆ ತೆರವು
ಬೆಳ್ಮಣ್-ಶಿರ್ವ ರಸ್ತೆ: ಅಪಘಾತ ವಲಯಕ್ಕೆ ಮುಕ್ತಿ
Team Udayavani, Dec 16, 2019, 5:53 AM IST
ಬೆಳ್ಮಣ್: ಶಿರ್ವ-ಬೆಳ್ಮಣ್ ರಸ್ತೆಯ ಪುನಾರು ಶ್ರೀ ಶಾಸ್ತಾವು ಬ್ರಹ್ಮಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿ ತಿರುವಿನಲ್ಲಿ ನಿರಂತರ ಅಪಘಾತ ನಡೆಯುತ್ತಿದ್ದು ಇತ್ತೀಚೆಗೆ ಸೂಡದ ಬೈಕ್ ಸವಾರ ಪ್ರಾಣ ಕಳೆದುಕೊಂಡ ಘಟನೆ ಜೀವಂತವಾಗಿರುವಾಗಲೇ ಈ ತಿರುವಿನ ಅಪಘಾತಕ್ಕೆ ಕಾರಣವಾದ ಬಂಡೆ ತೆರವು ಸಹಿತ ರಸ್ತೆ ವಿಸ್ತರಣೆಯನ್ನು ಸ್ಥಳೀಯ ಸಾಮಾಜಿಕ ಕಳಕಳಿಯ ಜನರು ಸೇರಿ ನಡೆಸಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಸ್ಥಳೀಯರಾದ ರಂಜಿತ್ ಕೆ.ಎಸ್. ಹಾಗೂ ಉಮೇಶ್ ಪ್ರಭು ಅವರು ಇತರರ ಸಹಕಾರದಿಂದ ಜೆಸಿಬಿ ಬಳಸಿ ತೊಂದರೆಯಾಗುತ್ತಿ¤ರುವ ತಿರುವಿನ ಬಂಡೆ ತೆರವುಗೊಳಿಸಿ ರಸ್ತೆ ವಿಸ್ತರಣೆ ನಡೆಸಿ ವಾಹನ ಸಂಚಾರ ನಿರಾತಂಕ ಗೊಳಿಸಿದ್ದಾರೆ. ಈ ಸಮಾಜಮುಖೀ ಚಿಂತನೆಗೆ ಜನಾರ್ದನ ತಂತ್ರಿ, ವಿಶ್ವನಾಥ ಪಾಟ್ಕರ್, ಮನೋಜ್, ಮಾಧವ ಪ್ರಭು, ರೋನಿ ಫೆರ್ನಾಂಡಿಸ್, ವಾದಿರಾಜ ಉಡುಪ, ಜಯರಾಮ ಪ್ರಭು, ಕೇಶವ ಆಚಾರ್ಯ, ಶಿವಾನಂದ ಆಚಾರ್ಯ, ಶಶಿಧರ ನಾಯಕ್, ವೆಂಕಟರಮಣ ಪ್ರಭು, ಸುಬ್ರಹ್ಮಣ್ಯ ಮಾಸ್ಟರ್, ಶಾಂತಾ ತಂತ್ರಿ, ಉಷಾ ನಾಯಕ್, ಹೆನ್ರಿ ಮಥಾಯಸ್, ಸುಸಾಂತ್,ಜಿ.ಕೆ. ನಾಯಕ್ ಕೈ ಜೋಡಿಸಿದ್ದರು.
ಮುಂದಿನ ದಿನಗಳಲ್ಲಿ ಈ ಭಾಗದ ಬಸ್ ಚಾಲಕರು ಪ್ರಯಾಣಿಕರನ್ನು ಹತ್ತಿ ಇಳಿಸುವಾಗ ಈ ಜಂಕ್ಷನ್ನಲ್ಲಿ ಡಾಮರು ರಸ್ತೆ ಬಿಟ್ಟು ನಿಲ್ಲಿಸಿ ಇತರ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕೆಂದು ಇಲ್ಲಿನ ಸಂಘಟಕರು ವಿನಂತಿಸಿದ್ದಾರೆ.
ಈ ಭಾಗದ ಸಾಮಾಜಿಕ ಕಳಕಳಿಯ ಚಿಂತನೆಗೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.