ಬೆಳ್ಮಣ್: ಪೊದೆಯಿಂದ ಆವೃತಗೊಂಡಿದೆ ಕೃಷಿ ಇಲಾಖೆ ಕಟ್ಟಡ
Team Udayavani, May 20, 2019, 6:28 AM IST
ಬೆಳ್ಮಣ್: ಇಲ್ಲಿನ ಕೃಷಿಕರ ಅನುಕೂಲಕ್ಕೆಂದು ನಿರ್ಮಾಣವಾಗಿದ್ದ ಕೃಷಿ ಇಲಾಖೆಯ ಕಟ್ಟಡವೊಂದು ಪಾಳು ಬಿದ್ದಿದ್ದು ಗಿಡಗಂಟಿಗಳಿಂದ ಮುಚ್ಚಿ ಹೋಗಿದೆ.
ಬೆಳ್ಮಣ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರಲ್ ಪಾದೆ ಎಂಬಲ್ಲಿ ನಿರ್ಮಾಣಗೊಂಡ ಈ ಕಟ್ಟಡ ಮಾಹಿತಿ ಕೇಂದ್ರವಾಗಿ ಕಾರ್ಯಾಚರಿಸುತ್ತಿತ್ತು. ಆದರೆ ಇದರ ಬಗ್ಗೆ ಇಲಾಖೆ, ಪಂಚಾಯತ್ ಹೊಂದಾಣಿಕೆ ಕೊರತೆಯಿಂದ ಕೇಂದ್ರ ನಿರ್ಲಕ್ಷಕ್ಕೆ ಒಳಗಾಯಿತು. ಪರಿಣಾಮ ಸುಮಾರು 10 ವರ್ಷದಿಂದ ಪಾಳುಬಿದ್ದಿದೆ.
ಈ ಪಾಳು ಬಿದ್ದ ಕಟ್ಟಡದಲ್ಲಿ ವಿದ್ಯುತ್ ಸಂಪರ್ಕವಿದ್ದರೂ ವಿದ್ಯುತ್ ಉಪಕರಣಗಳು ಕೆಟ್ಟು ಹೋಗಿವೆ. ಕಿಟಕಿ, ಬಾಗಿಲುಗಳು ಗೆದ್ದಲು ಹಿಡಿದು ಅವಶೇಷದಂತಿದೆ.
ರೈತ ಮಾಹಿತಿ ಕೇಂದ್ರ ಮಾಡಲು ಮನವಿ
ಬೆಳ್ಮಣ್, ನಂದಳಿಕೆ, ಸೂಡ ಸಹಿತ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಕೃಷಿಕರಿದ್ದು, ಕೃಷಿ ಮಾಹಿತಿ ಕೇಂದ್ರವನ್ನಾಗಿ ಮಾಡಬಹುದಿತ್ತು ಎಂಬುದು ಇಲ್ಲಿನವರ ಅನಿಸಿಕೆ. ಆದರೆ ಇದರ ನಿರ್ವಹಣೆಗೆ ಆಡಳಿತ ಮುಂದಾಗದೆ ಇರುವುದು ಕೃಷಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸರಕಾರ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕೋಟಿಗಟ್ಟಲೆ ಹಣ ಸುರಿಸುವ ಬದಲು ಇಂತಹ ಕಟ್ಟಡಗಳನ್ನು ಕಾಪಾಡಲು ಮನಸ್ಸು ಮಾಡಬೇಕಾಗಿದೆ ಎನ್ನುವುದೂ ನಾಗರಿಕರ ಆಶಯ.
ಸೂಕ್ತ ಕ್ರಮ
ಕೃಷಿ ಇಲಾಖೆಗೆ ಸಂಬಂದಿಸಿದ ಕಟ್ಟಡ ಇದಾಗಿದ್ದು ನಿರ್ವಹಣೆಯ ಅಗತ್ಯವಿದೆ. ಈಗಾಗಲೇ ನಳ್ಳಿ ನೀರಿನ ಸಂಪರ್ಕವನ್ನು ಕಲ್ಪಿಸಿದ್ದೇವೆ ಮುಂದಿನ ದಿನಗಳಲ್ಲಿ ನಿರ್ವಹಣೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
-ಪ್ರಕಾಶ್, ಬೆಳ್ಮಣ್ ಗ್ರಾ.ಪಂ ಪಿಡಿಒ
ಇಲಾಖೆಯ ಉದಾಸೀನತೆ
ಈ ಕಟ್ಟಡವೂ ಸುಂದರವಾಗಿದ್ದರೂ ಇಲಾಖೆ ಇಲ್ಲಿ ನಿರ್ವಹಣೆಯನ್ನು ಮಾಡುವಲ್ಲಿ ಉದಾಸೀನತೆ ತೋರಿಸುತ್ತಿದೆ. ಸರಿಯಾಗಿ ನಿರ್ವಹಣೆ ಮಾಡಿ ಕೃಷಿಕರ ಉಪಯೋಗಕ್ಕೆ ಬರುವಂತಾಗಲಿ.
-ಸಂದೀಪ್ಕುಮಾರ್, ಗ್ರಾಮಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ