ಶ್ರೀಕೃಷ್ಣ ಮಠದಲ್ಲಿ ಭಾಗೀರಥಿ ಜಯಂತಿ
Team Udayavani, Jun 13, 2019, 5:00 AM IST
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಬುಧವಾರ ಭಾಗೀರಥಿ ಜಯಂತಿ ಹಾಗೂ ಪ್ರಸಕ್ತ ಸಾಲಿನ ಕೊನೆಯ ಬ್ರಹ್ಮರಥೋತ್ಸವ ಸೇವೆ ನಡೆಯಿತು. ಮಧ್ವ ಸರೋವರದಲ್ಲಿನ ಭಾಗೀರಥಿ (ಗಂಗಾದೇವಿ) ಗುಡಿಯಲ್ಲಿ ಪ್ರತಿವರ್ಷ ಭಾಗೀರಥಿ ಜಯಂತಿ ಆಚರಿಸಲಾಗುತ್ತದೆ. ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಗಂಗೆಗೆ ಆರತಿಯೆತ್ತಿ, ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು, ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಗಳು ಉಪಸ್ಥಿತರಿದ್ದರು.
ಉತ್ಸವ ಮೂರ್ತಿ ಗರ್ಭಗುಡಿಗೆ
ಉಡುಪಿ ಕೃಷ್ಣನಿಗೆ ಮಳೆಗಾಲವನ್ನು ಹೊರತುಪಡಿಸಿ ಪ್ರತಿದಿನವೂ ರಥೋತ್ಸವ ನಡೆಯುತ್ತದೆ. ಮಳೆಗಾಲದಲ್ಲಿ ಕೃಷ್ಣನ ಉತ್ಸವ ಮೂರ್ತಿಯನ್ನು ಗರ್ಭಗುಡಿಗೆ ಸೇರಿಸ ಲಾಗುತ್ತದೆ. ಅದನ್ನು 5 ತಿಂಗಳ ಅನಂತರ ಉತ್ಥಾನ ದ್ವಾದಶಿಯಂದು ಹೊರಗೆ ತಂದು ನಿತ್ಯೋತ್ಸವ ಆರಂಭಿಸಲಾಗುತ್ತದೆ.
ವಿಶೇಷ ತೊಟ್ಟಿಲು ಸೇವೆ
ಮಧ್ವಸರೋವರದ ದಕ್ಷಿಣ ಮೂಲೆ ಯಲ್ಲಿರುವ ಭಾಗೀರಥಿ ಗುಡಿ ಯಲ್ಲಿ ಬೆಳಗ್ಗೆ ಪಂಚಾಮೃತ ಅಭಿಷೇಕ ನಡೆಸಲಾ ಯಿತು. ಸಂಜೆ ರಥಬೀದಿಯಲ್ಲಿ ವರ್ಷದ ಕೊನೆಯ ಬ್ರಹ್ಮರಥೋತ್ಸವ ನಡೆಸಿ, ಕೃಷ್ಣನ ಉತ್ಸವಮೂರ್ತಿ ಭಾಗೀರಥಿ ಗುಡಿಗೆ ತಂದು ಅಷ್ಟಾವಧಾನ ಸೇವೆ, ತೊಟ್ಟಿಲು ಸೇವೆಗಳನ್ನು ನಡೆಸಲಾ ಯಿತು. ಮಳೆಗಾಗಿ ಪೂಜೆ, ಪ್ರಾರ್ಥನೆ ನಡೆ ಯುತ್ತಿರುವ ವೇಳೆ ಕಾಕತಾಳಿ ಯವೋ ಎಂಬಂತೆ ಹೊರಗೆ ಮಳೆ ಸುರಿದಿದೆ.
ಈ ವರ್ಷ ಮಳೆಗಾಲ ವಿಳಂಬವಾಗಿದೆ. ಇದರಿಂದಾಗಿ ನಾಡಿಗೆ ತೀವ್ರ ನೀರಿನ ಸಮಸ್ಯೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾಗೀರಥಿ ಸನ್ನಿಧಿಯಲ್ಲಿ ಸಮೃದ್ಧ ಮಳೆ ಬೆಳೆಗಾಗಿ ಪ್ರಾರ್ಥಿಸಲಾಗಿದೆ.
ವಿದ್ಯಾಧೀಶತೀರ್ಥ ಶ್ರೀಪಾದರು, ಪರ್ಯಾಯ , ಪಲಿಮಾರು ಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ