ಬೈಕ್ಕೆ ರಿಕ್ಷಾ ಢಿಕ್ಕಿ: ಖ್ಯಾತ ಕಬಡ್ಡಿ ಆಟಗಾರ ಸಾವು
Team Udayavani, Jun 3, 2018, 6:00 AM IST
ಪಡುಬಿದ್ರಿ: ತೆಂಕ ಗ್ರಾಮದ ಅಮೀನ್ ಮೂಲ ಸ್ಥಾನದ ಬಳಿ ಪಡುವಣ ಮೀನುಗಾರಿಕಾ ರಸ್ತೆಯಲ್ಲಿ ಜೂ. 1ರಂದು ಮಧ್ಯರಾತ್ರಿ ರಿಕ್ಷಾವೊಂದು ಬೈಕ್ಗೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ, ರಾಜ್ಯ ಮಟ್ಟದ ಕಬಡ್ಡಿ ಆಟಗಾರ, ಎರ್ಮಾಳು ಬಡಾ ಗ್ರಾಮದ ಭಾರತ್ ನಗರ ನಿವಾಸಿ ಸುಜಿತ್ ಆರ್. ಮೆಂಡನ್ (21) ಸಾವನ್ನಪ್ಪಿದ್ದಾರೆ.
ಉಚ್ಚಿಲದಿಂದ ಪಡುಬಿದ್ರಿ ಕಡೆಗೆ ಬರು ತ್ತಿದ್ದ ರಿಕ್ಷಾ ಚಾಲಕನ ಅಜಾಗರೂ ಕ ತೆಯ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಢಿಕ್ಕಿ ಪರಿಣಾಮ ರಸ್ತೆ ಗುರುಳಿದ ಸುಜಿತ್ ತಲೆಯು ಪಕ್ಕದಲ್ಲಿದ್ದ ಕಲ್ಲಿಗೆ ಬಡಿದಿದೆ. ಅವರನ್ನು ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ಒಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ.
ಶ್ರೇಷ್ಠ ಅಮೆಚೂರ್ ಕಬಡ್ಡಿ ಆಟಗಾರ
ಸುಜಿತ್ ಅವರು ಬಡಾ ಗ್ರಾಮದ ರಾಮಾಂಜನೇಯ ನ್ಪೋರ್ಟ್ಸ್ ಕ್ಲಬ್ ಮತ್ತು ಮಹಾಲಕ್ಷ್ಮೀ ತಂಡಗಳ ಸದಸ್ಯನಾಗಿದ್ದು, ಶ್ರೇಷ್ಠ ಅಮೆಚೂರ್ ಕಬಡ್ಡಿ ಆಟಗಾರರಾಗಿದ್ದರು. ಹೊರ ಜಿಲ್ಲೆಗಳ ತಂಡದ ನಾಯಕನಾಗಿಯೂ ಪ್ರತಿ ನಿಧಿಸಿದ್ದರು. ಕಬಡ್ಡಿಯಲ್ಲಿ ಹೆಸರಾಂತ ಕಾರ್ನರ್ ಆಟಗಾರನಾಗಿ ಮಿಂಚಿದ್ದ ಅವರು ಪಿಯುಸಿಯನ್ನು ಎರ್ಮಾಳು, ಅದಮಾರುಗಳಲ್ಲಿ ಮುಗಿಸಿದ್ದರು. ಆ ಸಂದ ರ್ಭ ದಲ್ಲೇ ಕಬಡ್ಡಿಯಲ್ಲಿ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದರು ಹಾಗೂ ರಾಜ್ಯ ತಂಡವನ್ನೂ ಪ್ರತಿನಿಧಿಸಿ ಪಂಜಾಬ್ನಲ್ಲಿ ಆಟವಾಡಿದ್ದರು. ಸಂಜೆ ಕಾಲೇಜು ಶಿಕ್ಷಣವನ್ನೂ, ಬಿಡುವಿನ ವೇಳೆ ಮೀನುಗಾರಿಕಾ ವೃತ್ತಿಯನ್ನೂ ಮಾಡಿದ್ದ ಶ್ರಮ ಜೀವಿಯಾಗಿದ್ದರು. ಮೀನುಗಾರ ವೃತ್ತಿಯ ರಮೇಶ್ ಮೆಂಡನ್ ಯಶೋದಾ ದಂಪತಿಯ ಮೂವರು ಪುತ್ರರಲ್ಲಿ ಓರ್ವರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ