ಉದ್ಯಾವರ: ನಾಡದೋಣಿಯ ಹಿತ್ತಾಳೆ ರಿಂಗ್ ಕಳವು
Team Udayavani, Jul 27, 2019, 11:00 AM IST
ಕಾಪು: ಉದ್ಯಾವರ ಪಡುಕೆರೆ ಪಂಢರೀನಾಥ ಡಿಸ್ಕೋ ಪಂಪ್ ಶೆಡ್ನ ಬಳಿ ನದಿಯಲ್ಲಿ ನಿಲ್ಲಿಸಿದ್ದ ದೋಣಿಯಲ್ಲಿಡಲಾಗಿದ್ದ ಬಲೆಯ ರೋಪ್ ಅನ್ನು ತುಂಡು ಮಾಡಿ, ಅದಕ್ಕೆ ಅಳವಡಿಸಲಾಗಿದ್ದ ಹಿತ್ತಾಳೆ ರಿಂಗ್ಗಳನ್ನು ಜು. 25ರಂದು ಕಳವು ಮಾಡಲಾಗಿದೆ. ಕಳವಾಗಿರುವ 95 ಹಿತ್ತಾಳೆ ರಿಂಗ್ಗಳ ಮೌಲ್ಯ 45 ಸಾ. ರೂ. ಎಂದು ಅಂದಾಜಿಸಲಾಗಿದೆ.
ಉದ್ಯಾವರ ಸಂಪಿಗೆನಗರದ ಕೃಷ್ಣ ಜಿ. ಕೋಟ್ಯಾನ್ ಮತ್ತು ಇತರ 40 ಮಂದಿ ಸೇರಿ ನಾಡದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದರು. ಜು. 25ರಂದು ಮೀನುಗಾರಿಕೆ ಮುಗಿಸಿ ದೋಣಿ ಮತ್ತು ಬಲೆಯನ್ನು ನದಿ ಬದಿಯಲ್ಲಿ ಕಟ್ಟಿ ಹಾಕಿದ್ದರು. ಜು. 26ರಂದು ಬೆಳಗ್ಗೆ ಮೀನುಗಾರಿಕೆಗೆ ಹೋಗಲೆಂದು ಬಂದು ನೋಡಿದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿತ್ತು.
ಕೃಷ್ಣ ಜಿ. ಕೋಟ್ಯಾನ್ ದೂರಿನಂತೆ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ