ಶೈಕ್ಷಣಿಕ ನಗರಿಯಾಗಿ ಬ್ರಹ್ಮಾವರ..!


Team Udayavani, Jul 10, 2017, 3:55 AM IST

brahmavara.jpg

ಬ್ರಹ್ಮಾವರ: ಹಲವು ವಿಚಾರಗಳಿಂದ ಬ್ರಹ್ಮಾವರವು ಪ್ರಚಲಿತದಲ್ಲಿದ್ದರೂ ಇತ್ತೀಚಿನ ವರ್ಷಗಳಿಂದ ಶೈಕ್ಷಣಿಕ ನಗರಿಯಾಗಿ ಸದ್ದಿಲ್ಲದೆ ಮಾರ್ಪಾಡಾಗುತ್ತಿದೆ. ಕಾರಣ ಇಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು.

ಹೌದು..ಬ್ರಹ್ಮಾವರವನ್ನು ಶೈಕ್ಷಣಿಕ ಕಾಶಿ ಎಂದು ಕರೆದರೂ ತಪ್ಪಾಗದು. ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳು ಸೇರಿ ಸಹಸ್ರಾರು ಮಂದಿ ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ.

ಬ್ರಹ್ಮಾವರ ಹೋಬಳಿಯನ್ನು ಆಧರಿಸಿ ಅಂಕಿ ಅಂಶಗಳನ್ನು ನೋಡುವುದಾದರೆ ಇಲ್ಲಿರುವಷ್ಟು ಸಿಬಿಎಸ್‌ಇ ಶಾಲೆಗಳು, ಪದವಿ, ಪದವಿ ಪೂರ್ವ ಕಾಲೇಜುಗಳು, ತರಬೇತಿ ಸಂಸ್ಥೆಗಳು ಬೇರೆಲ್ಲೂ ಕಾಣಸಿಗದು.

ಸಿಬಿಎಸ್‌ಇ ಸ್ಕೂಲ್‌ಗ‌ಳು
ಕೇಂದ್ರೀಯ ಪಠ್ಯ ಕ್ರಮ(ಸಿಬಿಎಸ್‌ಇ) ಅನುಸರಿಸುತ್ತಿರುವ ಶಾಲೆಗಳತ್ತ ಮೊದಲು ಗಮನ ಹರಿಸಿದರೆ ಬ್ರಹ್ಮಾವರದ ಲಿಟ್ಲರಾಕ್‌ ಇಂಡಿಯನ್‌ ಸ್ಕೂಲ್‌, ಜಿ.ಎಂ. ವಿದ್ಯಾನಿಕೇತನ್‌, ಎಸ್‌.ಎಂ.ಎಸ್‌. ಆಂಗ್ಲ ಮಾಧ್ಯಮ ಶಾಲೆಗಳು ಮುಂಚೂಣಿಯಲ್ಲಿವೆ. ಲಿಟ್ಲರಾಕ್‌ ಸ್ಕೂಲ್‌ನಲ್ಲಿ ಸುಮಾರು 3,400 ವಿದ್ಯಾರ್ಥಿಗಳು, ಜಿ.ಎಂ. ವಿದ್ಯಾನಿಕೇತನ್‌ನಲ್ಲಿ 3,000 ವಿದ್ಯಾರ್ಥಿಗಳು, ಎಸ್‌.ಎಂ.ಎಸ್‌.ನಲ್ಲಿ 2,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಹಾಗೆಯೇ ರಾಜ್ಯಪಠ್ಯ ಕ್ರಮವನ್ನು ಅನುಸರಿಸುತ್ತಿರುವ ಬ್ರಹ್ಮಾವರದ ಎಸ್‌.ಎಂ.ಎಸ್‌. ಆಂಗ್ಲ ಮಾಧ್ಯಮ ಶಾಲೆ, ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆ, ಬಾರಕೂರು ಎಸ್‌.ವಿ.ವಿ.ಎನ್‌. ಸ್ಕೂಲ್‌, ಬ್ರಹ್ಮಾವರ ಸರಕಾರಿ ಪ್ರೌಢ ಶಾಲೆಗಳಲ್ಲಿ ಸಹಸ್ರಾರು ಮಂದಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಹೊಸ ಶಾಲೆಗಳು
ಬ್ರಹ್ಮಾವರದ ಗ್ರಾಮಾಂತರ ಭಾಗದಲ್ಲಿ ಹಲವಾರು ಆಂಗ್ಲಮಾಧ್ಯಮ ಶಾಲೆಗಳು ಹೊಸದಾಗಿ ಪ್ರಾರಂಭಗೊಂಡಿವೆ. ಕೊಕ್ಕರ್ಣೆಯ ಶ್ರೀ ದುರ್ಗಾ ಆಂಗ್ಲ ಮಾಧ್ಯಮ ಶಾಲೆ, ನಾಲ್ಕೂರು ಮುದ್ದೂರಿನ ವಿ.ಎಸ್‌.ಎಸ್‌. ನೇಶನಲ್‌ ಪಬ್ಲಿಕ್‌ ಸ್ಕೂಲ್‌, ಚೇರ್ಕಾಡಿಯ ಶಾರದಾ ಆಂಗ್ಲ ಮಾಧ್ಯಮ ಶಾಲೆ ಇತ್ತೀಚೆಗೆ ಪ್ರಾರಂಭಗೊಂಡಿವೆ.

ಪ.ಪೂ. ಕಾಲೇಜುಗಳು
ಮುಖ್ಯವಾಗಿ ಬ್ರಹ್ಮಾವರದ ಎಸ್‌.ಎಂ.ಎಸ್‌. ಪ.ಪೂ. ಕಾಲೇಜು, ಸರಕಾರಿ ಪ.ಪೂ. ಕಾಲೇಜು, ನಿರ್ಮಲಾ ಪ.ಪೂ. ಕಾಲೇಜು, ಕ್ರಾಸ್‌ಲ್ಯಾಂಡ್‌ ಪಪೂ ಕಾಲೇಜ್‌ ಬ್ರಹ್ಮಾವರ, ಬಾರಕೂರು ನೇಶನಲ್‌ ಪ.ಪೂ. ಕಾಲೇಜು, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ಟೆಂಪಲ್‌ ಪ.ಪೂ. ಕಾಲೇಜು, ಕೊಕ್ಕರ್ಣೆ ಹಾಗೂ ಕರ್ಜೆಯಲ್ಲಿ ಸರಕಾರಿ ಪ.ಪೂ. ಕಾಲೇಜು ಗ್ರಾಮೀಣ ವಿದ್ಯಾರ್ಥಿಗಳ ಆಶಾ ಕಿರಣವಾಗಿವೆ.

ಪದವಿ, ಸ್ನಾತಕೋತ್ತರ ಕಾಲೇಜುಗಳು
ಕ್ರಾಸ್‌ಲ್ಯಾಂಡ್‌ ಪಪೂ ಕಾಲೇಜ್‌ ಬ್ರಹ್ಮಾವರ, ಎಸ್‌.ಎಂ.ಎಸ್‌. ಕಾಲೇಜು ಮತ್ತು ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ಸರಕಾರಿ ಕಾಲೇಜುಗಳು ಬ್ರಹ್ಮಾವರ ಹೋಬಳಿಯ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಾಗಿವೆ.

ತುಂಬಿ ತುಳುಕುತ್ತಿರುವ ಸರಕಾರಿ ಶಾಲೆಗಳು..!
ಪ್ರಸ್ತುತ ಎಲ್ಲೆಡೆ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಇಲ್ಲದೆ ಪರದಾಡುತ್ತಿವೆ. ಆದರೆ ಬ್ರಹ್ಮಾವರ ಬೋರ್ಡ್‌ ಶಾಲೆ ಮತ್ತು ಬಾರಕೂರಿನ ಸರಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತುಂಬಿ ತುಳುಕುತ್ತಿದ್ದಾರೆ. ಬ್ರಹ್ಮಾವರದ ಬೋರ್ಡ್‌ ಹೈಸ್ಕೂಲ್‌ ಮತ್ತು ಪ.ಪೂ. ಕಾಲೇಜಿನಲ್ಲಿ ಒಟ್ಟು 1,300 ವಿದ್ಯಾರ್ಥಿಗಳು ಮತ್ತು ಬಾರಕೂರು ಸರಕಾರಿ ಪದವಿ ಕಾಲೇಜಿನಲ್ಲಿ 1,600 ವಿದ್ಯಾರ್ಥಿಗಳಿದ್ದಾರೆ ಎಂದರೆ ನೀವು ನಂಬಲೇಬೇಕು..!

ಕೃಷಿ ಕಾಲೇಜು
ಶಿವಮೊಗ್ಗ ವಿ.ವಿ. ಅಧೀನದ ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ ಶೈಕ್ಷಣಿಕ ನಗರಿಯ ಇನ್ನೊಂದು ಗರಿಮೆಯಾಗಿದೆ. ಈಗಾಗಲೇ ಡಿಪ್ಲೊಮಾ ತರಗತಿಗಳು ನಡೆಯುತ್ತಿದ್ದು, ಕೃಷಿ ಕಾಲೇಜು ಪ್ರಾರಂಭದ ನಿರೀಕ್ಷೆಯಲ್ಲಿದೆ.

ಆಶಾಕಿರಣವಾಗಿ ರುಡ್‌ಸೆಟ್‌
ನಿರುದ್ಯೋಗಿ ಯುವಕ ಯುವತಿಯರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವಲ್ಲಿ ರುಡ್‌ಸೆಟ್‌ ಕೊಡುಗೆ ಅಪಾರ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್‌ ಟ್ರಸ್ಟ್‌, ಸಿಂಡಿಕೇಟ್‌ ಬ್ಯಾಂಕ್‌ ಮತ್ತು ಕೆನರಾ ಬ್ಯಾಂಕ್‌ ಪ್ರಾಯೋಜಕತ್ವದಲ್ಲಿ 2001ರಲ್ಲಿ ಹೇರೂರಿನಲ್ಲಿ ಪ್ರಾರಂಭಗೊಂಡ ರುಡ್‌ಸೆಟ್‌ ಸಂಸ್ಥೆ ವಿಭಿನ್ನ ಕ್ಷೇತ್ರಗಳ ತರಬೇತಿ ನೀಡುತ್ತಿದೆ. ಇದುವರೆಗೆ ಸುಮಾರು 22,500 ಶಿಬಿರಾರ್ಥಿಗಳು ತರಬೇತಿ ಪಡೆದಿದ್ದಾರೆ.

ತಾಂತ್ರಿಕ ಶಿಕ್ಷಣ
ವಿದ್ಯಾರ್ಥಿಗಳಿಗೆ ಖಚಿತ ಉದ್ಯೋಗವನ್ನು ಕಲ್ಪಿಸುವ ತಾಂತ್ರಿಕ ಶಿಕ್ಷಣವೂ ಬ್ರಹ್ಮಾವರದಲ್ಲಿ ದೊರೆಯಲಿದೆ. ಉಪ್ಪೂರಿನಲ್ಲಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ನಿರ್ಮಾಣವು ಪ್ರಗತಿಯಲ್ಲಿದೆ.

ಇನ್ನು ಬ್ರಹ್ಮಾವರ ಶೈಕ್ಷಣಿಕ ವಲಯದಲ್ಲಿ ಒಟ್ಟು 185 ಪ್ರಾಥಮಿಕ ಶಾಲೆಗಳು, 63 ಪ್ರೌಢ ಶಾಲೆಗಳು ಕಾರ್ಯಾಚರಿಸುತ್ತಿವೆ.

ವಲಯದ ಹಲವಾರು ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರಮಟ್ಟದ ಸಾಧನೆಗೈದಿದ್ದಾರೆ.
ಶೈಕ್ಷಣಿಕ ನಗರಿಯಾಗಿ ಬೆಳೆಯುತ್ತಿರುವ ಬ್ರಹ್ಮಾವರದಲ್ಲಿ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ದೊರೆಯಲಿ. ಶಾಲೆಗಳು ಕನ್ನಡ ಮಾಧ್ಯಮವಾಗಲಿ, ಇಂಗ್ಲಿಷ್‌ ಮಾಧ್ಯಮವಾಗಲಿ, ಅನುಸರಿಸುತ್ತಿರುವ ಪಠ್ಯಕ್ರಮ ಕೇಂದ್ರೀಯವಾಗಲಿ ಅಥವಾ ರಾಜ್ಯ ಕ್ರಮವೇ ಆಗಿರಲಿ ಮಕ್ಕಳಿಗೆ ಮೌಲ್ಯಯುತ, ಗುಣಮಟ್ಟದ ಶಿಕ್ಷಣ ದೊರೆಯಲಿ ಎನ್ನುವುದು ನಮ್ಮ ಆಶಯ.

– ಪ್ರವೀಣ್‌ ಮುದ್ದೂರು

ಟಾಪ್ ನ್ಯೂಸ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.