ಮಳೆ ಬಂದರೆ ಸೇತುವೆ ಮುಳುಗಡೆ!


Team Udayavani, Aug 13, 2019, 6:11 AM IST

male

ಉಳ್ಳೂರು-74ನೇ ಗ್ರಾಮದ ಕಳ್ಗಿ, ಬಂಟಕೋಡು, ದೋಣಗೆರೆ, ಹೊಸಬಾಳು, ಜಡ್ಡು, ಬೋಗಿನಬೆ„ಲ್‌, ಜಂಬಗೋಡು, ನೀರ್‌ಕೊಡ್ಲು, ಹೆದ್ದನಬೇರು, ಬಂಟರಗದ್ದೆ, ಮಾಸಳ್ಳಿ, ಹುಂಬಾಡಿ, ಹಾಲಿಬಚ್ಚಲು, ಕೊಗ್ಗೊàಡು, ಕಳಿನತೋಟ ಮೊದಲಾದ ಪ್ರದೇಶಗಳ ಜನರು ಪ್ರಸ್ತುತ ಸುತ್ತು ಬಳಸಿ 8-10 ಕಿ.ಮೀ. ಕ್ರಮಿಸಿ ಶಂಕರನಾರಾಯಣಕ್ಕೆ ಕೆಲಸ ಕಾರ್ಯಗಳಿಗೆ ಬರುತ್ತಿದ್ದು, ಹಾಲಿಬಚ್ಚಲು ಹೆಬ್ಟಾಡಿ ಎಂಬಲ್ಲಿ ಸೇತುವೆ ನಿರ್ಮಾಣವಾದಲ್ಲಿ 74ನೇ ಉಳ್ಳೂರಿನಿಂದ ಶಂಕರನಾರಾಯಣಕ್ಕೆ ಕೇವಲ ಮೂರು ಕಿ.ಮೀ. ಮಾತ್ರ ಕ್ರಮಿಸಿದರೆ ಸಾಕಾಗುತ್ತದೆ . ಬೇಡಿಕೆಯ ಈ ಸೇತುವೆ ನಿರ್ಮಾಣದಿಂದ 74 -ಉಳ್ಳೂರು, ಕುಳ್ಳುಂಜೆ ಹಾಗೂ ಶಂಕರನಾರಾಯಣ ಮೂರು ಗ್ರಾಮಗಳ ಸಂಪರ್ಕ ಕೊಂಡಿ ಬೆಸೆದಂತೆ ಆಗುತ್ತದೆ.

ಕುಂದಾಪುರ: ಉಳ್ಳೂರು 74 ಗ್ರಾಮ ಹಾಗೂ ಶಂಕರನಾರಾಯಣ ಗ್ರಾಮಗಳನ್ನು ಬೆಸೆ ಯಲು, ಇರುವ ದೂರವನ್ನು ಕಡಿಮೆಗೊಳಿಸಲು ಕುಳ್ಳುಂಜೆ ಗ್ರಾಮದ ಕಿರುನದಿಗೆ ಹೆಬ್ಟಾಡಿ ಹಾಲಿಬಚ್ಚಲು ಸೇತುವೆ ಬೇಕೆಂಬ ಬೇಡಿಕೆ ನನಸಾಗಿಲ್ಲ.

ಗ್ರಾಮಸ್ಥರು ವಿದ್ಯುತ್‌ ಕಂಬ ಹಾಕಿ ಮಾಡಿದ ತಾತ್ಕಾಲಿಕ ಸೇತುವೆ ಮಳೆಗೆ ಹೊಳೆಯಲ್ಲಿ ನೀರು ಬಂದರೆ ಮುಳುಗುತ್ತದೆ, ನೀರು ಇಳಿದರೆ ಸೇತುವೆ ಕಾಣುತ್ತದೆ. ಕೆನ್ನೀರು ಹರಿಯುತ್ತಿದ್ದರೆ ಹೊಳೆ ದಾಟಲು ಎಂಟೆದೆ ಬೇಕು.

ಹರಸಾಹಸ ಮಾಡಬೇಕು. ಕೈ ಕೈ ಹಿಡಿಯಲೇ ಬೇಕು. ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಆತಂಕ. ಮನೆ ಮಂದಿ ಹೊರಹೋದರೆ ಮನೆಗೆ ಬರುವವರೆಗೆ ಮನೆಯವರ ಎದೆ ಢವಢವ. ಊರಿನಿಂದ ಹೋದವರು ಮರಳಿ ಬರ ಬೇಕಾದರೆ ನೀರಿಳಿಯಬೇಕೆಂಬ ಕಾಯುವಿಕೆ. ಮನೆ ಮುಟ್ಟುವವರೆಗೆ ಹೊಳೆಯಲ್ಲಿ ನೀರು ಬಾರದಿರಲಿ, ಎಷ್ಟೇ ಮಳೆಯಾದರೂ ಸೇತುವೆ ಮುಳುಗದಿರಲಿ ಎಂಬುದು ಮಳೆಗಾಲದಲ್ಲಿ ಈ ಊರಿನವರ ನಿತ್ಯ ಪ್ರಾರ್ಥನೆ. ಏಕೆಂದರೆ ಹರಿಯುವುದು ಸಣ್ಣ ನದಿಯಾದರೂ ಅದರ ಸೆಳೆತ ಭೀಕರವಾಗಿರುತ್ತದೆ. ಈಗ ಇರುವ ಕಾಲುಸಂಕದ ಹಿಡಿಕೆ ದುರ್ಬಲವಾಗಿದ್ದು ಅಪಾಯ ಕಟ್ಟಿಟ್ಟ ಬುತ್ತಿ. ನದಿಯ ಮೇಲ್ಭಾಗದಲ್ಲಿ ಸ್ವಲ್ಪ ಜಾಸ್ತಿ ಮಳೆಯಾದರೂ ಕೆಂಪು ಕೆಂಪು ನೀರು, ಕಾಲುಸಂಕ ಮುಳುಗಡೆ! ನೀರು ಇಳಿಯಲು ಕಾಯುವುದು ಅನಿವಾರ್ಯ.

ಪ್ರಸ್ತಾವನೆ ಸಲ್ಲಿಕೆ
ಉಳ್ಳೂರು ಗ್ರಾ.ಪಂ. ನಮ್ಮ ಗ್ರಾಮ ನಮ್ಮ ಯೋಜನೆಯಡಿ ಪ್ರಸ್ತಾವಿತ ಸೇತುವೆಯ ನಿರ್ಮಾಣದ ಬಗ್ಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದೆ. ಆದರೆ ವರ್ಷಗಳು ಮೂರು ಕಳೆದರೂ ಮಂಜೂರಾಗಲೇ ಇಲ್ಲ.

ಶಂಕರನಾರಾಯಣದಿಂದ ಹೆಬ್ಟಾಡಿಯ ತನಕ ಈಗಾಗಲೇ ಕರ್ನಾಟಕ ನೀರಾವರಿ ನಿಗಮದಿಂದ ಮಹಿಷಮರ್ದಿನಿ ದೇವಸ್ಥಾನ ಸಮೀಪ ವಾರಾಹಿ ಕಾಲುವೆ ಪಕ್ಕದಲ್ಲಿ ರಸ್ತೆ ನಿರ್ಮಾಣವಾಗಿದೆ. ಈ ರಸ್ತೆ ಕುಂಬಾರಮಕ್ಕಿ ಜಂಕ್ಷನ್‌, ಹಾಲಾಡಿ ಸಿದ್ದಾಪುಯರ ರಸ್ತೆಯಲ್ಲಿ ಕೊನೆಯಾಗುತ್ತದೆ. ಈ ರಸ್ತೆಯನ್ನು ಉಪಯೋಗಿಸಿದರೆ 15 ಕಿ.ಮೀ. ದೂರದ ಸಿದ್ದಾಪುರ ಹಾಲಾಡಿಗೆ 5 ಕಿ.ಮೀ. ದೂರ ಕಡಿಮೆಯಾಗುತ್ತದೆ. ಸಿದ್ದಾಪುರ, ಉಳ್ಳೂರು, ಕುಳ್ಳುಂಜೆ, ಶಂಕರನಾರಾಯಣ, ಹಾಲಾಡಿ ಮತ್ತಷ್ಟು ಸನಿಹವಾಗುತ್ತದೆ. ಹೆಬ್ಟಾಡಿಯಿಂದ ನದಿಯ ತನಕ ಖಾಸಗಿ ಪಟ್ಟಾ ಭೂಮಿಯಲ್ಲಿ ಸುಮಾರು ನೂರು ಮೀಟರ್‌ನಷ್ಟು ಕೂಡು ರಸ್ತೆ ನಿರ್ಮಾಣವಾಗಬೇಕಾಗಿದೆ.

ಸೇತುವೆ ಬೇಡಿಕೆ
ಕುಳ್ಳುಂಜೆ ಗ್ರಾಮದ ಹಾಲಿಬಚ್ಚಲು ಹೆಬ್ಟಾಡಿಯ ಬಳಿ ಕಿರುಸೇತುವೆ ನಿರ್ಮಾಣವಾದಲ್ಲಿ ಸಿದ್ದಾಪುರ, ಉಳ್ಳೂರು, ಶಂಕರನಾರಾಯಣ, ಕುಳ್ಳುಂಜೆ, ಹಾಲಾಡಿ ಹೀಗೆ ಐದು ಗ್ರಾಮಗಳ ಸಂಪರ್ಕ ಕೊಂಡಿಯಾಗಲಿದೆ. ನದಿಯ ಒಂದು ದಡ ಉಳ್ಳೂರು 74 ಗ್ರಾಮವಾದರೆ ಇನ್ನೊಂದು ಭಾಗ ಕುಳ್ಳುಂಜೆ ಗ್ರಾಮದಲ್ಲಿದೆ. ಎರಡೂ ಕಡೆ ನದಿದಂಡೆವರೆಗೆ ಪಂಚಾಯತ್‌ ರಸ್ತೆಯಿದೆ. ಸ್ವಲ್ಪ ಖಾಸಗಿ ಭೂಮಿಯಿದ್ದು ಭೂಮಾಲಕರು ಪರೋಕ್ಷವಾಗಿ ಸೇತುವೆ ನಿರ್ಮಾಣಕ್ಕೆ ಸಹಕರಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಮಂಜೂರಿಗೆ ಪ್ರಯತ್ನ
ಈ ವಾರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡು ಈ ಪ್ರದೇಶಕ್ಕೆ ಸೇತುವೆ ಮಂಜೂರುಗೊಳಿಸುತ್ತೇನೆ. ಮಳೆಗಾಲದ ಅವಧಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ.
– ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕರು

ಸನಿಹದ ದಾರಿ
ಐದು ಗ್ರಾಮಗಳ ಸಂಪರ್ಕ ರಸ್ತೆಯಾದ ಹಾಲಿಬಚ್ಚಲು-ಹೆಬ್ಟಾಡಿ ಸೇತುವೆ ನಿರ್ಮಾಣಕ್ಕೆ ಅನೇಕ ವರ್ಷಗಳಿಂದ ಬೇಡಿಕೆಯಿದೆ. ಹಾಲಿಬಚ್ಚಲು -ಹೆಬ್ಟಾಡಿ ಎಂಬಲ್ಲಿ ಈ ಸೇತುವೆ ಆದರೆ ಜನರಿಗೆ ಕೂಗಳತೆಯಲ್ಲಿ ಶಂಕರನಾರಾಯಣ ಪದವಿಪೂರ್ವ ಕಾಲೇಜು, ಪದವಿ ಕಾಲೇಜು ತಲುಪಬಹುದು, ಶಂಕರನಾರಾಯಣ ಪೊಲೀಸ್‌ ಠಾಣೆ, ಸಬ್‌ ರಿಜಿಸ್ಟ್ರಾರ್‌ ಕಚೇರಿ, ಅರಣ್ಯ ಇಲಾಖೆಯನ್ನು 1.5 ಕಿ.ಮೀ. ದೂರದಲ್ಲಿ ಕ್ರಮಿಸಬಹುದು.
-ಚಿಟ್ಟೆ ರಾಜಗೋಪಾಲ ಹೆಗ್ಡೆ, ಅಧ್ಯಕ್ಷರು, ಪಶ್ಚಿಮ ವಾಹಿನಿ ನೀರಾವರಿ ಅಚ್ಚುಕಟ್ಟು ಅಭಿವೃದ್ಧಿ ಸಮಿತಿ

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.