ಬಿಎಸ್ವೈ ಸೇಡಿನ ರಾಜಕೀಯ: ಖಾದರ್
Team Udayavani, Aug 22, 2019, 6:41 AM IST
ಕಾಪು: ಯಡಿಯೂರಪ್ಪ ಸೇಡಿನ ರಾಜಕೀಯದ ಮೂಲಕ ವಿಪಕ್ಷವನ್ನು ಹಣಿಯುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಹಳಷ್ಟುಸಮಸ್ಯೆಗಳು ಇರುವ ಈ ಸಂದರ್ಭದಲ್ಲಿ ಇದು ಅವರಿಗೆ ಶೋಭೆಯಲ್ಲ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಕಾಪು ರಾಜೀವ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟೆಲಿಫೋನ್ ಕದ್ದಾಲಿಕೆಪ್ರಕರಣವನ್ನು ರಾಜ್ಯ ಸರಕಾರ ಅವಸರದಲ್ಲಿ ಸಿಬಿಐ ತನಿಖೆಗೆ ನೀಡಿದೆ.ತನಿಖೆಯಲ್ಲಿ ಸತ್ಯಾಂಶ ಹೊರಬರುತ್ತದೆ. ಅಷ್ಟರವರೆಗೆ ಕಾಯೋಣ ಎಂದರು.
ಸರಕಾರ ಹೆಚ್ಚು ಬಾಳದು
ಈ ಸರಕಾರ ಹೆಚ್ಚು ಬಾಳುತ್ತದೆ ಎಂಬ ನಿರೀಕ್ಷೆ ನಮಗಿಲ್ಲ. ಸಮ್ಮಿಶ್ರ ಸರಕಾರವನ್ನು ಬೀಳಿಸಿದ ಬಳಿಕ ಅಧಿಕಾರ ಸ್ವೀಕಾರಕ್ಕೆ ಮೂರು ದಿನ ತೆಗೆದುಕೊಂಡ ಅವರು 20 ದಿನ ಕಳೆದ ಅನಂತರ ಮಂತ್ರಿಮಂಡಲ ರಚಿಸಿದ್ದಾರೆ. ಈಗ ಮತ್ತೆ ಗೊಂದಲ ಆರಂಭವಾಗಿದೆ ಎಂದರು.
ಸ್ಥಾನ ಸಿಗದ ಬೇಸರ
ಸಂಪುಟದಲ್ಲಿ ಎಸ್. ಅಂಗಾರ ಅವರಂತಹ ಹಿರಿಯ ಮತ್ತು ದಲಿತ ಶಾಸಕರನ್ನು ಅವಗಣಿಸಿರುವುದು ಖಂಡನೀಯ. ಬಿಜೆಪಿ ಕರಾವಳಿಗೆ ಅನ್ಯಾಯ ಮಾಡಿದೆ ಎಂದು ಅವರು ಹೇಳಿದರು.
ಕರಾವಳಿಯ ಹೆಮ್ಮೆ
ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿರುವುದು ಸ್ವಾಗತಾರ್ಹ. ನಳಿನ್ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದೂ ಕರಾವಳಿಗೆ ಹೆಮ್ಮೆ ಎಂದು ಖಾದರ್ ತಿಳಿಸಿದರು. ಮುಖಂಡರಾದ ವಿನಯ ಕುಮಾರ್ ಸೊರಕೆ, ಅಶೋಕ್ ಕುಮಾರ್ ಕೊಡವೂರು, ನವೀನ್ಚಂದ್ರ ಸುವರ್ಣ, ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ