ಹೆಜಮಾಡಿಯಲ್ಲಿ ಬಸ್ ಪಲ್ಟಿ: ಹಲವರಿಗೆ ಗಾಯ
Team Udayavani, Mar 13, 2018, 3:40 PM IST
ಪಡುಬಿದ್ರಿ: ಉಡುಪಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹೆಜಮಾಡಿ ಟೋಲ್ ಗೇಟ್ ಬಳಿ ಸೋಮವಾರ ಮಧ್ಯಾಹ್ನದ 1 ಗಂಟೆ ಸುಮಾರಿಗೆ ಎಕ್ಸ್ಪ್ರೆಸ್ ಬಸ್ಸೊಂದು ಪಲ್ಟಿಯಾಗಿ ಚಾಲಕ ಸಹಿತ ಏಳು ಮಂದಿ ಗಾಯಗೊಂಡಿದ್ದಾರೆ.
ಕೇರಳ ಕಣ್ಣೂರು ಮೂಲದ ಮೋಹನ್ (62), ಮಂಗಳೂರು ಮರಕಡದ ಸುರೇಶ್ (50), ಉಡುಪಿ ನಿವಾಸಿಗಳಾದ ಜಯರಾಮ ಆಚಾರ್ಯ (70), ಹಮೀದ್ (30), ಪಣಿಯೂರಿನ ಜನಾರ್ದನ (41) ಹಾಗೂ ಮೂಲತಃ ಪುಣೆಯವರಾಗಿದ್ದು, ಮಂಗಳೂರಿನ ಬಂಧುಗಳ ಮನೆಗೆ ಬಂದಿದ್ದ ಪ್ರಭಾಕರ ಶೆಟ್ಟಿ (78) ಗಾಯಗೊಂಡಿದ್ದಾರೆ. ಈ ಪೈಕಿ ಗಂಭೀರ ಗಾಯಗೊಂಡಿರುವ ಮೋಹನ್ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆದ್ದಾರಿಯಲ್ಲಿ ಮರದ ದಿಮ್ಮಿಗಳನ್ನು ಹೇರಿಕೊಂಡು ಕೆಟ್ಟು ನಿಂತಿದ್ದ ಲಾರಿಯನ್ನು ಬಸ್ ಚಾಲಕ ಗಮನಿಸದಿರುವುದೇ ಅಪ ಘಾತಕ್ಕೆ ಕಾರಣ. ಲಾರಿಯ ಹತ್ತಿರ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮಣ್ಣಿನ ದಿಬ್ಬವೊಂದಕ್ಕೆ ಬಡಿದು ಮೋರಿಗೆ ಉರುಳಿ ಬಿತ್ತು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಓವರ್ ಟೇಕ್ ಭರಾಟೆ
ಲಾರಿಯ ಚಕ್ರವು ಸ್ಫೋಟಗೊಂಡಿದ್ದ ಕಾರಣ ಮುಂಜಾನೆಯಿಂದಲೇ ಮಾರ್ಗ ಮಧ್ಯೆ ನಿಂತಿತ್ತು. ವಾಹನವೊಂದನ್ನು ಓವರ್ಟೇಕ್ ಮಾಡುತ್ತಾ ಅತಿ ವೇಗದಿಂದ ಬಂದ ಬಸ್ಸಿನ ಚಾಲಕ ಸಂತೋಷ್ ಲಾರಿಯ ಹತ್ತಿರ ತಲುಪಿದಾಗ ಹಠಾತ್ ಬ್ರೇಕ್ ಹಾಕಿದ್ದ. ಪರಿಣಾಮ ತೀರಾ ಎಡಕ್ಕೆ ಚಲಿಸಿ ಮೋರಿಗೆ ಉರುಳಿ ಬಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಕೂಡಲೇ ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ದರು. ಮಾರ್ಗ ಮಧ್ಯ ಕೆಟ್ಟು ನಿಂತಿದ್ದ ಲಾರಿಯನ್ನು ಮತ್ತು ಬಸ್ಸನ್ನು ಬದಿಗೆ ಸರಿಸಲಾಗಿದೆ. ಕೆಲವು ಬಸ್ ಪ್ರಯಾಣಿಕರ ಮೊಬೈಲ್ಗಳು, ಲ್ಯಾಪ್ಟಾಪ್ ಸಹಿತ ವಿವಿಧ ಸೊತ್ತು ಕಳೆದು ಹೋಗಿರುವುದಾಗಿ ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ