ಮಾಳ ಬಸ್ ಧರೆಗೆ ಢಿಕ್ಕಿ: 9 ಸಾವು
Team Udayavani, Feb 15, 2020, 8:13 PM IST
ಕಾರ್ಕಳ: ಕಾರ್ಕಳ ತಾ| ಮಾಳ ಗ್ರಾಮದ ಮುಳ್ಳೂರು ಘಾಟ್ ಬಳಿ ಬಸ್ಸೊಂದು ಧರೆಗೆ ಢಿಕ್ಕಿ ಹೊಡದ ಪರಿಣಾಮ 9 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ 5:35ರ ವೇಳೆ ನಡೆದಿದೆ.
ಮೈಸೂರಿನ ಸೆಂಚುರಿ ವೈಟಲ್ ರೆಕಾರ್ಡ್ಸ್ ಕಂಪನಿಯ ಸುಮಾರು 35 ಮಂದಿ ಸಿಬ್ಬಂದಿ ಮೈಸೂರಿನಿಂದ ಹೊರನಾಡು, ಕುದುರೆಮುಖವಾಗಿ ಮಂಗಳೂರು ಸಾಗುತ್ತಿದ್ದ ಬಸ್ ಮಾಳ ಎಸ್ಕೆ ಬಾರ್ಡರ್ ಸಮೀಪದ ಮುಳ್ಳೂರು ಘಾಟ್ ಬಳಿ ಬಂಡೆ ಕಲ್ಲಿನಿಂದ ಆವೃತ್ತವಾಗಿದ್ದ ಧರೆಗೆ ಬಸ್(ಕೆಎ 01, ಎಸಿ 4960) ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ 3 ಮಹಿಳೆಯರು ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿರುತ್ತಾರೆ.
ರಾಧರವಿ (22), ಯೋಗೀಂದ್ರ (21), ಪ್ರೀತಂ ಗೌಡ (21) ಬಸವರಾಜ್ (22), ಅನಘ್ನಾ (20), ಶರಿಲ್ (21), ರಂಜಿತಾ ಪಿ. (21) ಚಾಲಕ, ಅಡುಗೆ ಸಿಬ್ಬಂದಿ ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿರುತ್ತಾರೆ.
ಅನೇಕರು ಗಾಯಗೊಂಡಿದ್ದು, 12 ಮಂದಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ, 13 ಮಂದಿ ಕಾರ್ಕಳ ಸಿಟಿ ಆಸ್ಪತ್ರೆ ಹಾಗೂ 5 ಮಂದಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ