ಅಪಾಯದ ಮುನ್ಸೂಚನೆ ನೀಡಿದ ಕೈಪುಂಜಾಲು ಭಟತೋಟ ಸೇತುವೆ


Team Udayavani, Jul 10, 2018, 6:05 AM IST

0907kpe4.jpg

ಕಾಪು: ಭಾರೀ ಮಳೆ ಮತ್ತು ನೆರೆಯ ಕಾರಣದಿಂದಾಗಿ ಕೈಪುಂಜಾಲು ಭಟತೋಟ ಸೇತುವೆಯಲ್ಲಿ ಬಿರುಕು ಕಾಣಿಸಿದ್ದು, ಮಧ್ಯ ಭಾಗದ ಎರಡು ಪಿಲ್ಲರ್‌ಗಳು ನದಿಯೊಳಗೆ ಕುಸಿತಕ್ಕೊಳಗಾಗಿದ್ದು ಭಾರೀ ಅಪಾಯದ ಮುನ್ಸೂಚನೆಯನ್ನು ನೀಡಿದೆ.

ಕಾಪು ಪುರಸಭಾ ವ್ಯಾಪ್ತಿಯ ಉಳಿಯಾರಗೋಳಿ ಗ್ರಾಮದ ಕೈಪುಂಜಾಲು ಭಟತೋಟ ಸೇತುವೆಯ 2, 3 ಮತ್ತು 4ನೇ ಸ್ಲಾ Âಬ್‌ ಬಿರುಕು ಬಿಟ್ಟಿದ್ದು, ಮಧ್ಯದ ಪಿಲ್ಲರ್‌ ಭೂಮಿಯೊಳಗೆ ಕುಸಿದಿದೆ. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ, ಸೇತುವೆ ಪರಿಶೀಲಿಸಿದ ತಹಶೀಲ್ದಾರ್‌ ಸೇತುವೆಯನ್ನು ಮೇಲೆ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

1996ರಲ್ಲಿ ನಿರ್ಮಾಣಗೊಂಡಿದ್ದ ಕೈಪುಂಜಾಲು ಭಟತೋಟ ಸೇತುವೆಯು ಪಾಂಗಾಳ ಮತ್ತು ಮಟ್ಟು ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ಸುಮಾರು 150ಕ್ಕೂ ಅಧಿಕ ಮನೆಗಳ ಜನತೆ ಇದನ್ನೇ ಪ್ರಧಾನ ಸಂಪರ್ಕ ಸೇತುವಾಗಿ ಬಳಸುತ್ತಿದ್ದಾರೆ. ಮಾತ್ರವಲ್ಲದೇ ಬೈಕ್‌, ರಿಕ್ಷಾ ಮತ್ತು ಕಾರುಗಳಲ್ಲಿ ಕರಾವಳಿ ತೀರ ಮತ್ತು ಮೀನುಗಾರಿಕೆಗೆ ತೆರಳುವ ಜನರು ಈ ಮಾರ್ಗದ ಮೂಲಕ ತೆರಳುತ್ತಿದ್ದರು.

ರವಿವಾರ ಕೈಪುಂಜಾಲು ಪರಿಸರದಲ್ಲಿನ ಮಳೆ ಹಾನಿ ಪರಿಶೀಲನೆಗೆ ಬಂದಿದ್ದ ತಹಶೀಲ್ದಾರ್‌ ಗುರುಸಿದ್ಧಯ್ಯ ಅವರು ಭಟತೋಟ ಸೇತುವೆಯ ಪರಿಸ್ಥಿತಿಯನ್ನು ಕಂಡು ಗುಣಮಟ್ಟ ಪರಿಶೀಲಿಸುವಂತೆ ಇಂಜಿನಿಯರ್‌ಗೆ ಆದೇಶ ನೀಡಿದ್ದರು. ರವಿವಾರ ಸಂಜೆ ಭೇಟಿ ನೀಡಿದ್ದ ಇಂಜಿನಿಯರ್‌ ಸೇತುವೆ ಕುರಿತಾಗಿ ಋಣಾತ್ಮಕ ವರದಿಯನ್ನು ನೀಡಿದ್ದು, ಅದರಂತೆ ತಾಲೂಕು ಆಡಳಿತವು ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದೆ.

ಸೋಮವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ ಗುರುಸಿದ್ಧಯ್ಯ ಮತ್ತು ಕಾಪು ಎಸ್ಸೆ$ç ನಿತ್ಯಾನಂದ ಗೌಡ ಅವರು ಸೇತುವೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್‌ಗಳನ್ನು ಇರಿಸಿ ಜನರಲ್ಲಿ ಎಚ್ಚರಿಕೆ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಸೇತುವೆ ಮಧ್ಯ ಭಾಗದ ಪಿಲ್ಲರ್‌ ಕುಸಿದು ಭೀತಿ ಹುಟ್ಟಿಸಿದ ಕಾರಣ, ಸೇತುವೆ ಮೇಲಿನ ಸಂಚಾರವನ್ನು ನಿಷೇಧಿಸಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮತ್ತು ಈ ಭಾಗದಲ್ಲಿ ಜನಸಂಚಾರಕ್ಕೆ ಅನುಕೂಲವಾಗುವಂತೆ ಶೀಘ್ರ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಡುವಂತೆ ಪುರಸಭೆ ಮತ್ತು ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.

ನೂತನ ಸೇತುವೆಗೆ ಶಿಲಾನ್ಯಾಸ ನಡೆದಿದೆ 
ಕೈಪುಂಜಾಲು ಭಟತೋಟದಲ್ಲಿ 1996ರಲ್ಲಿ ನಿರ್ಮಾಣಗೊಂಡಿದ್ದ ಸೇತುವೆಯು ಶಿಥಿವಾಗಿದ್ದರಿಂದ 1.60 ಕೋ. ರೂ. ವೆಚ್ಚದ ನೂತನ ಸೇತುವೆ ರಚನೆ ಕಾಮಗಾರಿಗೆ ಮಾಜಿ ಶಾಸಕ ವಿನಯಕುಮಾರ್‌ ಸೊರಕೆ ಅವರು ಕಳೆದ ಫೆಬ್ರವರಿ ತಿಂಗಳಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ ಎರಡೆರಡು ಚುನಾವಣೆ, ಮಳೆಗಾಲದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ ಎಂದು ಪುರಸಭೆ ಎಂಜಿನಿಯರ್‌ ಹೇಳು ತ್ತಿದ್ದಾರೆ. ಸೇತುವೆ ಸಂಚಾರ ಬಂದ್‌ ಆಗಿರುವುದರಿಂದ ನಾವು ಇನ್ನು ದ್ವೀಪ ಪ್ರದೇಶದಲ್ಲಿ ವಾಸುಸುವರಂತಾಗುವ ಅನಿವಾರ್ಯತೆ ಎದುರಾಗಿದೆ ಎಂದು ಭಟತೋಟ ನಿವಾಸಿ ಹರೀಶ್‌ ಕುಮಾರ್‌ ತಿಳಿಸಿದ್ದಾರೆ.

ಆದಷ್ಟು ಶೀಘ್ರ ಸೇತುವೆ ನಿರ್ಮಾಣವಾಗಲಿ
ಹಿಂದೆ ಇಲ್ಲಿ ಮರದ ಸೇತುವೆಯಿತ್ತು. 22 ವರ್ಷಗಳ ಹಿಂದೆ ವಸಂತ ಸಾಲಿಯಾನ್‌ ಅವರು ಶಾಸಕರಾಗಿದ್ದಾಗ ಇಲ್ಲಿ ಕಾಂಕೀÅಟ್‌ ಪಿಲ್ಲರ್‌ಗಳ ಸಹಿತವಾದ ಸೇತುವೆ ರಚನೆಯಾಗಿತ್ತು. ಸೇತುವೆ ಮತ್ತು ರಸ್ತೆ ರಚನೆ ವೇಳೆ ನಾವು ಕೂಡಾ ಜಾಗ ನೀಡಿ ಸಹಕಾರ ನೀಡಿದ್ದೇವೆ. ಇಲ್ಲಿ ನಿರಂತರವಾಗಿ ವಾಹನಗಳು ಓಡಾಡುತ್ತಿವೆ. ನಾವೆಲ್ಲರೂ ಇದೇ ಸೇತುವೆಯನ್ನು ಬಳಕೆ ಮಾಡುತಿದ್ದೇವೆ. ಮೀನುಗಾರಿಕೆಗೆ ತೆರಳುವವರು, ಕೃಷಿ ಕೆಲಸ ನಡೆಸಲು, ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಈ ಸೇತುವೆ ತುಂಬಾ ಅನುಕೂಲಕರವಾಗಿದೆ. ಆದಷ್ಟು ಶೀಘ್ರ ಬದಲಿ ವ್ಯವಸ್ಥೆಯೊಂದಿಗೆ, ಸೇತುವೆ ನಿರ್ಮಾಣವಾಗಲಿ ಎಂದು ಸ್ಥಳೀಯರಾದ ದೇವಪುತ್ರ ಸೋನ್ಸ್‌, ಸಂಜೀವಿ, ರತ್ನಾವತಿ  ಆಗ್ರಹಿಸಿದ್ದಾರೆ.
– ಕೈಪುಂಜಾಲು ,
ಭಟತೋಟ ನಿವಾಸಿಗಳು

ಜನರ ಪ್ರಾಣ ರಕ್ಷಣೆಗಾಗಿ  ಸೇತುವೆ ಸಂಚಾರ ನಿಷೆೇಧ
ಭಾರೀ ಮಳೆಯ ಕಾರಣದಿಂದಾಗಿ ಕೈಪುಂಜಾಲು ಭಟತೋಟ ಸೇತುವೆ ಸಂಪುರ್ಣ ಜಲಾವೃತಗೊಂಡಿದ್ದರಿಂದಾಗಿ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಪುರಸಭೆಯ ಇಂಜಿನಿಯರ್‌ಗಳು ಸೇತುವೆ ಯಾವುದೇ ಸಂದರ್ಭದಲ್ಲೂ ಕುಸಿತಕ್ಕೊಳಗಾಗುವ ಭೀತಿಯಿದೆ ಎಂಬ ವರದಿ ನೀಡಿದೆ. ಆ ಕಾರಣದಿಂದಾಗಿ ಸೇತುವೆ ಮೇಲಿನ ಸಂಚಾರವನ್ನು ನಿಷೇಧಿಸಲಾಗಿದೆ. ಜನರ ಸಂಚಾರಕ್ಕೆ ತೋಂದರೆಯಾದರೂ, ಜನರ ಪ್ರಾಣ ರಕ್ಷಣೆ ನಮ್ಮ ಪ್ರಮುಖ ಕರ್ತವ್ಯವಾಗಿರುವುದರಿಂದ ಸಂಚಾರ ನಿಷೇಧ ತೀರ್ಮಾನ ಅಗತ್ಯವಾಗಿದೆ ಎಂದು ತಹಶೀಲ್ದಾರ್‌ ಗುರುಸಿದ್ಧಯ್ಯ ಹೇಳಿದ್ದಾರೆ.
– ಗುರುಸಿದ್ಧಯ್ಯ ,ಕಾಪು ತಹಶೀಲ್ದಾರ್‌

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.