ಮೂಡುಗಿಳಿಯಾರಿನಲ್ಲಿ ಚಿರತೆ ಕಾಟ: ಜನರಲ್ಲಿ ಆತಂಕ
ವಾಹನ ಸವಾರರಿಗೆ ಹಲವು ಬಾರಿ ಚಿರತೆ ಪ್ರತ್ಯಕ್ಷ , ಅರಣ್ಯ ಇಲಾಖೆಗೆ ಆತಂಕ ವ್ಯಕ್ತಪಡಿಸಿದ ಸ್ಥಳೀಯರು, ಚಿರತೆ ಸೆರೆಗೆ ಬೋನ್ ಅಳವಡಿಕೆ
Team Udayavani, Mar 6, 2020, 5:45 AM IST
ಕೋಟ: ಕೋಟ ಸಮೀಪ ಮೂಡುಗಿಳಿಯಾರು ಸಣ್ಣಬಸವನಕಲ್ಲು ಹಾಗೂ ದೊಡ್ಡ ಬಸವನಕಲ್ಲು ಪ್ರದೇಶದಲ್ಲಿ ಹಲವು ದಿನಗಳಿಂದ ಚಿರತೆ ಸಂಚಾರವಿದ್ದು ಸ್ಥಳೀಯರಲ್ಲಿ ಆತಂಕದ ವಾತವರಣ ಸೃಷ್ಟಿಯಾಗಿದೆ. ಹೀಗಾಗಿ ಸಮಸ್ಯೆಯನ್ನು ಅರಣ್ಯ ಇಲಾಖೆಯ ಗಮಕ್ಕೆ ತಂದಿದ್ದು ಇಲಾಖೆಯ ಅಧಿಕಾರಿಗಳು ಮಾ.4ರಂದು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಚಿರತೆ ಸೆರೆಗೆ ಬೋನ್ ಅಳವಡಿಸಿದ್ದಾರೆ.
ಗಿಳಿಯಾರು- ಬೇಳೂರು ಸಂಪರ್ಕಿಸುವ ಈ ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್ ಸವಾರರಿಗೆ ಹಾಗೂ ಕಾರು ಪ್ರಯಾಣಿಕರಿಗೆ ಮೂರ್ನಾಲ್ಕು ದಿನಗಳಿಂದ ಚಿರತೆ ಎದುರಾಗುತ್ತಿದ್ದು ಆತಂಕಗೊಂಡು ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದ್ದರು. ಅನಂತರ ಕೋಟ ಗ್ರಾ.ಪಂ. ಉಪಾಧ್ಯಕ್ಷ ರಾಜಾರಾಮ್ ಶೆಟ್ಟಿಯವರು ಬ್ರಹ್ಮಾವರ ಉಪವಲಯಾರಣ್ಯಾಧಿಕಾರಿ ಜೀವನದಾಸ್ ಶೆಟ್ಟಿಯವರಿಗೆ ಸುದ್ದಿ ವಿಷಯ ತಿಳಿಸಿದ್ದು, ಅಕ್ಕಪಕ್ಕದಲ್ಲಿ ಹಲವಾರು ಮನೆಗಳು, ಶಾಲೆ ಇರುವುದರಿಂದ ಅಪಾಯವಿದ್ದು ಶೀಘ್ರ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು.ಬುಧವಾರ ಅರಣ್ಯ ರಕ್ಷಕಿ ಅಕ್ಷತಾ ಅವರೊಂದಿಗೆ ಸ್ಥಳಕ್ಕಾಗಮಿಸಿದ ಉಪ ವಲಯ ಅರಣ್ಯಾಧಿಕಾರಿಗಳು ಬೋನ್ ಅಳವಡಿಸಿ ಸ್ಥಳೀಯರಿಗೆ ಆತಂಕಪಡದಂತೆ ದೈರ್ಯ ತುಂಬಿದ್ದಾರೆ.
ಚಿರತೆ ಸೆರೆಗೆ ಯತ್ನ
ಗಿಳಿಯಾರು ಭಾಗದಲ್ಲಿ ಚಿರತೆ ಸಂಚಾರವಿರುವ ಕುರಿತು ದೂರುಗಳು ಬಂದಿದ್ದು ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಪರಿಶೀಲಿಸಿ ಬೋನ್ ಇಡುವ ವ್ಯವಸ್ಥೆ ಮಾಡಲಾಗಿದೆ.ಗ್ರಾಮಾಂತರ ಭಾಗದ ಹಲವು ಕಡೆಗಳಲ್ಲಿ ಇದೇ ರೀತಿ ದೂರುಗಳು ಬಂದಿದ್ದು ಎಲ್ಲ ಕಡೆಗಳಲ್ಲೂ ಬೋನ್ ಇಟ್ಟು ಚಿರತೆ ಸೆರೆಗೆ ಪ್ರಯತ್ನಿಸಲಾಗುತ್ತಿದೆ.
– ಜೀವನ್ದಾಸ್ ಶೆಟ್ಟಿ, ಉಪವಲಯ ಅರಣ್ಯಾಧಿಕಾರಿಗಳು ಬ್ರಹ್ಮಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ