ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮೂಳೂರಿನಲ್ಲಿ ಪ್ರಕೃತಿ ಚಿಕಿತ್ಸೆ
Team Udayavani, Apr 22, 2019, 6:30 AM IST
ಕಾಪು: ಕಳೆದ ಒಂದೂವರೆ ತಿಂಗಳಿನಿಂದ ಚುನಾವಣ ಪ್ರಚಾರದಲ್ಲಿ ವ್ಯಸ್ತರಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಕೃತಿ ಚಿಕಿತ್ಸೆಗಾಗಿ ರವಿವಾರ ರಾತ್ರಿ ಮೂಳೂರಿಗೆ ಆಗಮಿಸಿ¨ªಾರೆ.
ಕಾಪು ಪುರಸಭೆ ವ್ಯಾಪ್ತಿಯ ಮೂಳೂರಿನ ಸಾಯಿರಾಧಾ ಗೆಸ್ಟ್ ಹೌಸ್ನಲ್ಲಿ ಮೂರು ದಿನಗಳ ಕಾಲ ತಂಗಲಿರುವ ಅವರು ಈ ಸಂದರ್ಭ ಪ್ರಕೃತಿ ಚಿಕಿತ್ಸೆ ಪಡೆಯಲಿ¨ªಾರೆ ಎಂದು ತಿಳಿದು ಬಂದಿದೆ.
ಶಿವಮೊಗ್ಗದಿಂದ ರವಿವಾರ ರಾತ್ರಿ ಮೂಳೂರು ಗೆಸ್ಟ್ ಹೌಸ್ಗೆ ಆಗಮಿಸಿರುವ ಅವರು ಮಾಧ್ಯಮದವರನ್ನು ದೂರವೇ ಇಟ್ಟಿ¨ªಾರೆ. ಮುಖ್ಯಮಂತ್ರಿ ತಂಗಿರುವ ಗೆಸ್ಟ್ಹೌಸ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತು ಕಲ್ಪಿಸಲಾಗಿದೆ.