ವಿಚಿತ್ರ ರೋಗದಿಂದ ಬಳಲುತ್ತಿರುವ ಮಕ್ಕಳು, ಸರಕಾರದ ನೆರವಿನ ನಿರೀಕ್ಷೆ

 ಜೀವ ರಕ್ಷಕ ಈಶ್ವರ್‌ ಮಲ್ಪೆ ಮನೆಯಲ್ಲಿ ಜೀವ ಹಿಂಡುವ ಬಡತನ

Team Udayavani, May 10, 2022, 12:46 PM IST

help

ಮಲ್ಪೆ: ಶಿಥಿಲಾವಸ್ಥೆಯಲ್ಲಿರುವ ಮನೆ, ಕಿತ್ತು ತಿನ್ನುವ ಬಡತನ, ದಿನಗೂಲಿಯನ್ನು ಅವಲಂಬಿಸಿದ್ದ ಕುಟುಂಬದಲ್ಲಿ ಕಳೆದ 23 ವರ್ಷಗಳಿಂದ ಹಾಸಿಗೆ ಹಿಡಿದ ಮೂವರು ಮಕ್ಕಳು.

ಇದು ಆಪತ್ಭಾಂಧವ, ಜೀವ ರಕ್ಷಕ ಈಶ್ವರ್‌ ಮಲ್ಪೆ ಅವರ ಕುಟುಂಬದ ಕಥೆ, ವ್ಯಥೆ. ಮಕ್ಕಳು ವಿಚಿತ್ರ ರೋಗದಿಂದ ಬಳಲುತ್ತಿದ್ದಾರೆ. ಹಿರಿಯ ಪುತ್ರ 23 ವರ್ಷ ಪ್ರಾಯದ ನಿರಂಜನ್‌ಗೆ ಒಂದು ವರ್ಷ ಆಗು ವಾಗ ಮೂರ್ಛೆ ರೋಗ ಕಾಣಿಸಿಕೊಂಡಿದ್ದು ಅಂದಿನಿಂದ ದೇಹದ ಬೆಳವಣಿಗೆ ಇಲ್ಲದೆ ಹಾಸಿಗೆ ಬಿಟ್ಟು ಮೇಲೆದ್ದಿಲ್ಲ. ಆತ ಇದೇ ಜ.29ರಲ್ಲಿ ಇಹಲೋಕ ತ್ಯಜಿಸಿದ್ದಾನೆ.

ಎರಡನೇ ಮಗ ಕಾರ್ತಿಕನಿಗೂ ಮೂರ್ಛೆ ರೋಗದ ಕಾಯಿಲೆ. ಬುದ್ಧಿ ಬೆಳೆಯದೆ ತಾಯಿ ಆಸರೆಯಲ್ಲಿ ಹಾಸಿಗೆಯಲ್ಲಿ ದಿನ ಕಳೆಯುತ್ತಿದ್ದಾನೆ. ಈಗ ಆತನಿಗೆ 21ವರ್ಷ ವಯಸ್ಸು, ದೇಹದ ಅಂಗಾಂಗಗಳು ಸ್ವಾಧೀನದಲ್ಲಿಲ್ಲ. ಮಗಳ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಪ್ರಸ್ತುತ 5 ವರ್ಷ ಪ್ರಾಯದ ಈಕೆಗೂ ಮೂರ್ಛೆ ರೋಗ. ಸ್ಪರ್ಶ ಜ್ಞಾನ ಇಲ್ಲ. ಈಗಿರುವ ಮಗ ಕಾರ್ತಿಕನಿಗೆ ಕಾಲುಗಳನ್ನು ಮಡಚಲಾಗದು, ಎಲ್ಲಿ ಕುಳಿತಿರುತ್ತಾನೆ ಅಲ್ಲಿ ಕಲ್ಲಿನಂತಿರುತ್ತಾನೆ. ಅವನಿಗೆ ಚಲನವಲನ ಶಕ್ತಿ ಇಲ್ಲ. ಅವರಿಗೆ ಅನೇಕ ವರ್ಷಗಳಿಂದ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿಲ್ಲ. ಮಕ್ಕಳನ್ನು ರಕ್ಷಿಸಿಕೊಳ್ಳಲು ದಂಪತಿ ಮಾಡಿದ ಸಾಲ ಬೆಟ್ಟದಷ್ಟಿದೆ. ಇದು ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ. ಮಕ್ಕಳಿಬ್ಬರನ್ನು ನೋಡಿ ಕೊಳ್ಳುತ್ತಿರುವುದರಿಂದ ಪತ್ನಿ ಕೂಲಿ ಕೆಲಸಕ್ಕೆ ಹೋಗುವಂತಿಲ್ಲ.

ಹಲವು ಬಾರಿ ಸರಕಾರಿ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇಬ್ಬರೂ ಮಕ್ಕಳಿಗೆ ಅಂಗವಿಕಲ ವೇತನ ಬಿಟ್ಟರೆ ಸರಕಾರದಿಂದ ಬೇರೇನೂ ಸಿಕ್ಕಿಲ್ಲ. ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಾರ್ವಜನಿಕರ ನೆರವು ಬೇಕಾಗಿದೆ. ಕರಾವಳಿ ಕಾವಲು ಪೊಲೀಸ್‌ ಪಡೆಗೆ ಅರ್ಜಿ ಸಲ್ಲಿಸಿದರೂ 9ನೇ ತರಗತಿಯವರೆಗೆ ಕಲಿತ ಈಶ್ವರ್‌ಗೆ ಶಿಕ್ಷಣ ಕಡಿಮೆ ಎಂದು ರದ್ದು ಪಡಿಸಿದ್ದಾರೆ ಎನ್ನಲಾಗಿದೆ.

ಜೀವರಕ್ಷಕನ ಉಚಿತ ಸೇವೆ

ಮಲ್ಪೆ ಮೀನುಗಾರಿಕೆ ಬಂದರು, ಬೀಚ್‌ ಮಾತ್ರವಲ್ಲ ದೂರದ ಕಳಸ, ಶೃಂಗೇರಿ, ಯುಗಟೆ ಡ್ಯಾಂ, ಶಿವಮೊಗ್ಗ, ತುಮಕೂರಿಗೂ ಕರೆಯ ಮೇರೆಗೆ ಹೋಗು ತ್ತಾರೆ. ಈಶ್ವರರಿಗೆ ಅಗ್ನಿಶಾಮಕ ದಳ, ಪೊಲೀಸ್‌ ಇಲಾಖೆ, ಕೋಸ್ಟ್‌ಗಾರ್ಡ್‌ ನಿಂದ ಮೊದಲ ಕರೆ ಬರುತ್ತದೆ. ಆಕ್ಸಿಜನ್‌ ನೆರವಿಲ್ಲದೆ 40ಅಡಿ ಆಳಕ್ಕೆ, ಸ್ಕೂಬಾ ಆಕ್ಸಿಜನ್‌ಆಳವಡಿಸಿ 85 ಅಡಿ ಆಳಕ್ಕಿಳಿದು ಮುಳುಗಿದವರನ್ನು ಮೇಲಕ್ಕೆತ್ತುತ್ತಾರೆ.

ನೀರಿನಾಳದಿಂದ ಈ ವರೆಗೆ 40 ಜನರ ರಕ್ಷಣೆ, 280 ಮೃತದೇಹಗಳನ್ನು ಮೇಲಕ್ಕ ಎತ್ತಿರುವ ಈಶ್ವರ ನಯಾ ಪೈಸೆ ಪಡೆಯದೆ ಉಚಿತವಾಗಿ ಮಾಡುತ್ತಿದ್ದಾರೆ. ಮಲ್ಪೆ ಬಂದರಿನಲ್ಲಿ ಈವರೆಗೆ 75 ಬೈಕ್‌, 8 ಟೆಂಪೋ ರಿಕ್ಷಾ, 200 ಮೊಬೈಲ್‌ಗ‌ಳನ್ನು ನೀರಿನಾಳಕ್ಕೆ ಮುಳುಗಿ ಮೇಲೆ ತಂದಿದ್ದಾರೆ. ಸಮುದ್ರದ ಎಲ್ಲ ವಿಷಯಗಳಲ್ಲಿ ಪರಿಣತಿಯನ್ನು ಪಡೆದು ಈಶ್ವರ್‌ ಅವರಿಗೆ ಸಮುದ್ರಕ್ಕೆ ಸಂಬಂಧಪಟ್ಟ ಸರಕಾರಿ ಕೆಲಸ ಸಿಗಬೇಕಾದುದು ನ್ಯಾಯ.

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.