“ಉದಯವಾಣಿ’ಯಲ್ಲಿ ಚಿಣ್ಣರ ಕಲರವ
Team Udayavani, Dec 3, 2017, 4:41 PM IST
ಉಡುಪಿ: ಮಕ್ಕಳೆಂದರೆ ಸಹಜ ತುಂಟಾಟ, ನಗು, ಆಕರ್ಷಣೆ. ದೊಡ್ಡವರಿಗೆ ಮುದ್ದು ಮಾಡುವ ಮನಸ್ಸು. ಖುಷಿಯ ಹೊತ್ತು. ಇಂತಹ ಕ್ಷಣಕ್ಕೆ ಕಾರಣವಾಗಿದ್ದು, ಉದಯವಾಣಿಯ ಮಣಿಪಾಲ ಕಚೇರಿ. ಶನಿವಾರ “ಉದಯವಾಣಿ ಮಕ್ಕಳ ಫೋಟೋ ಸ್ಪರ್ಧೆ’ಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನಡೆದಿದ್ದು ವಿಜೇತ 8 ಪುಟಾಣಿಗಳು ಭಾಗಿಯಾಗಿದ್ದರು. 18 ಸಾವಿರ ಪುಟಾಣಿಗಳಲ್ಲಿ 8 ಮಂದಿ ಆಯ್ಕೆಯಾಗಿದ್ದು, ಪತ್ರಿಕಾ ಕಚೇರಿ ಮಕ್ಕಳ ಕಲರವಕ್ಕೆ ಸಾಕ್ಷಿಯಾಯಿತು.
ದಾವಣಗೆರೆಯ ಅಹನಾ ಜೈನ್ ಪ್ರಥಮ ಸ್ಥಾನಿಯಾಗಿದ್ದು, ಹೆತ್ತವ ರೊಂದಿಗೆ ಬಹುಮಾನ ಸ್ವೀಕರಿಸಿದಳು. ಕುಂದಾಪುರದ ಅದ್ವಿಕ್ ಐತಾಳ್ ದ್ವಿತೀಯ ಸ್ಥಾನಿಯಾಗಿದ್ದು, ತೃತೀಯ ಸ್ಥಾನವನ್ನು 6 ಚಿಣ್ಣರು ಪಡೆದಿದ್ದರು. ಇವರಲ್ಲಿ ಅಭಿಜ್ಞಾ ಕಾರ್ಕಳ, ಸೃಷ್ಟಿ ಕುಂದಾಪುರ, ಧಿತ್ಯಾ ಎಸ್.ವಿ.ಬಂಟ್ವಾಳ, ರುಹಿಕಾ ಆರ್.ಭಟ್ ಮಂಗಳೂರು, ಜಾನ್ವಿ ಆರ್.ಗಟ್ಟಿ ಮಂಗಳೂರು, ಹಂಸಿನಿ ಎಚ್. ಆಚಾರ್ಯ ಸಂತೆಕಟ್ಟೆ ಇದ್ದರು.
ಅದ್ಭುತ ಸ್ಪಂದನೆ ಬಹುಮಾನ ವಿತರಿಸಿದ ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿ.ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನೋದ್ ಕುಮಾರ್ ಅವರು ಮಾತನಾಡಿ, “ಉದಯವಾಣಿ ಮಕ್ಕಳ ಫೋಟೊ ಸ್ಪರ್ಧೆ’ಗೆ ಈ ಬಾರಿ ಅದ್ಭುತ ಸ್ಪಂದನೆ ದೊರೆತಿದ್ದು ರಾಜ್ಯ ಮಾತ್ರವಲ್ಲದೆ ದೇಶ, ವಿದೇಶಗಳಿಂದಲೂ ಫೋಟೊಗಳು ಬಂದಿದ್ದವು. ಅವುಗಳ ಆಯ್ಕೆಯೇ ಸವಾಲಿನ ಕೆಲಸವಾಗಿತ್ತು.
ಆಯ್ಕೆಯಾದ ಮಕ್ಕಳೊಂದಿಗಿನ ಈ ಸಂದರ್ಭ ಅಪೂರ್ವವಾದುದು. ಎಲ್ಲಾ ವಯೋಮಾನವದವರಿಗಾಗಿ
ಇರುವ “ಉದಯವಾಣಿ’ ಮಕ್ಕಳ ಫೋಟೊ ಸ್ಪರ್ಧೆಗಳ ಮೂಲಕ ಪುಟಾಣಿಗಳಿಗೂ ಅವಕಾಶ ಮಾಡಿ ಕೊಡುತ್ತಿದೆ. ಸದಾ ಸುದ್ದಿಗಳೊಂದಿಗೆ ಗಾಂಭೀರ್ಯದಲ್ಲಿರುವ ಪತ್ರಿಕಾ ಲಯಕ್ಕೆ ಇಂತಹ ಸುಂದರ ಸಂದರ್ಭಗಳು ನವೋಲ್ಲಾಸ ತಂದುಕೊಡುತ್ತವೆ.
ಇದಕ್ಕಾಗಿಯೇ ಇಂತಹ ಚಟುವಟಿಕೆಗಳನ್ನು “ಉದಯವಾಣಿ’ ಆಯೋಜಿಸುತ್ತಾ ಬಂದಿದೆ. ಮಕ್ಕಳ ಫೋಟೊ ಸ್ಪರ್ಧೆಯ ಆರಂಭದ ದಿನಗಳಿಗೆ ಹೋಲಿಸಿದರೆ ಈಗ ದೊರೆಯುತ್ತಿರುವ ಸ್ಪಂದನೆ ನಿರೀಕ್ಷೆಗಿಂತ ಬಹಳಷ್ಟು ಹೆಚ್ಚಿನದ್ದು ಎಂದು
ಹೇಳಿದರು.
“ಉದಯವಾಣಿ’ ಸಂಪಾದಕ ಎ.ವಿ. ಬಾಲಕೃಷ್ಣ ಹೊಳ್ಳ, ಎಜಿಎಂ ಸತೀಶ್ ಶೆಣೈ, ಡಿಜಿಎಂ (ಫೈನಾನ್ಸ್) ಸುದರ್ಶನ್ ಸೇರಿಗಾರ್ ಮೊದಲಾ ದವರು ಉಪಸ್ಥಿತರಿದ್ದರು. ನ್ಯಾಶನಲ್ ಹೆಡ್ ಮ್ಯಾಗಜಿನ್ ಆನಂದ್ ಕೆ. ಅವರು ಪ್ರಸ್ತಾವನೆಗೈದು ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ