ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಪೌರಕಾರ್ಮಿಕರು ಅನಿವಾರ್ಯ: ಭಟ್
Team Udayavani, Sep 28, 2018, 6:20 AM IST
ಉಡುಪಿ: ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಪೌರಾಯುಕ್ತರು ಇಲ್ಲದಿದ್ದರೂ ತೊಂದರೆ ಇಲ್ಲ. ಪೌರಕಾರ್ಮಿಕರಿಲ್ಲದಿದ್ದರೆ ಆಡಳಿತ ನಡೆಸಲಾಗುವುದಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಅವರು ಪುರಭವನದಲ್ಲಿ ಗುರುವಾರ ನಡೆದ ಪೌರಕಾರ್ಮಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೌರಕಾರ್ಮಿಕರದ್ದು ಗೌರವಾನ್ವಿತ ಕೆಲಸ. ನಗರಸಭೆಗೆ ಸ್ವತ್ಛತೆಗೆ ಯಾವುದೇ ಪ್ರಶಸ್ತಿ ಬಂದಿದ್ದಲ್ಲಿ ಅದು ಪೌರಕಾರ್ಮಿಕರಿಗೆ ಸಲ್ಲುತ್ತದೆ. ಅದು ಅವರ ಶ್ರಮಕ್ಕೆ ಬಂದ ಪ್ರಶಸ್ತಿ ಎಂದರು.ಆದರ್ಶ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಜಿ. ಚಂದ್ರಶೇಖರ್ ಆರೋಗ್ಯ ಮಾಹಿತಿ ನೀಡಿ, ಸರಿಯಾದ ಆಹಾರ ಪದ್ದತಿಯಿಂದ ಆರೋಗ್ಯಕರ ಜೀವನ ನಡೆಸಬಹುದು.
ಪ್ರತಿಯೊಂದು ಕೂಡ ಮಿತಿಯಾಗಿರಬೇಕು. ಅತೀಯಾದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.
ಪೌರಕಾರ್ಮಿಕರ ದಿನಾಚರಣೆಯಂದು ಸರಕಾರ ನೀಡುವ 3,500 ರೂ.ಗಳನ್ನು ಪೌರಕಾರ್ಮಿಕರಿಗೆ ನೀಡಲಾಗುವುದು ಎಂದು ಆಯುಕ್ತ ಜನಾರ್ದನ್ ಈ ಸಂದರ್ಭ ಘೋಷಿಸಿದರು.
ಈ ಸಂದರ್ಭ ಉತ್ತಮ ಕಾರ್ಯ ನಿರ್ವಹಿಸಿದ ಐವರು ಪೌರಕಾರ್ಮಿಕರಿಗೆ ಸಮ್ಮಾನಿಸಲಾಯಿತು. ಉದ್ಯಮಿ ಜೆರ್ರಿ ವಿನ್ಸೆಂಟ್ ಡಯಾಸ್ ಪೌರಕಾರ್ಮಿಕರಿಗೆ ಉಡುಗೊರೆಯನ್ನು ವಿತರಿಸಿದರು. ವೇದಿಕೆಯಲ್ಲಿ ಎಂಜಿನಿಯರ್ಗಳಾದ ರಾಘವೇಂದ್ರ, ಗಣೇಶ್ ಉಪಸ್ಥಿತರಿದ್ದರು.
ಕರುಣಾಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಗಾಯತ್ರಿ ನಿರೂಪಿಸಿದರು. ರಾಘವೇಂದ್ರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ