ಸಿಆರ್‌ಝಡ್‌ ನೋಟಿಫಿಕೇಶನ್‌ ಮೂಲ ನಿವಾಸಿಗಳಿಗೇ ಅಡ್ಡಿ


Team Udayavani, Sep 23, 2018, 10:31 AM IST

crz.jpg

ಪಡುಬಿದ್ರಿ: ಪರಿಸರ ಇಲಾಖೆ 2011ರಲ್ಲಿ (ಮೂಲತಃ 1991ರಲ್ಲಿ ) ಜಾರಿಗೆ ತಂದಿರುವ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ನೋಟಿಫಿಕೇಶನ್‌ ಸಮುದ್ರ ತೀರದ ಮೂಲ ನಿವಾಸಿಗಳಿಗೇ ತಮ್ಮ ಮೂಲ ಸೌಲಭ್ಯಗಳನ್ನು ಪಡೆಯಲು ಅಡ್ಡಿ ಮಾಡುತ್ತಿದೆ ಎಂದು ಮೀನುಗಾರ ಸಮುದಾಯ ಆಕ್ಷೇಪಿಸುತ್ತಿದೆ.  ಸಿಆರ್‌ಝಡ್‌ನ‌ ಆಶಯ ಭಾರತದ “ಕರಾ ವಳಿಯು ನಿಮಗೇ ಸಂಬಂಧಿಸಿದ್ದು’ ಎನ್ನುವುದು. ವಿಶಾಲ ಅರ್ಥದಲ್ಲಿ ಇದು ಭಾರತೀಯ ರಿಗಾದರೂ ಕರಾವಳಿಯನ್ನೇ ನೆಚ್ಚಿ ಬದುಕುತ್ತಿರುವ ಮೀನುಗಾರ ಸಮುದಾಯ ಇದರ ನೇರ ಅಡ್ಡ ಪರಿಣಾಮಗಳನ್ನು ಅನುಭವಿಸುವಂತಾಗಿದೆ.

ಮೂಲ ಆಶಯ – ವಾಸ್ತವ
ಸಿಆರ್‌ಝಡ್‌ ಮೂಲ ಆಶಯಗಳಲ್ಲಿ ಕರಾವಳಿಯ ಮೂಲ ನಿವಾಸಿಗಳ ಜೀವನ ಕ್ರಮವನ್ನು
ಬೆಂಬಲಿಸುವುದೂ ಒಂದು. ಜೈವಿಕ ಸಮತೋಲನ ಕಾಪಾಡಿಕೊಳ್ಳಲು ಹಾಗೂ ಕರಾವಳಿಯಲ್ಲಿ ಸಮರ್ಥವಾಗಿ ಅರ್ಥ ವ್ಯವಹಾರವನ್ನು ಬೆಂಬಲಿಸಲು ಈ ನೋಟಿಫಿಕೇಶನ್‌ ಒತ್ತು ನೀಡುತ್ತದೆ. ಆದರೆ ಈ ನೋಟಿಫಿಕೇಶನ್‌ನಿಂದಾಗಿ ಮನೆ ದುರಸ್ತಿಗೊಳಿಸುವುದಕ್ಕೂ ಪರವಾನಿಗೆ ಸುಲಭ ವಾಗಿ ಲಭಿಸುತ್ತಿಲ್ಲ. ಸವಲತ್ತುಗಳು ಲಭಿಸುವುದಕ್ಕೂ ಅಡ್ಡಗಾಲಾಗಿ ಕಾಡುತ್ತಿದೆ. 

ಸಿಆರ್‌ಝಡ್‌ ವಿಭಾಗಗಳು
ಸಿಆರ್‌ಝಡ್‌ನ‌ಲ್ಲಿ 1, 2, 3 ಹಾಗೂ 4 ವಿಭಾಗಗಳಿವೆ. ವಿಭಾಗ 1ರಲ್ಲಿ ಸಮುದ್ರದ ಉಬ್ಬರ ಮತ್ತು ಇಳಿತದ ನಡುವಣ ಮೂಲ ನಿವಾಸಿಗಳು ವಾಸಿಸುವ ಭೂಭಾಗವು ಸೇರಿದ್ದು, ಪರಿಸರ ಸೂಕ್ಷ್ಮ ಜೈವಿಕ ವಲಯವನ್ನು ಹೊಂದಿದೆ. 2ನೇ ವಿಭಾಗವು ಸಮುದ್ರ ತೀರದ ಅಭಿವೃದ್ಧಿ ಹೊಂದಿದ ಪ್ರದೇಶ. ಮನೆ, ಇತರ ಕಟ್ಟಡಗಳು ಮತ್ತು ನಗರ ಭಾಗವನ್ನು ಹೊಂದಿರುತ್ತದೆ. 3ನೇ ವಿಭಾಗದಲ್ಲಿ ಅಭಿವೃದ್ಧಿಯಾಗದ ಭೂಭಾಗ, ಗ್ರಾಮೀಣ ಪ್ರದೇಶಗಳು, ಪರಿಸರ ಸೂಕ್ಷ್ಮವಲ್ಲದ ಪ್ರದೇಶ ಸೇರಿದ್ದು, ಸಮುದ್ರದ ಉಬ್ಬರ ರೇಖೆಯಿಂದ 0 – 200 ಮೀ. (ಅಭಿವೃದ್ಧಿ ಹೊಂದದ ಪ್ರದೇಶ) ಹಾಗೂ 200 – 500 ಮೀ.ವರೆಗಿನ ಎಂಬುದಾಗಿ ಎರಡು ಉಪವಿಭಾಗಗಳನ್ನು ಹೊಂದಿದೆ. 4ನೇ ವಿಭಾಗ ಸಮುದ್ರದ ಇಳಿತದ ರೇಖೆಯಿಂದ ಸಮುದ್ರದಲ್ಲಿ 12 ನಾಟಿಕಲ್‌ ಮೈಲುಗಳ ಪ್ರದೇಶವನ್ನು ಹೊಂದಿರುತ್ತದೆ.  

ಬದುಕು ಕಟ್ಟುವ ವಾತಾವರಣ ನಿರ್ಮಾಣವಾಗಲಿ
ಸಿಆರ್‌ಝಡ್‌ ವಲಯದಲ್ಲಿ ವಾಸಿಸುವ ಮೀನುಗಾರ ಸಮುದಾಯದವರಿಗೆ ಹಳೆ ಮನೆ ದುರಸ್ತಿ ಮಾಡುವುದಕ್ಕೆ ಪರವಾನಿಗೆ ಅಥವಾ ಸಿಆರ್‌ಝಡ್‌ ಎನ್‌ಒಸಿ ಪಡೆದುಕೊಳ್ಳಲು ವರ್ಷಗಳೇ ಕಾಯಬೇಕಾದ ಪರಿಸ್ಥಿತಿ ಇದೆ. ಭೂ ಪರಿವರ್ತನೆ ಆಗುವುದಿಲ್ಲ. ಹೊಸ ಮನೆಗೆ ಪರವಾನಿಗೆ ಲಭ್ಯವಾಗುವುದಿಲ್ಲ. ಮತ್ಸಾéಶ್ರಯ ಯೋಜನೆ ದಕ್ಕಸಿಕೊಳ್ಳಲೂ ತೊಂದರೆ ಎದುರಾಗುತ್ತಿವೆ. ಅಲ್ಲದೆ ಇಲ್ಲಿನ ಮೂಲ ನಿವಾಸಿ ಮೀನುಗಾರರಿಗೆ ಸರಕಾರದ ಯಾವುದೇ ಸೌಲಭ್ಯ ಸಿಗದು. ಕೇಂದ್ರದ ಪ್ರಧಾನ ಮಂತ್ರಿ ಆವಾಸ್‌, ಇಂದಿರಾ ಆವಾಸ್‌, ಬಸವ ವಸತಿ ಯೋಜನೆಗಳಿಂದ ಮೀನುಗಾರರು ವಂಚಿತರಾಗಿದ್ದಾರೆ. ಮೀನುಗಾರ ಸಮುದಾಯಕ್ಕೆ ಬದುಕು ಕಟ್ಟುವಂತಹ ವಾತಾವರಣದ ನಿರ್ಮಾಣವಾಗಲಿ. ಇದು ಸರಕಾರದ ಜವಾಬ್ದಾರಿಯೂ ಹೌದು ಎಂದು ಬಡಾ ಗ್ರಾಮ ಉಚ್ಚಿಲದ ಕರಾವಳಿ ರಕ್ಷಣಾ ವೇದಿಕೆಯ ಶಿವಕುಮಾರ್‌ ಆರ್‌. ಹೇಳುತ್ತಾರೆ. 

ಆದ್ಯತೆಗಳು
ಸಿಆರ್‌ಝಡ್‌ ಪ್ರದೇಶದಲ್ಲಿ ಮೀನುಗಳ ಸಂತಾನ ವೃದ್ಧಿಗೆ ಮೊದಲ ಆದ್ಯತೆ. ಘನ ಹಾಗೂ ಶುದ್ಧೀಕರಿಸದ ದ್ರವ ತ್ಯಾಜ್ಯಗಳನ್ನು ಇಲ್ಲಿ ವಿಸರ್ಜಿಸುವುದಕ್ಕೆ ನಿಷೇಧವಿದೆ. ಸಿಆರ್‌ಝಡ್‌ 2ರಲ್ಲಿ ನಿರ್ಮಾಣಗಳ ದುರಸ್ತಿ ಮತ್ತು ಪುನರ್‌ ನಿರ್ಮಾಣಕ್ಕೆ ಸ್ಥಳೀಯಾಡಳಿತದ ಪರವಾನಿಗೆಯೊಂದಿಗೆ ಅವಕಾಶ ಇದೆ. ಸಿಆರ್‌ಝಡ್‌ 3ರಲ್ಲಿ ಸ್ಥಳೀಯ ಮೀನುಗಾರ ಸಮೂಹಕ್ಕೆ ವಿಶೇಷ ಆದ್ಯತೆಯನ್ನು ನೀಡಲಾಗಿದೆ. ಯಾವುದೇ ಹೊಸ ನಿರ್ಮಾಣಗಳಿಗೆ ಇಲ್ಲಿ ಅವಕಾಶವಿಲ್ಲ. ಇವೆಲ್ಲವುಗಳ ಮೇಲೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕರಾವಳಿಗರ ಸಮುದಾಯದ ಮೂವರು ಸದಸ್ಯರಿರುವ ಕರಾವಳಿ ನಿಯಂತ್ರಣ ವಲಯ ಆಡಳಿತ ವ್ಯವಸ್ಥೆ ಕಣ್ಗಾವಲು ಇರಿಸುತ್ತದೆ.

ಸಿಆರ್‌ಝಡ್‌ನ‌ ಹೊಸ ನೋಟಿಫಿಕೇಶನ್‌ನಂತೆ ಸಿಆರ್‌ಝಡ್‌ನ‌ ಹಳೇ ನಕಾಶೆಯ ಅವಧಿ ಮುಗಿದು, ಅದು ಪರಿಷ್ಕರಣೆ ಆಗುವವರೆಗೆ ಭೂ ಪರಿವರ್ತನೆ, ಎನ್‌ಒಸಿ ಅವಕಾಶ ನೀಡುವಂತಿಲ್ಲವೆಂದು ಗ್ರೀನ್‌ ಟ್ರಿಬ್ಯೂನಲ್‌ ಆದೇಶ ಹೊರಡಿಸಿತ್ತು. ಈಗ ಸಿಆರ್‌ಝಡ್‌ ಭೂಪಟವು ತಯಾರಾಗಿದೆ. ಅದು ಜಿಲ್ಲಾಡಳಿತದ ಕೈಸೇರಿದ್ದು, ಇನ್ನು 1991ರ ಹಿಂದಿನ ಮೂಲ ನಿವಾಸಿಗಳ ಭೂ ಪರಿವರ್ತನೆ, ಎನ್‌ಒಸಿಗಳ ನೀಡಿಕೆ ಕುರಿತಾಗಿ ಸಭೆಯೊಂದನ್ನು ಕರೆಯಲಾಗುವುದು. ಸಭೆಯ ತೀರ್ಮಾನದಂತೆ ಮುಂದೆ ಕ್ರಮಗಳನ್ನು ಸಡಿಲಿಸಲಾಗುವುದು. ಸರಕಾರದ ಸವಲತ್ತು ಪಡೆಯಲು ಈಗಲೂ ಅಡ್ಡಿ ಇಲ್ಲ.
ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಉಡುಪಿ ಜಿಲ್ಲಾಧಿಕಾರಿ

* ಆರಾಮ

ಟಾಪ್ ನ್ಯೂಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

3-hegde

LS Polls: ಮಾಡಿದ ಕೆಲಸ ನೋಡಿ ಮತ ನೀಡಿ: ಜಯಪ್ರಕಾಶ್‌ ಹೆಗ್ಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

13-fusion

UV Fusion: ಏರಿಯಾ 51

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

1-asasa

Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.