ಕಲ್ಪವೃಕ್ಷ  ಸಂಶೋಧನೆ ಕೇಂದ್ರಕ್ಕೆ ಕಾಯಕಲ್ಪ ನಿರೀಕ್ಷೆ


Team Udayavani, Sep 25, 2021, 8:10 AM IST

ಕಲ್ಪವೃಕ್ಷ  ಸಂಶೋಧನೆ ಕೇಂದ್ರಕ್ಕೆ ಕಾಯಕಲ್ಪ ನಿರೀಕ್ಷೆ

ಕಾರ್ಕಳ: ಕಡಬ ತಾಲೂಕಿನ ಕಿದುವಿನಲ್ಲಿರುವ ಅಂತಾರಾಷ್ಟ್ರೀಯ ತೆಂಗು ಜೀನ್‌  ಬ್ಯಾಂಕ್‌ ದಕ್ಷಿಣ ಏಷ್ಯಾದ ಏಕೈಕ ತೆಂಗು ಅಭಿವೃದ್ಧಿ ಕೇಂದ್ರವಾಗಿದ್ದು, ಇದೀಗ ಇನ್ನಷ್ಟು ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ. ಸ್ಥಳೀಯ ಮೂಲದವರೇ ಆಗಿರುವ ಶೋಭಾ ಕರಂದ್ಲಾಜೆ ಅವರು ಕೇಂದ್ರದಲ್ಲಿ ರಾಜ್ಯ ಕೃಷಿ ಸಚಿವರಾಗಿರುವುದು ಇದಕ್ಕೆ ಕಾರಣ.

ತಮಿಳುನಾಡು, ಕೇರಳದ ಬಳಿಕ ಹೆಚ್ಚು ತೆಂಗು ಬೆಳೆಯುವ ರಾಜ್ಯ ಕರ್ನಾಟಕ. ಕರಾವಳಿ ಯಲ್ಲಂತೂ ಹೆಚ್ಚಿನ ಪ್ರಮಾಣದಲ್ಲಿ ತೆಂಗು ಬೆಳೆಗಾರರಿದ್ದಾರೆ. ಕಿದು ಕೇಂದ್ರದಲ್ಲಿ ವಿಶ್ವದ 140 ತಳಿಗಳನ್ನು ಸಂರಕ್ಷಿಸಿರುವುದರ ಜತೆಗೆ ಉತ್ತಮ ತಳಿಗಳ ಅಭಿವೃದ್ಧಿ, ಸಸಿ, ಬೀಜ ವಿತರಣೆ ನಡೆಸಲಾಗುತ್ತಿದೆ.

ಇಲ್ಲಿ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ) ಅಡಿ ಯಲ್ಲಿ 1970ರಲ್ಲಿ ಆರಂಭಿಸಿ, ತೆಂಗು, ಅಡಿಕೆ ಮತ್ತು ಕೋಕೋಗಳ ತಳಿ ಉತ್ಪಾದನಾ ಕೇಂದ್ರ ಸ್ಥಾಪಿಸ ಲಾಯಿತು. 1972ರಲ್ಲಿ 121.41 ಹೆಕ್ಟೇರ್‌ (300 ಎಕರೆ) ಅರಣ್ಯ ಭೂಮಿ ಯನ್ನು ರಾಜ್ಯ ಸರಕಾರದಿಂದ 30 ವರ್ಷ ಅವಧಿಗೆ ಗುತ್ತಿಗೆಗೆ ಪಡೆದು ಬೀಜ ತೋಟ ವಾಗಿ ಅಭಿವೃದ್ಧಿ ಪಡಿಸಲಾಗಿತ್ತು. 1998 ರಲ್ಲಿ ಜೀನ್‌ ಬ್ಯಾಂಕ್‌ ಸ್ಥಾಪಿಸಲಾಯಿತು. 2001ರಲ್ಲಿ ಸಂಶೋಧನಾ ಕೇಂದ್ರವಾಗಿ ಮೇಲ್ದರ್ಜೆಗೇರಿಸಿ ಕೊಕೊನೆಟ್‌ ಜೆನೆಟಿಕ್‌ ರಿಸೋರ್ಸ್‌ ನೆಟ್ವರ್ಕ್‌ (ಸಿಒಜಿಇಎನ್‌ಟಿ) ಆಗಿ ಅಭಿವೃದ್ಧಿ ಪಡಿಸಲಾಗಿದೆ.

ಲೀಸ್‌ ಅವಧಿ 2000ಕ್ಕೆ ಮುಗಿದಿದೆ. ಉನ್ನತ ಅಧಿಕಾರಿಗಳ ನಿಷ್ಕಾಳಜಿಯಿಂದ ಅರಣ್ಯ ಇಲಾಖೆ ಭೂಮಿಯನ್ನು ಮರಳಿ ನೀಡಬೇಕು ಅಥವಾ ಅನ್ಯ ಪ್ರದೇಶದಲ್ಲಿ ಅರಣ್ಯ ಬೆಳೆಯಲು 19.26 ಕೋ.ರೂ ನೀಡಬೇಕೆಂದು ಸೂಚಿಸಿತ್ತು. ನವೀಕರಿಸಲು ಅಧಿಕಾರಿಗಳು ಉತ್ಸಾಹದ ತೋರದ ಪರಿಣಾಮ ಕೇಂದ್ರವನ್ನು ಆಂಧ್ರ ಪ್ರದೇಶದ ಪೂರ್ವ ಗೋದಾವರಿಗೆ ಸ್ಥಳಾಂತರಿ ಸುವ ಪ್ರಯತ್ನಗಳೂ ನಡೆದಿದ್ದವು. ಸಕಾಲದಲ್ಲಿ ಉದಯವಾಣಿ ವರದಿ ಪ್ರಕಟಿಸಿ, ರೈತರ ಪರ ನಿಂತ ಪರಿಣಾಮ ಕೇಂದ್ರ ಸಚಿವರಾಗಿದ್ದ ಸದಾನಂದ ಗೌಡರು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದು ತಾತ್ಕಾಲಿಕ ತಡೆ ನೀಡುವಲ್ಲಿ ಯಶಸ್ವಿಯಾಗಿದ್ದರು. ಪೂರಕವಾಗಿ ಹೋರಾಟಗಳೂ ನಡೆದಿದ್ದವು. ಗುತ್ತಿಗೆ ಒಪ್ಪಂದ ನವೀಕರಣ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಆಗಬೇಕಿರುವುದೇನು?:

ಭೂಗುತ್ತಿಗೆ ನವೀಕರಿಸುವುದು, ಎಫ್ಪಿಎ ಮೊತ್ತ ವಿನಾಯಿತಿ ಅಥವಾ ಸರಕಾರದಿಂದಲೇ ಭರಿಸುವುದು. ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ತಿಳಿಸಿದಂತೆ ಅರಣ್ಯ ಬೆಳೆಸುವುದರಿಂದ ಪರಿಸರಕ್ಕೆ ಆಗುವ ಲಾಭಕ್ಕೆ ಸರಿಸಮನಾಗಿ ಲೀಸ್‌ಗೆ ಪಡೆದುಕೊಂಡ ಸಂಸ್ಥೆ ಸಮನಾಂತರ ಉದ್ದೇಶಕ್ಕೆ ಆ ಭೂಮಿಯನ್ನು ಬಳಸುತ್ತಿದ್ದರೆ ಅಂತಹ ಭೂಮಿಯನ್ನು ಒಪ್ಪಂದದಲ್ಲಿ ನವೀಕರಿಸಲು ಅವಕಾಶವಿದೆ ಎಂಬ ಅಂಶದ ಜತೆಗೆ ರಿಯಾಯಿತಿಗೆ ಸುಪ್ರೀಂ ಕೊರ್ಟ್‌ ನೇಮಿಸಿದ ಎನ್‌ಪವರ್‌ವೆುಂಟ್‌ ಸಮಿತಿಗೆ ಮನದಟ್ಟು ಮಾಡಬೇಕಿದೆ. ಕೇಂದ್ರವು ಸಂಶೋಧನೆ ಉದ್ದೇಶಕ್ಕಾಗಿ ಬಳಕೆಯಾಗುತ್ತಿದೆ. ಪರಿಸರಕ್ಕೆ ಪೂರಕವಾಗಿದೆ. ಕೇಂದ್ರವು ತೆಂಗು, ಅಡಿಕೆ ಮತ್ತು ಕೋಕೊ ಗುಣಮಟ್ಟದ ಅಗತ್ಯಗಳನ್ನು ಪೂರೈಸುತ್ತದೆ. ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ರೈತರು ಪ್ರತಿವರ್ಷ ನೆಡುತೋಪುಗಳಿಗೆ ಬೀಜಗಳನ್ನು ಖರೀದಿಸುತ್ತಾರೆ. ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ರೈತರು ಕೇಂದ್ರದ ಪ್ರಧಾನ ಗ್ರಾಹಕರಾಗಿದ್ದಾರೆ.

ಪ್ರಯೋಜನಗಳೇನು? :

ರಾಜ್ಯದ ವಿವಿಧ‌ ರೈತ ಗುಂಪುಗಳಿಗೆ ತರಬೇತಿ ನೀಡಲು ಸಂಸ್ಥೆ ಸಹಾಯಕವಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ರೈತ ಗುಂಪು ಕೇಂದ್ರಕ್ಕೆ ಭೇಟಿ ನೀಡುತ್ತಿದೆ. ವಿವಿಧ ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಮತ್ತು ಸಂಶೋಧಕರು ತಮ್ಮ ಶೈಕ್ಷಣಿಕ ಅಗತ್ಯಗಳಿಗೆ ಕೇಂದ್ರವನ್ನು ಅವಲಂಬಿಸಿ¨ªಾರೆ. ದ.ಕ. ಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆ ಗಳ ಶಾಲೆ ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕ ಅಗತ್ಯಗಳಿಗಾಗಿ ಕೇಂದ್ರಕ್ಕೆ ಭೇಟಿ ನೀಡುತ್ತಿರುತ್ತಾರೆ. ಬಿಎಸ್ಸಿ (ಅಗ್ರಿಕಲ್ಚರ್‌), ಎಂಎಸ್ಸಿ (ಅಗ್ರಿಕಲ್ಚರ್‌) ಮತ್ತು ಕೃಷಿ ಕ್ಷೇತ್ರದ ಸಂಶೋಧನಾ ವಿದ್ಯಾರ್ಥಿಗಳು ಕೃಷಿ ಅಧ್ಯಯನಕ್ಕೆ ಭೇಟಿ ನೀಡುತ್ತಿದ್ದಾರೆ.

ಹೊಸದಿಲ್ಲಿಯ ಐಸಿಎಆರ್‌ನ ಇತ್ತೀಚಿನ ವರದಿಗಳ ಪ್ರಕಾರ, ದೇಶದ 120 ಐಸಿಎಆರ್‌ ಸಂಶೋಧನಾ ಸಂಸ್ಥೆಗಳಲ್ಲಿ ಸಿಪಿಸಿಆರ್‌ಐ 3ನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಸಂಸ್ಥೆಗಳ ಪ್ರಾದೇಶಿಕ / ಉಪ ಕೇಂದ್ರಗಳಲ್ಲಿ ಆದಾಯ ಉತ್ಪಾದನೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಸ್ಥಳಿಯರಿಗೆ ಉದ್ಯೋಗ ಒದಗಿಸುತ್ತಿದೆ.

ತೆಂಗಿನ ಮರಗಳು:

ರಾಜ್ಯದಲ್ಲಿ :  6.60 ಕೋಟಿಗೂ ಅಧಿಕ

.. ಜಿಲ್ಲೆ:  40 ಲಕ್ಷ

ಉಡುಪಿ ಜಿಲ್ಲೆ :  35.50 ಲಕ್ಷ

ತೆಂಗು ಬೆಳೆಗಾರರು:

.. ಜಿಲ್ಲೆ :  ಸುಮಾರು 7 ಲಕ್ಷ

ಉಡುಪಿ ಜಿಲ್ಲೆ :  ಸುಮಾರು 6 ಲಕ್ಷ

ತೆಂಗು ಬೆಳೆಯುವ ಪ್ರದೇಶ:

ರಾಜ್ಯದಲ್ಲಿ :  4,40,514 ಹೆಕ್ಟೇರ್‌

ವಾರ್ಷಿಕ ತೆಂಗು ಬೆಳೆ

ರಾಜ್ಯದಲ್ಲಿ :  217.6 ಕೋಟಿ

ಸಿಪಿಸಿಆರ್‌ಐ ಕಿದು ಕೇಂದ್ರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುವೆ. ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ ಚರ್ಚಿಸಿ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವೆ.ಶೋಭಾ ಕರಂದ್ಲಾಜೆ,  ಕೇಂದ್ರ ಕೃಷಿ ಸಚಿವರು 

-ಬಾಲಕೃಷ್ಣ  ಭೀಮಗುಳಿ

ಟಾಪ್ ನ್ಯೂಸ್

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.