ಕಾಲೇಜು ಅತಿಥಿ ಉಪನ್ಯಾಸಕರ ಪ್ರತಿಭಟನೆ
Team Udayavani, Aug 2, 2017, 6:25 AM IST
ಉಡುಪಿ: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಾಮಾಜಿಕ ನ್ಯಾಯಕ್ಕಾಗಿ ಉಡುಪಿ ತಾಲೂಕಿನ ಸರಕಾರಿ ಕಾಲೇಜಿನ ಅತಿಥಿ ಉಪನ್ಯಾಸಕರು ಅಜ್ಜರಕಾಡು ಸಮೀಪದ ಹುತಾತ್ಮ ಸೈನಿಕರ ಸ್ಮಾರಕದ ಮುಂದೆ ಮಂಗಳವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಅಜ್ಜರಕಾಡು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಶ್ರೀನಿವಾಸ್ ಕೆ., ಪದಾಧಿಕಾರಿಗಳಾದ ಸಂತೋಷ್, ರಫೀಕ್ ಖಾನ್, ಮಂಜಪ್ಪದ್ಯಾಗೋಣಿ, ಬಾಕೂìರು ಕಾಲೇಜಿನ ವರದರಾಜ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಅತಿಥಿ ಉಪನ್ಯಾಸಕರ ನೇಮಕಾತಿ ಗೊಂದಲ ನಿವಾರಿಸಬೇಕು, ಕಾಲೇಜುಗಳಲ್ಲಿ ಪಾಠ ಪ್ರವಚನಗಳು ಎಂದಿನಂತೆ ನಡೆಯುವಂತೆ ಮಾಡಬೇಕು, 2016-17ರಲ್ಲಿ ಕಾರ್ಯನಿರ್ವಹಿಸಿದವರು ಮತ್ತು 2017-18ರ ಮೊದಲ ಮೆರಿಟ್ ಲಿಸ್ಟ್ನಲ್ಲಿ ಆಯ್ಕೆಯಾದವರನ್ನು ಮುಂದುವರಿಸಬೇಕು, ಪ್ರತಿ ತಿಂಗಳು ಗೌರವಧನ ಕಲ್ಪಿಸಬೇಕು, ಸೇವಾ ಭದ್ರತೆ ಕಲ್ಪಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸರಕಾರದ ಮುಂದಿಡಲಾಯಿತು.
ಅತಿಥಿ ಉಪನ್ಯಾಸಕರ ನೇಮಕದ ಗೊಂದಲದಿಂದ ವಿದ್ಯಾರ್ಥಿಗಳು ಪಾಠದಿಂದ ವಂಚಿತರಾಗುತ್ತಿದ್ದಾರೆ. ಪ್ರಸ್ತುತ ತಿಂಗಳಿಗೆ 11 ರಿಂದ 13,000 ರೂ. ಗೌರವ ಧನ ನೀಡಲಾಗುತ್ತಿದ್ದು ಮೂರು ತಿಂಗಳಿಗೊಮ್ಮೆ ಬರುತ್ತಿದೆ. ಹೊಸ ಮಾನದಂಡ ಆದರಿಸಿ ಹೊಸ ಮೆರಿಟ್ ಲಿಸ್ಟ್ಗಳನ್ನು ತಯಾರಿಸಿದಲ್ಲಿ ಸುಮಾರು 3,500 ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಉದ್ಯೋಗ ಕಳೆದುಕೊಳ್ಳಲಿರುವರು ಎಂದು ಕಳವಳ ವ್ಯಕ್ತಪಡಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ