ಅಂತರಗಂಗೆ ನಿಯಂತ್ರಣಕ್ಕೆ ಕಾಂಪೋಸ್ಟ್‌ ವಿಧಾನದ ಪರಿಹಾರ

ರೈತ ಮಿತ್ರನಾಗಿ ಬದಲಾಗಲಿದೆಯೇ ರೈತ ಶತ್ರುವಾಗಿದ್ದ ಜಲಕಳೆ ?

Team Udayavani, Dec 2, 2019, 5:03 AM IST

3011KOTA4E

ವಿಶೇಷ ವರದಿ-ಕೋಟ: ಕರಾವಳಿಯಲ್ಲಿ ಕೃಷಿಭೂಮಿಗೆ ಪ್ರತಿ ವರ್ಷ ವಾಟರ್‌ಪರ್ನ್ ಎಂಬ ಅಂಗರಗಂಗೆ ಜಲಕಳೆ ಮಾರಕವಾಗಿ ಪರಿಣಮಿಸುತ್ತದೆ. ಆವಿ ಮಣ್ಣಿನ ಹೊಂಡ, ಕೆರೆ, ಹೊಳೆ, ತೋಡುಗಳಲ್ಲಿ ಹೇರಳವಾಗಿ ಕಂಡುಬರುವ ಈ ಕಳೆ ಮಳೆ ಬಿದ್ದಾಕ್ಷಣ ಹಿಗ್ಗಿ ಸಹಸ್ರ-ಸಹಸ್ರ ಸಂಖ್ಯೆಯಾಗಿ ನೆರೆ ನೀರಿನೊಂದಿಗೆ ಬೆರೆತು ಕೃಷಿ ಭೂಮಿಗೆ ಲಗ್ಗೆ ಇಟ್ಟು ಭತ್ತದ ಸಸಿಯನ್ನು ನಾಶಗೊಳಿಸುತ್ತದೆ ಹಾಗೂ ಜಲಸಸ್ಯ, ಜಲಚರಗಳಿಗೂ ಕಂಟಕವಾಗುತ್ತದೆ. ಹೀಗಾಗಿ ಇದನ್ನು ನಾಶಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಸಾಕಷ್ಟು ಹೋರಾಟ ನಡೆಸಿದ್ದರು ಮತ್ತು ಸರಕಾರದ ಮಟ್ಟದಲ್ಲೂ ಈ ಕುರಿತು ಚರ್ಚೆಯಾಗಿತ್ತು. ಆದರೆ ವಿಜ್ಞಾನಿಗಳು ಎಷ್ಟೇ ಪ್ರಯತ್ನಿಸಿದರೂ ರಾಸಾಯನಿಕ, ಜೈವಿಕ ವಿಧಾನದ ಮೂಲಕ ಇದನ್ನು ಸಮರ್ಪಕವಾಗಿ ನಿಯಂತ್ರಿಸಲು ಅಸಾಧ್ಯವಾಗಿತ್ತು. ಆದರೆ ಇದೀಗ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭೌತಿಕ ವಿಧಾನದ ಮೂಲಕ ಇದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೈವಿಕ ವಿಧಾನದಲ್ಲಿ ಯಶಸ್ವಿ
ಸರಕಾರದ ಸೂಚನೆಯಂತೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ನವೀನ್‌ ಅವರು ಸುಮಾರು ಎರಡು ವರ್ಷಗಳ ಅಂತರಗಂಗೆ ನಿಯಂತ್ರಣಕ್ಕೆ ರಾಸಾಯನಿಕ, ಜೈವಿಕ ವಿಧಾನವನ್ನು ಸಂಶೋಧನೆಗೊಳಪಡಿಸಿದ್ದರು. ಜೈವಿಕ ವಿಧಾನದಲ್ಲಿ ಸರೊràಬೇಗಸ್‌ ಸಾಲ್ವಿನಿಯಾ ಎಂಬ ದುಂಬಿಯನ್ನು ಬಳಸಿಕೊಂಡು ಪ್ರಯೋಗ ನಡೆಸಲಾಗಿತ್ತು. ಆದರೆ ಆ ವಿಧಾನ ವಿಫಲವಾಯಿತು. ಅನಂತರ ರಾಸಾಯನಿಕ ವಿಧಾನದಲ್ಲಿ ಸಸ್ಯನಾಶಕ ಗಳನ್ನು ಬಳಸಿ ಪ್ರಯೋಗ ಮಾಡಿದರೂ ಕೈಗೂಡಲಿಲ್ಲ. ಹೀಗಾಗಿ ಕೊನೆಯದಾಗಿ ಭೌತಿಕ ವಿಧಾನದಿಂದ ಎರೆಹುಳ ಕಾಂಪೋಸ್ಟ್‌ ಗೊಬ್ಬರ ತಯಾರಿಕೆಯ ಪ್ರಯೋಗ ನಡೆಸುತ್ತಿದೆ.

ಯಶಸ್ವಿಗೊಂಡ ಪ್ರಯೋಗ
ನೀರಿನಿಂದ ಅಂತರಗಂಗೆಯನ್ನು ಬೇರ್ಪಡಿಸಿ ಅಂತರಗಂಗೆ ಮತ್ತು ಸಗಣಿ ಗೊಬ್ಬರವನ್ನು ಮಿಶ್ರಣ ಮಾಡಿ ಆ ಮಿಶ್ರಣಕ್ಕೆ ಭಾರತೀಯ ಸಾವಯವ ಸಂಸ್ಥೆ ಬಿಡುಗಡೆ ಮಾಡಿರುವ ವೆಸ್ಟ್‌ ಡಿಕಂಪೋಸರ್‌ನ ದ್ರಾವಣವನ್ನು ಬೆರೆಸಿ 30 ದಿನಗಳವರೆಗೆ ಕೊಳೆಸಿ ಅನಂತರ ಎರೆಹುಳುಗಳನ್ನು ಬಿಟ್ಟಾಗ ಅಂತರಗಂಗೆ ಎರೆ ಕಾಂಪೋಸ್ಟ್‌ ಆಗಿ ಪರಿವರ್ತಿಸಲಾಗುತ್ತದೆ ಮತ್ತು ಈ ಕಂಪೋಸ್ಟ್‌ನಲ್ಲಿ ಸಾರಜನಕ, ರಂಜಕ, ಪೊಟ್ಯಾಶಿಯಂ ಅಂಶಗಳು ದೊರೆಯಲಿದ್ದು ಬೆಳೆ ಗಳಿಗೆ ಉತ್ತಮ ಸಾರವಾಗಲಿದೆ.

ಸಂಶೋಧನೆಗೆ ಸರಕಾರದ ಮೆಚ್ಚುಗೆ
ಪ್ರಸ್ತುತ ಮೀನುಗಾರಿಕೆ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ವಿಧಾನಪರಿಷತ್‌ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ ಅವರು ಅಂತರಗಂಗೆ ಸಮಸ್ಯೆಯನ್ನು ಈ ಹಿಂದೆ ವಿಧಾನಪರಿಷತ್‌ನಲ್ಲಿ ಪ್ರಸ್ತಾವಿಸಿದ್ದರು ಹಾಗೂ ಈ ವಿಚಾರ ಪರಿಷತ್‌ನ ಅರ್ಜಿ ಸಲಹಾ ಸಮಿತಿ ಸಭೆಯ ಮುಂದೆ ಚರ್ಚೆಗೊಳಪಟ್ಟು ನಿಯಂತ್ರಣಕ್ಕೆ ಸಂಶೋಧನೆ ನಡೆಸುವಂತೆ ತಿಳಿಸಲಾಗಿತ್ತು. ಅದರಂತೆ ನವೀನ್‌ ಅವರ ನೇತೃತ್ವದ ತಂಡ ಸಂಶೋಧನೆ ಕೈಗೊಂಡಿತ್ತು. ಪ್ರಸ್ತುತ ಪ್ರಕಟಗೊಂಡ ಫಲಿತಾಂಶವನ್ನು ಅರ್ಜಿ ಸಲಹಾ ಸಮಿತಿ ಹಾಗೂ ಕೃಷಿ ಇಲಾಖೆಯ ಗಮನಕ್ಕೆ ತಂದಿದ್ದು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೈತ ಮಿತ್ರನಾಗಲಿದೆಯೇ
ರೈತ ಶತ್ರುವಾಗಿದ್ದ ಕಳೆ?
ಭೌತಿಕ ವಿಧಾನದ ಮೂಲಕ ಎರೆಕಾಂಪೋಸ್ಟ್‌ ಆಗಿ ಪರಿವರ್ತಿಸಿದಾಗ ಇದರಲ್ಲಿನ ಸಾರಜನಕ, ರಂಜಕ, ಪೊಟ್ಯಾಶಿಯಂ ಅಂಶಗಳು ಸೆಗಣಿ ಗೊಬ್ಬರಕ್ಕಿಂತ ಹೆಚ್ಚು ಪೋಷಕಾಂಶದಿಂದ ಕೂಡಿರಲಿವೆೆ. ಹೀಗಾಗಿ ಇದು ಬೆಳೆಗೆ ಉತ್ತಮ ಸಾರವಾಗುತ್ತದೆ. ಮುಂದಿನ ಒಂದು ವರ್ಷ ಬೆಳೆಗಳ ಮೇಲೆ ಇದರ ಪರಿಣಾಮವನ್ನು ಸಂಶೋಧನೆಗೊಳಪಡಿಸಲು ವಿಜ್ಞಾನಿಗಳು ತಯಾರಿ ನಡೆಸಿದ್ದು, ಒಂದು ವೇಳೆ ಎಲ್ಲಾ ಬೆಳೆಗಳಿಗೆ ಪರಿಣಾಮಕಾರಿ ಗೊಬ್ಬರವಾಗಿ ಬದಲಾದಲ್ಲಿ ರೈತ ಶತ್ರುವಾಗಿದ್ದ ಅಂತರಗಂಗೆ ಮುಂದೆ ರೈತಮಿತ್ರನಾಗಲಿದೆ.

ಪ್ರಯೋಗ ಕೈಗೂಡಿದೆ
ಅಂತರಗಂಗೆ ನಿರ್ವಹಣೆಗೆ ಇದುವರೆಗೆ ಸಮರ್ಪಕ ವಿಧಾನವಿರಲಿಲ್ಲ. ಆದರೆ ಇದೀಗ ನಾವು ನಡೆಸಿದ ಭೌತಿಕ ವಿಧಾನದಿಂದ ಇದರ ನಿಯಂತ್ರಣ ಸಾಧ್ಯವಾಗಿದೆ. ಮುಂದೆ ಹಲವು ಕಡೆಗಳಲ್ಲಿ ರೈತರೊಂದಿಗೆ ಮಾಹಿತಿ ಕಾರ್ಯಾಗಾರಗಳನ್ನು ನಡೆಸಿ ಅಂತರಗಂಗೆ ನಿಯಂತ್ರಣ ಕುರಿತು ತಿಳಿಸಿಕೊಡಲಿದ್ದೇವೆ.
-ಡಾ| ಎನ್‌.ನವೀನ್‌, ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.