ಬಸ್ನಲ್ಲೇ ನಿರ್ವಾಹಕನ ಮದುವೆ ವಾರ್ಷಿಕೋತ್ಸವ!
ನಿತ್ಯ ಪ್ರಯಾಣಿಕರ ಅಚ್ಚರಿಯ ಕೊಡುಗೆ
Team Udayavani, Jan 25, 2020, 6:38 AM IST
ಉಡುಪಿ: ಖಾಸಗಿ ಬಸ್ ನಿರ್ವಾಹಕರೊಬ್ಬರ ಮದುವೆಯ ವಾರ್ಷಿಕ ದಿನವನ್ನು ಅವರು ಕೆಲಸ ಮಾಡುವ ಖಾಸಗಿ ಬಸ್ನಲ್ಲೇ ನಿತ್ಯ ಪ್ರಯಾಣಿಕರು ಆಚರಿಸಿ ಅಚ್ಚರಿಯ ಉಡುಗೊರೆ ನೀಡಿದ್ದಾರೆ.
ಪ್ರಯಾಣಿಕರಿಂದ ಸಪ್ರೈಸ್
ಉಡುಪಿ-ಮಂಗಳೂರು ಖಾಸಗಿ ಬಸ್ಸೊಂದರ ನಿರ್ವಾಹಕ ಸುರೇಶ್ ಸಾನಾಡಿ ಸ್ನೇಹ ಜೀವಿ, ಎಲ್ಲ ಪ್ರಯಾಣಿ ಕರನ್ನು ಗೌರವದಿಂದ ಕಾಣುವವರು. ಹೀಗಾಗಿ ಅನೇಕ ಪ್ರಯಾಣಿಕ ಮಿತ್ರರನ್ನು ಹೊಂದಿದ್ದಾರೆ. ಮೂರು ವರ್ಷಗಳಿಂದ ಇದೇ ಬಸ್ನಲ್ಲಿ ಮಂಗಳೂರಿಗೆ ತೆರಳುವ ಪ್ರಯಾಣಿಕರ ಗುಂಪು ಶುಕ್ರವಾರ ಈ ವಿಭಿನ್ನ ಆಚರಣೆ ನಡೆಸಿ ಅವರಿಗೆ ಅಚ್ಚರಿ ಉಂಟು ಮಾಡಿತು. ಬಸ್ ಶುಕ್ರವಾರ ಬೆಳಗ್ಗೆ ಉಡುಪಿ ಬಿಟ್ಟು ಪಡುಬಿದ್ರಿ ತಲುಪುವ ಹೊತ್ತಿಗೆ ಕೇಕ್ ಕತ್ತರಿಸಿ ಶುಭ ಕೋರಿದರು. ಬಳಿಕ ಉಳಿದ ಪ್ರಯಾ ಣಿಕರಿಗೆ ಸಿಹಿ ಹಂಚಲಾಯಿತು.
ರಜೆ ಇಲ್ಲದ ಕಾರಣ ಮದುವೆ ವಾರ್ಷಿಕೋತ್ಸವವನ್ನು ಮನೆಯಲ್ಲಿ ಆಚರಿಸಲು ಸಾಧ್ಯವಾಗಲಿಲ್ಲ. ಆದರೆ ಸ್ನೇಹಿತರು ಬೇರೆಯೇ ರೀತಿ ಆಚರಿಸಿದ್ದು ಖುಷಿ ಅನಿಸಿದೆ. ಅವರಿಗೆ ಧನ್ಯವಾದಗಳು.
ಸುರೇಶ್ ಸಾನಾಡಿ, -ಬಸ್ ನಿರ್ವಾಹಕರು
3 ವರ್ಷಗಳಿಂದ ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೇವೆ. ಹೀಗಾಗಿ ನಿರ್ವಾಹಕರಲ್ಲಿ ಆತ್ಮೀಯತೆ ಬೆಳೆದಿದೆ. ಕಳೆದ ಬಾರಿ ಅವರು ಮದುವೆ ವಾರ್ಷಿಕೋತ್ಸವದ ಬಗ್ಗೆ ತಿಳಿಸಿದ್ದರು. ಈ ಬಾರಿ ಪ್ರಯಾಣಿಕ ಸ್ನೇಹಿತರು ಸೇರಿ ಈ ಸಪ್ರೈಸ್ ಸಂಭ್ರಮ ನೀಡಿದರು.
ಸಂತೋಷ್ ಶೇಟ್ , -ಬಸ್ ಪ್ರಯಾಣಿಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ