ಮುಗಿಯದ ಆಟೋ ನಿಲ್ದಾಣ ಗೊಂದಲ: “ಕೋಡಿಂಗ್‌’ಗೂ ಅಪಸ್ವರ 


Team Udayavani, Feb 24, 2019, 1:00 AM IST

auto.jpg

ಉಡುಪಿ: ನಗರದಲ್ಲಿ ಆಟೋ ರಿಕ್ಷಾ ನಿಲ್ದಾಣಗಳಿಗಾಗಿ ಕೆಲವು ರಿಕ್ಷಾ ಚಾಲಕರ ನಡುವಿನ ಸಂಘರ್ಷ ಇನ್ನೂ ಅಂತ್ಯ ಕಂಡಿಲ್ಲ. ಕಲರ್‌ ಕೋಡಿಂಗ್‌ ಮಾಡಬೇಕೆನ್ನುವ ಜಿಲ್ಲಾಡಳಿತದ ಪ್ರಯತ್ನಕ್ಕೂ ಯಶಸ್ಸು ಸಿಕ್ಕಿಲ್ಲ.
ನಗರ ಮತ್ತು ಗ್ರಾಮೀಣ ಪ್ರದೇಶದ ಆಟೋರಿಕ್ಷಾಗಳನ್ನು ಗುರುತಿಸಲು ಸುಲಭವಾಗುವ ಉದ್ದೇಶದಿಂದ ನಗರ ಮತ್ತು ಗ್ರಾಮೀಣ ವಲಯಗಳನ್ನು ವಿಭಜಿಸಿ ಕಲರ್‌ ಕೋಡಿಂಗ್‌ ಮಾಡುವ ಕಾರ್ಯ ಒಂದು ತಿಂಗಳ ಹಿಂದೆ ಆರಂಭಗೊಂಡಿತ್ತು. ಆದರೆ ಆಟೋ ರಿಕ್ಷಾ ಚಾಲಕರ ಸಂಘಗಳ ನಡುವೆ ಒಮ್ಮತ ಮೂಡದೆ ಕೋಡಿಂಗ್‌ ಕೂಡ ವೇಗ ಪಡೆದಿಲ್ಲ. ಒಂದು ಬಣ ಕೋಡಿಂಗ್‌ ಪರವಿದ್ದರೆ ಇನ್ನೊಂದು ಬಣ ವಿರೋಧ ವ್ಯಕ್ತಪಡಿಸುತ್ತಿದೆ.

ಷರತ್ತುಬದ್ಧ ಒಪ್ಪಿಗೆ
ಕೋಡಿಂಗ್‌ ಬೇಕೇ ಬೇಡವೆ? ಎಂಬ ಚರ್ಚೆಗಳು ಬಂದಾಗ ಆರಂಭದಲ್ಲಿ ಕೆಲವು ಸಂಘಗಳು ಬೇಡ ಎಂದಿದ್ದವು. ಅನಂತರ “ಕೋಡಿಂಗ್‌ ಮಾಡುವುದಾದರೆ 2018ರ ವರೆಗೆ ನಗರದಲ್ಲಿ ಆಟೋ ಓಡಿಸಿದ (ಓಡಿಸುತ್ತಿರುವ), ನಗರ ವಾಸಿಗಳಾಗಿರುವವರಿಗೆ ನಗರದ ಪರವಾನಿಗೆ ನೀಡಿ ಅನಂತರ ಕೋಡಿಂಗ್‌ ಮಾಡಬೇಕು ಎಂದು ಕೆಲವು ಸಂಘಗಳು ಷರತ್ತು ವಿಧಿಸಿದ್ದವು. ಆದಾಗ್ಯೂ ಪ್ರಕ್ರಿಯೆ ಆರಂಭಗೊಂಡಿತ್ತು. ಆದರೂ ಸಂಘರ್ಷ ಕಡಿಮೆಯಾಗಿಲ್ಲ. ಮತ್ತಷ್ಟು ಗೊಂದಲಗಳನ್ನೇ ಹುಟ್ಟುಹಾಕಿದೆ.

2012ರದ್ದೇ ಅಂತಿಮ
2012ರಲ್ಲಿ ಸುಮಾರು 6,000 ಆಟೋರಿಕ್ಷಾಗಳಿಗೆ ನಗರ ಪರವಾನಿಗೆ ನೀಡಲಾಗಿತ್ತು. ಇವುಗಳು ನಗರ ಮತ್ತು ಗ್ರಾಮೀಣ ಎರಡೂ ಕಡೆ ಕೂಡ ಬಾಡಿಗೆ ಮಾಡುವ ಅವಕಾಶ ನೀಡಲಾಯಿತು. ಅನಂತರ ಇದುವರೆಗೆ ಬೇರೆ ಆಟೋಗಳಿಗೆ ನಗರ ಪರವಾನಿಗೆ ನೀಡಿಲ್ಲ.  ಪರವಾನಿಗೆ ಇಲ್ಲದಿದ್ದರೂ ಅನೇಕರು ಸುಮಾರು 25 ವರ್ಷಗಳಿಂದ ದುಡಿಯುತ್ತಿದ್ದಾರೆ. ಈಗ ಅವರನ್ನು ನಗರದಿಂದ ಹೊರಗೆ ಕಳುಹಿಸಿದರೆ ಅವರು ತುಂಬಾ ತೊಂದರೆಗೊಳಗಾಗುತ್ತಾರೆ ಎಂಬುದು ಕೆಲವು ಸಂಘಗಳ ಪದಾಧಿಕಾರಿಗಳ ಆತಂಕ, ಆಕ್ಷೇಪ.  

1,500 ರಿಕ್ಷಾಗಳಿಗೆ ಪರವಾನಿಗೆ ಬಾಕಿ?
ನಗರದೊಳಗೆ ಈಗ ದುಡಿಯುತ್ತಿರುವ ಸುಮಾರು 1,500 ಆಟೋ ರಿಕ್ಷಾಗಳಿಗೆ ನಗರ ಪರವಾನಿಗೆ ಇಲ್ಲ. ಈ ಪೈಕಿ ಕೆಲವರು ನಿರ್ದಿಷ್ಟ ನಿಲ್ದಾಣದಲ್ಲಿ ಬಾಡಿಗೆ ಮಾಡುತ್ತಿದ್ದಾರೆ. ಇನ್ನು ಕೆಲವರು ನಗರದ ವಿವಿಧೆಡೆ ಬಾಡಿಗೆ ಮಾಡುತ್ತಾರೆ. ನಗರದಲ್ಲಿ ಈಗಲೇ ನಿಲ್ದಾಣದ ಕೊರತೆ ಇದೆ. ಎಲ್ಲರಿಗೂ ಪರವಾನಿಗೆ ನೀಡಿದರೆ ಮತ್ತಷ್ಟು ಸಮಸ್ಯೆಯಾಗಬಹುದು ಎಂಬ ಭೀತಿ ಅಧಿಕಾರಿಗಳದ್ದು. ಈಗ ಬಿಗ್‌ಬಜಾರ್‌, ಸರ್ವೀಸ್‌, ಸಿಟಿ ಬಸ್‌ ನಿಲ್ದಾಣ, ಮೀನುಮಾರುಕಟ್ಟೆ, ನಗರಸಭೆ ಕಾರ್ಯಾಲಯ ಸಮೀಪ ರಿಕ್ಷಾ ನಿಲ್ದಾಣಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ ಅಲ್ಲಿ ಬಾಡಿಗೆ ಮಾಡುತ್ತಿರುವವರು ಹೊಸ ರಿಕ್ಷಾಗಳ ಪ್ರವೇಶಕ್ಕೆ ತಡೆಯೊಡ್ಡುತ್ತಿದ್ದಾರೆ. ಆದರೆ “ಪರವಾನಿಗೆ ಪಡೆದವರು ನಗರದ ಯಾವ ನಿಲ್ದಾಣದಲ್ಲಿಯೂ ಬಾಡಿಗೆ ಮಾಡಬಹುದು’ ಎಂದು ಇನ್ನೊಂದು ಗುಂಪು ವಾದಿಸುತ್ತಿದೆ. ಇದು ಸಮಸ್ಯೆಯನ್ನು ಜಟಿಲವಾಗಿಸಿದೆ.

ಲಾಭವೇನು? 
ನಗರ ಮತ್ತು ಗ್ರಾಮೀಣ ಎಂದು ಗುರುತಿಸಿ ಕೋಡಿಂಗ್‌ ಮಾಡುವುದರಿಂದ ಜನರಿಗೆ ಪ್ರಯೋಜನವಿಲ್ಲ. ಬದಲಾಗಿ ಪೊಲೀಸರು ಅಥವಾ ಆರ್‌ಟಿಒ ಅಧಿಕಾರಿ/ಸಿಬಂದಿ ಆಟೋ ಸುಲಭವಾಗಿ ಗುರುತಿಸಲು, ನಿಯಮ ಉಲ್ಲಂ ಸಿದರೆ ಕ್ರಮ ಜರುಗಿಸಲು ಸಾಧ್ಯವಿದೆ. ತಪಾಸಣೆ ನಡೆಸಿದರೆ ಕೋಡಿಂಗ್‌ ಇಲ್ಲದೆಯೂ ಪತ್ತೆಹಚ್ಚಬಹುದು ಎನ್ನುತ್ತಾರೆ ಕೆಲವು ರಿಕ್ಷಾ ಸಂಘಟನೆಯವರು.  

ನ್ಯಾಯಾಲಯದ ಆದೇಶ ಉಲ್ಲಂಘನೆ
ಜಿಲ್ಲಾಧಿಕಾರಿ ಆದೇಶದಂತೆ ವಲಯ 1 ಕಲರ್‌ ಕೋಡಿಂಗ್‌ ಸ್ಟಿಕ್ಕರ್‌ ಅಳವಡಿಸಿ ರಿಕ್ಷಾ ನಿಲ್ದಾಣಗಳಿಗೆ ದುಡಿಯಲು ಹೋದರೆ ಅಲ್ಲಿನ ಚಾಲಕರು ಬೆದರಿಸಿ ತೊಂದರೆ ನೀಡುತ್ತಿದ್ದಾರೆ. ನ್ಯಾಯಾಲಯದಲ್ಲಿ ನಮಗೆ ಜಯ ಸಿಕ್ಕಿದೆ. ನ್ಯಾಯಾಲಯ ಮತ್ತು ಸಾರಿಗೆ ಇಲಾಖೆಯ ಆದೇಶ ಪ್ರಕಾರ ಉಡುಪಿ ನಗರಸಭೆ ವ್ಯಾಪ್ತಿಯ 7 ಕಿ.ಮೀ. ವ್ಯಾಪ್ತಿಯಲ್ಲಿ ಯಾವ ನಿಲ್ದಾಣದಲ್ಲಿಯೂ ದುಡಿಯಲು ಅವಕಾಶವಿದೆ. ಬಹುಬೇಡಿಕೆ ಇರುವಲ್ಲಿ ಅಲ್ಲಿನ ಚಾಲಕರು ದುಡಿಯಲು ಬಿಡುತ್ತಿಲ್ಲ. ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತಿದೆ. ನಮಗೆ ಪೊಲೀಸರು ಭದ್ರತೆ ನೀಡುತ್ತಿಲ್ಲ.
-ವಿಟuಲ ಜತ್ತನ್‌, ಪ್ರಧಾನ ಕಾರ್ಯದರ್ಶಿ,
ಆಟೋ ಚಾಲಕರ ಮತ್ತು ಮಾಲಕರ ಸಂಘಟನೆ, (ನಗರಸಭೆ ಪರವಾನಿಗೆ ಆಟೋರಿಕ್ಷಾಗಳು) 

ಜಾಗದ ಕೊರತೆ
2018ರ ವರೆಗಿನವರಿಗೆ ನಗರದಲ್ಲಿಯೇ ಅವಕಾಶ ಕೊಡಬೇಕೆಂಬ ಬೇಡಿಕೆ ಇದೆ. ಆದರೆ ಇವರೆಲ್ಲರಿಗೂ ನೀಡಿದರೆ ಜಾಗದ ಸಮಸ್ಯೆಯಾಗಲಿದೆ. ಈ ಬೇಡಿಕೆಯನ್ನು ಸಾರಿಗೆ ಪ್ರಾಧಿಕಾರದ ಮುಂದಿಟ್ಟು ಆಕ್ಷೇಪಣೆಗಳನ್ನು ಪಡೆದು ಅನಂತರವಷ್ಟೇ ತೀರ್ಮಾನಿಸಬೇಕಾಗಿದೆ. ಈಗ ಸುಮಾರು ಶೇ.5ರಷ್ಟು ಕಲರ್‌ ಕೋಡಿಂಗ್‌ ಆಗಿದೆ.
– ಪ್ರಾದೇಶಿಕ ಸಾರಿಗೆ ಅಧಿಕಾರಿ
ಉಡುಪಿ 

– ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.