ಮುಂದುವರಿದ ಡ್ರೆಜ್ಜಿಂಗ್, ಟ್ಯಾಂಕರ್ ನೀರು ಪೂರೈಕೆ
Team Udayavani, May 17, 2019, 6:10 AM IST
ಉಡುಪಿ: ಸ್ವರ್ಣಾ ನದಿ ಪಾತ್ರದ ಮಾಣೈ ಹಳ್ಳದಲ್ಲಿ ಸಂಗ್ರಹವಾಗಿ ರುವ ನೀರನ್ನು ಭಂಡಾರಿಬೆಟ್ಟು ಹಳ್ಳಕ್ಕೆ ಡ್ರೆಜ್ಜಿಂಗ್ ಮಾಡಿ ಅಲ್ಲಿಂದ ಬಜೆ ಅಣೆಕಟ್ಟೆಯ ಜಾಕ್ವೆಲ್ಗೆ ಪೂರೈಸುವ ಕಾರ್ಯ ನಡೆಯುತ್ತಿದೆ. ಜೂನ್ ಮೊದಲ ವಾರ ಅಥವಾ ಮಳೆಗಾಲ ಆರಂಭವಾಗು ವವರೆಗೂ ಸ್ವರ್ಣಾ ಹಾಗೂ ಬಜೆಯಲ್ಲಿ ಲಭ್ಯವಿರುವ ನೀರನ್ನು ರೇಷನಿಂಗ್ ಮೂಲಕ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.
35 ವಾರ್ಡ್ಗಳಿಗೆ ತಲಾ ಒಬ್ಬರಂತೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಆಯಾಯ ವಾರ್ಡ್ನ ನೀರಿನ ಸಮಸ್ಯೆ ಬಗೆಹರಿಸುವತ್ತ ಗಮನಹರಿಸುತ್ತಿದ್ದಾರೆ. ಸ್ವರ್ಣಾ ನದಿಯಲ್ಲಿ ದೊಡ್ಡ ಗುಂಡಿಗಳಿಂದ ಪಂಪ್ಗ್ಳ ಮೂಲಕ ನೀರು ಹಾಯಿಸುವ ಕಾರ್ಯ ಮುಂದುವರಿದಿದೆ.
ನೀರು ವಿತರಣೆ ಮುಂದುವರಿಕೆ
ನಗರಸಭೆಯ ಸದಸ್ಯರು, ಶಾಸಕರು, ಸಂಘ-ಸಂಸ್ಥೆಗಳು, ಜಿಲ್ಲಾ ನಾಗರಿಕ ಸಮಿತಿ ಸೇವಾ ಟ್ರಸ್ಟ್ ಮುಖಾಂತರ ಟ್ಯಾಂಕರ್ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ನಡೆಯುತ್ತಿದೆ.
ಹೂಳು ತೆಗೆಯುವ ಪ್ರಕ್ರಿಯೆ ನಿರಂತರ
ಬಜೆ ಅಣೆಕಟ್ಟಿನಲ್ಲಿ ಹೂಳು ತೆಗೆಯುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಒಂದು ಹಿಟಾಚಿ ಮತ್ತು 2 ಟಿಪ್ಪರ್ಗಳು ಜಾಕ್ವೆಲ್ ಆಸುಪಾಸಿನಲ್ಲಿ ನಿರಂತರವಾಗಿ ಹೂಳು ತೆಗೆಯುವ ಕೆಲಸ ನಡೆಯುತ್ತಿವೆೆ. ನಗರಸಭೆಯ ಎಂಜಿನಿಯರ್ಗಳು ಕೂಡ ವಾರದಿಂದ ನಿರಂತರವಾಗಿ ಪಂಪಿಂಗ್ ನಡೆಸುವ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿ ಕಾರ್ಯಾಚರಣೆ ಶೀಘ್ರಗತಿಯಲ್ಲಿ ನಡೆಯುವಂತೆ ನೋಡಿಕೊಳ್ಳುತ್ತಿ¨ªಾರೆ.
ಹಗಲು ರಾತ್ರಿ ಕೆಲಸ
ಕಳೆದೊಂದು ವಾರದಿಂದ ಚುರುಕಿನ ಕಾರ್ಯಾಚರಣೆಗಳು ಪರಿಣಾಮಕಾರಿ ಯಾಗಿ ನಡೆಯುತ್ತಿದ್ದು, ಜಿÇÉಾಧಿಕಾರಿ ಯಿಂದ ಹಿಡಿದು ಇಡೀ ಅಧಿಕಾರಿ ವರ್ಗ ಸಕ್ರಿಯವಾಗಿ ರಾತ್ರಿ ಹಗಲು ಕೆಲಸ ಮಾಡುತ್ತಿವೆ.
ಪಂಪಿಂಗ್ ಮುಂದುವರಿಕೆ
ಪ್ರಸ್ತುತ 9 ಪಂಪ್ಗ್ಳ ಮೂಲಕ ನೀರೆತ್ತುವ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ 4 ಪಂಪ್ಗ್ಳನ್ನು ಶಾಸಕ ಕೆ. ರಘುಪತಿ ಭಟ್ ಅವರು ಸ್ವಂತ ಖರ್ಚಿನಿಂದ ನಿರ್ವಹಿಸುತ್ತಿದ್ದಾರೆ. ಉಳಿದ 5 ಪಂಪ್ಗ್ಳನ್ನು ಜಿಲ್ಲಾಡಳಿತದ ಮೂಲಕ ನೀಡಲಾಗಿದೆ.