ಅಕಾಲಿಕ ಮಳೆ: ಕೊತ್ತಂಬರಿ ಸೊಪ್ಪು, ನುಗ್ಗೆ ದರ ಏರಿಕೆ
Team Udayavani, May 30, 2022, 7:25 AM IST
ಉಡುಪಿ: ಅಕಾಲಿಕ ಮಳೆಯಿಂದಾಗಿ ಭಾರೀ ಹೆಚ್ಚಳ ಕಂಡಿದ್ದ ತರಕಾರಿ ಬೆಲೆ ಈಗ ಕೊಂಚ ಇಳಿಮುಖವಾಗುತ್ತಿದ್ದರೂ ಕೆಲವು ತರಕಾರಿಗಳ ಬೆಲೆ ಮತ್ತಷ್ಟು ಏರಿದೆ.
ಕೊತ್ತಂಬರಿ ಸೊಪ್ಪು, ನುಗ್ಗೆಕಾಯಿ ದರ ಶತಕ ದಾಟಿದೆ. ಕೊತ್ತಂಬರಿ ಸೊಪ್ಪಿಗೆ 150 ರೂ. ಇದ್ದರೆ ನುಗ್ಗೆಕಾಯಿ ದರ 120 ರೂ. ಇದೆ. ಒಮ್ಮೆಲೆ ಏರಿಕೆ ಕಂಡಿದ್ದ ಟೊಮೇಟೋ ದರ ಈಗ 70 ರೂ.ಗಳಿಗೆ ಬಂದು ನಿಂತಿದೆ.
ಪ್ರಸ್ತುತ ಕರಾವಳಿಗೆ ನಾಸಿಕ್ನಿಂದ ಟೊಮೇಟೊ ಆವಕವಾಗುತ್ತಿದೆ.
ಅಲಸಂಡೆ ಕೆ.ಜಿ.ಗೆ 90 ರೂ., ಬೀನ್ಸ್ 70 ರೂ., ಬೆಂಡೆಕಾಯಿ 45-50 ರೂ., ಹೀರೆ 60-70 ರೂ., ಕ್ಯಾರೆಟ್ 60 ರೂ., ಮೂಲಂಗಿ 40 ರೂ. ದರವಿದೆ.
ಇವುಗಳ ದರ ಇಳಿಕೆ
ಪ್ರಸ್ತುತ ದರ ಇಳಿಕೆಯಾಗಿರುವುದು ನಿಂಬೆಹಣ್ಣು, ಈರುಳ್ಳಿಗೆ ಮಾತ್ರ. ಈರುಳ್ಳಿ ದರ ಕೆ.ಜಿ.ಗೆ 15-20 ರೂ.ಗಳಿದ್ದರೆ ನಿಂಬೆಹಣ್ಣಿಗೆ 10 ರೂ. ಇದ್ದುದು 5 ರೂ.ಗಳಿಗೆ ಇಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ