ಬಜರಂಗ ದಳ ಸಂಚಾಲಕನ ಹತ್ಯೆ ಸಂಚು ಪ್ರಕರಣ: ಆರೋಪಿಗಳ ಬಂಧನ, ವಿಚಾರಣೆ, ಬಿಡುಗಡೆ
Team Udayavani, Aug 2, 2022, 11:55 PM IST
ಕಾಪು: ಕಾಪು ಪ್ರಖಂಡ ಬಜರಂಗ ದಳ ಸಂಚಾಲಕ ಸುಧೀರ್ ಸೋನು ಅವರ ಮನೆಯ ಬಳಿ ಅನುಮಾನಾಸ್ಪದ ರೀತಿಯಲ್ಲಿ ತೆರಳಿದ್ದ ಯುವಕರಿಬ್ಬರನ್ನು ಶಿರ್ವ ಪೊಲೀಸರು ಸೋಮವಾರ ಬಂಧಿಸಿದ್ದು, ವಿಚಾರಣೆ ನಡೆಸಿ ಮಂಗಳವಾರ ಜಾಮೀನಿನ ಮೂಲಕ ಬಿಡುಗಡೆಗೊಳಿಸಿದ್ದಾರೆ.
ಮಜೂರು ಚಂದ್ರನಗರ ನಿವಾಸಿ ಅಶ್ರಫ್ ಯಾನೆ ಆಸಿ ಮತ್ತು ಕರಂದಾಡಿ ನಿವಾಸಿ ಸುಹೇಬ್ ಇಸ್ಮಾಯಿಲ್ ಬಂಧಿತರು. ಆರೋಪಿಗಳನ್ನು ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿತ್ತು. ಮಂಗಳವಾರ ಬಂಧಿತರಿಬ್ಬರನ್ನೂ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
ಸುಧೀರ್ ಅವರ ಮನೆ ಬಳಿ ಮುಸ್ಲಿಂ ಯುವಕರು ಬಂದಿದ್ದರಿಂದ ಸಂಶಯಗೊಂಡ ಅವರು ಬಜರಂಗ ದಳ ಮುಖಂಡರನ್ನೊಳಗೊಂಡು ಕಾಪು ಪೊಲೀಸ್ ಠಾಣೆಗೆ ತೆರಳಿ, ತನ್ನ ಹತ್ಯೆಗೆ ಸಂಚು ರೂಪಿಸಿರುವ ಸಂಶಯವಿದೆ ಎಂದು ಲಿಖೀತ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಸಂಶಯಿತ ವ್ಯಕ್ತಿಗಳನ್ನು ಬಂಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ