ಕಾಪು: ದೇಗುಲದ ಹುಂಡಿ ಒಡೆದು ನಗದು ಕಳವು
Team Udayavani, Aug 7, 2022, 11:31 PM IST
ಕಾಪು: ಕಾಪು ಶ್ರೀ ಲಕ್ಷ್ಮೀಜನಾರ್ಧನ ದೇವಸ್ಥಾನದ ಉತ್ತರ ಭಾಗದ ಬೀಗ ಮುರಿದು ದೇವಸ್ಥಾನದ ಒಳಗೆ ನುಗ್ಗಿದ ಕಳ್ಳರು ಕಾಣಿಕೆ ಡಬ್ಬವನ್ನು ಒಡೆದು ನಗದು ಹಣವನ್ನು ದೋಚಿದ ಘಟನೆ ರವಿವಾರ ನಡೆದಿದೆ.
ರವಿವಾರ ಬೆಳಗ್ಗಿನ ಜಾವ ಕಾಣಿಕೆ ಡಬ್ಬವನ್ನು ಒಡೆದ ಕಳ್ಳರು ಚಿಲ್ಲರೆ ಹಣವನ್ನು ಅಲ್ಲೇ ಬಿಟ್ಟು ಬರೀ ನೋಟುಗಳನ್ನು ಕದ್ದೊಯ್ದಿದ್ದು ಸುಮಾರು 2-3 ಸಾವಿರ ರೂಪಾಯಿ ಕಳವಾಗಿರಬಹುದೆಂದು ಊಹಿಸಲಾಗಿದೆ.
ದೇವಸ್ಥಾನದಲ್ಲಿ ರಾತ್ರಿ ವಾಚ್ಮನ್ ವ್ಯವಸ್ಥೆಯಿದ್ದು, ಆತ ನಿದ್ರೆಗೆ ಜಾರಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಕಾಣಿಕೆ ಡಬ್ಬಗಳನ್ನು ಹೊತ್ತೂಯ್ದ ಕಳ್ಳರು ಅದನ್ನು ದೇವಸ್ಥಾನ ಮುಂಭಾಗದ ಮೈದಾನದಲ್ಲಿ ಇರಿಸಿದ್ದು, ನಗದು ಹಣವನ್ನು ಕೊಂಡೊಯ್ದು, ಚಿಲ್ಲರೆ ಹಣವನ್ನು ಅಲ್ಲೇ ಉಳಿಸಿ ಪರಾರಿಯಾಗಿದ್ದಾರೆ.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರ್ಯನಿರ್ವಹಣಾಧಿಕಾರಿ ಸುಧೀರ್ ಕುಮಾರ್ ಶೆಟ್ಟಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ