ಮದುವೆ ಹಾಲ್ನಲ್ಲಿ ಕಣ್ಮರೆಯಾದ ಚಿನ್ನದ ಸರ ದೈವ ಸನ್ನಿಧಿಯಲ್ಲಿ ಪತ್ತೆ!
ನಾಂಜಾರು ಧರ್ಮ ಜಾರಂದಾಯನ ಕಾರಣಿಕಕ್ಕೆ ಸಾಕ್ಷಿ
Team Udayavani, May 27, 2022, 11:32 PM IST
ಕಾಪು: ಆರು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡು ಹಲವು ಕಾರಣಿಕಗಳಿಗೆ ಸಾಕ್ಷಿಯಾಗಿರುವ ಬೆಳಪು ಗ್ರಾಮದ ಪಣಿಯೂರು ಬಳಿಯ ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನದಲ್ಲಿ ಮತ್ತೊಂದು ವೈಚಿತ್ರ್ಯ ಘಟಿಸಿದೆ.
ಮೇ 18ರಂದು ಪಡುಬಿದ್ರಿಯ ಮದುವೆ ಸಭಾಂಗಣವೊಂದರಲ್ಲಿ ಕಾಣೆಯಾಗಿದ್ದ ನಾಂಜಾರು ಸಾನದ ಮನೆಯ ಮಗುವಿನ ಚಿನ್ನದ ಸರವು ಮೇ 27ರಂದು ಬೆಳಗ್ಗೆ ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಮುಂಭಾಗದಲ್ಲಿ ಉರಿಯುವ ಕಾಲುದೀಪಕ್ಕೆ ಸುತ್ತಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮದುವೆ ಸಮಾರಂಭದಲ್ಲಿ ಹೆತ್ತವರ ಜತೆಗಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮಧ್ಯಾಹ್ನದ ಬಳಿಕ ಕಾಣೆಯಾಗಿತ್ತು. ಎಷ್ಟು ಹುಡುಕಾಡಿದರೂ ಸಿಗದೆ ಇದ್ದಾಗ ನಾಂಜಾರು ಶ್ರೀ ಧರ್ಮ ಜಾರಂದಾಯ ಮತ್ತು ಪರಿವಾರ ಶಕ್ತಿಗಳನ್ನು ಸರ ದೊರಕಿಸಿಕೊಡುವಂತೆ ಪ್ರಾರ್ಥಿಸಲಾಗಿತ್ತು.
10 ದಿನಗಳ ಬಳಿಕ ಶುಕ್ರವಾರ ಬೆಳಗ್ಗೆ ದೈವಸ್ಥಾನದ ಮುಂಭಾಗದ ಕಾಲು ದೀಪವನ್ನು ಉರಿಸಲು ಬಂದ ಸಾನದ ಮನೆಯ ಪ್ರತಿನಿಧಿಗಳಿಗೆ ಕಾಲುದೀಪದಲ್ಲಿ ಚಿನ್ನದ ಸರ ಸುತ್ತಿಕೊಂಡು ಇರುವುದು ಕಂಡುಬಂತು. ಮಗುವಿನ ತಾಯಿ ಬಂದು ಪರಿ ಶೀಲಿಸಿದಾಗ ಕಳೆದುಹೋಗಿದ್ದ ಸರವೇ ಅದುವೇ ಎಂಬುದು ಖಚಿತವಾಯಿತು.
ಗುರುವಾರ ರಾತ್ರಿ ದೈವಸ್ಥಾನದ ಜಗಲಿಯಲ್ಲಿ ಕುಳಿತು ನಾವು ಮಾತುಕತೆ ನಡೆಸಿದ್ದೆವು. ಆದರೆ ಆಗ ಸರ ಇರಲಿಲ್ಲ. ಶುಕ್ರವಾರ ಬೆಳಗ್ಗೆ ಕಾಲುದೀಪ ಬೆಳಗಿಸುವ ವೇಳೆ ಸರ ಕಂಡುಬಂದಿದ್ದು, ಕೂಡಲೇ ಸಂಬಂಧಪಟ್ಟವರನ್ನು ಕರೆದು ತೋರಿಸಿದಾಗ ಅದು ಕಳೆದುಹೋದ ಸರ ಎಂಬುದನ್ನು ದೃಢಪಡಿಸಿದ್ದಾರೆ. ಧರ್ಮ ಜಾರಂದಾಯನ ಕೃಪೆಯಿಂದಲೇ ಇದು ನಡೆದಿದೆ.
– ಕಿಶೋರ್ ಪೂಜಾರಿ,
ನಾಂಜಾರು ಸಾನದ ಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ