ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಕೆಗಾಗಿ ಜನಸಂದಣಿ
Team Udayavani, Mar 13, 2019, 1:00 AM IST
ಕಾರ್ಕಳ: ಆರ್ಟಿಸಿ ಪಡೆಯಲು ಮತ್ತು 57 ಸಿ ಅರ್ಜಿ ಸಲ್ಲಿಕೆಗಾಗಿ ಫಲಾನುಭವಿಗಳು ತಾಲೂಕು ಕಚೇರಿಯತ್ತ ಧಾವಿಸಿದ್ದು, ಪರಿಣಾಮ ತಾಲೂಕು ಕಚೇರಿಯಲ್ಲಿ ಜನಸಂದಣಿಯೇ ಕಂಡುಬರುತ್ತಿದೆ. ಹೀಗಾಗಿ ಜನತೆ ತಮ್ಮ ಕಾರ್ಯವಾಗದೇ ತಾಲೂಕು ಕಚೇರಿಯಲ್ಲೇ ಕಾಲ ಕಳೆಯುವಂತಾಗಿದೆ.
ಚುನಾವಣೆ ದಿನಾಂಕ ಘೊಷಣೆಯಾದ ಹಿನ್ನೆಲೆಯಲ್ಲಿ ಮಾ. 16ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದಾಗ್ಯೂ ನೀತಿ ಸಂಹಿತೆಯಿಂದ ಆತಂಕದಿಂದ ಫಲಾನುಭವಿಗಳು ಅರ್ಜಿ ಸಲ್ಲಿಕೆಗಾಗಿ ಭಾರಿ ಸಂಖ್ಯೆಯಲ್ಲಿ ನೆರೆದಿದ್ದಾರೆ. ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಕೆಗಾಗಿ ಕಾಯುವಂತಾದರೆ, ಆರ್ಟಿಸಿ ಕೇಂದ್ರದಲ್ಲಿ ಪಹಣಿ ಪತ್ರ ಪಡೆಯಲು ಸಾಲುಗಟ್ಟಿ ನಿಲ್ಲುವುದು ಅನಿವಾರ್ಯವಾಗಿದೆ.
ಗ್ರಾ.ಪಂ.ನಲ್ಲಿ ಪಹಣಿ ಪತ್ರ ಲಭ್ಯವಿಲ್ಲದ ಕಾರಣ ತಾಲೂಕಿನ ಒತ್ತಡ ತಾಲೂಕು ಕಚೇರಿಗೆ ಬಿದ್ದಿದೆ. ಅಜೆಕಾರು ಹೋಬಳಿ ಹೊರತು ಪಡಿಸಿ ಇಡೀ ತಾಲೂಕಿನ ಜನ ಕಂದಾಯ ಸೇವೆಗಾಗಿ ತಾಲೂಕು ಕಚೇರಿಯನ್ನೇ ಅವಲಂಬಿಸಿದ್ದು, ಇದರಿಂದಾಗಿ ತಾಲೂಕು ಕಚೇರಿಯಲ್ಲಿ ಜನಸಂದಣಿ ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್