ಕುಂದಾಪುರ ತಾಲೂಕಿನಾದ್ಯಂತ ಗಾಳಿ ಮಳೆಗೆ ಹಾನಿ
ಹಕ್ಲಾಡಿ ಚಿಲ್ಲರೆಗುಡ್ಡ ಕುಸಿತ, ಮತ್ತಷ್ಟು ಕುಸಿದರೆ ಜನರ ಸ್ಥಳಾಂತರಕ್ಕೆ ಯೋಜನೆ
Team Udayavani, Jul 12, 2019, 5:21 AM IST
ಕುಂದಾಪುರ: ಹಕ್ಲಾಡಿ ಗ್ರಾಮದ ಚಿಲ್ಲರೆ ಗುಡ್ಡ ಎನ್ನುವಲ್ಲಿ ಭಾರೀ ಮಳೆಯಿಂದಾಗಿ ಮೂರು ಕಡೆಗಳಲ್ಲಿ ಗುಡ್ಡ ಕುಸಿತಕ್ಕೆ ಒಳಗಾಗಿದ್ದು, ಇದರಿಂದ ಸ್ಥಳೀಯ ನಿವಾಸಿಗಳು ಆತಂಕದಲ್ಲಿದ್ದಾರೆ. ಇನ್ನು ಸ್ಥಳಕ್ಕೆ ಕುಂದಾಪುರ ಎಸಿ ಡಾ| ಎಸ್. ಮಧುಕೇಶ್ವರ್, ತಹಶೀಲ್ದಾರ್ ತಿಪ್ಪೇಸ್ವಾಮಿ ಭೇಟಿ ನೀಡಿದ್ದಾರೆ.
ಚಿಲ್ಲರೆ ಗುಡ್ಡದ ಕುಸಿದ ಜಾಗದಲ್ಲಿ ಬೃಹದಾಕಾರದ ಬಂಡೆ ಶಿಥಿಲಗೊಂಡಿದ್ದು, ಬಂಡೆ ಬದಿಯ ಮಣ್ಣು ಕಳಚಿಕೊಳ್ಳುತ್ತಿದ್ದು, ಬಂಡೆ ಜಾರಿದರೆ ಆ ಗುಡ್ಡದ ತಪ್ಪಲಿನಲ್ಲಿರುವ ಎರಡು ಮನೆಗೆ ಅಪಾಯ ಉಂಟಾಗುವ ಭೀತಿ ಎದುರಾಗಿದೆ. ಗುಡ್ಡದ ಮತ್ತೂಂದು ಬದಿ ಕುಸಿದ ಪಕ್ಕದಲ್ಲೇ ಮನೆಯಿದ್ದು, ಇನ್ನೊಂದು ಕಡೆ ಕೂಡ ಗುಡ್ಡ ಸೀಳಿದ್ದು, ಅಲ್ಲೂ ಸಾಕಷ್ಟು ಕುಸಿತ ಆಗಿದ್ದು, ಪದೇ ಪದೇ ಮಣ್ಣು ಕುಸಿಯುತ್ತಿದೆ.
ಗುಡ್ಡದಲ್ಲಿರುವ ಬಂಡೆ ಕುಸಿಯುವ ಹಾಗಿದ್ದು, ಅದು ಹೊರಳಿ ಬಂದರೆ ಬೆಟ್ಟದ ಅಕ್ಕ- ಪಕ್ಕದ ಮನೆಗಳಿಗೆ ಅಪಾಯ ಸಂಭವಿಸುವ ಸ್ಥಿತಿ ಇದೆ. ಮುಂಜಾಗರೂಕತೆ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ರಾತ್ರಿ ವೇಳೆ ಸಂಚಾರ ನಿಷೇಧಿಸಲಾಗಿದ್ದು ಅಪಾಯಕಾರಿ ಪ್ರದೇಶ ಎನ್ನುವ ಸೂಚನಾ ಫಲಕ ಅಳವಡಿಸಲಾಗಿದೆ. ಮಳೆ ಜೋರಾದರೆ ಮತ್ತಷ್ಟು ಮಣ್ಣು ಕುಸಿಯುವ ಅಪಾಯವಿದ್ದು, ಪರಿಸರದ ಮನೆಗಳ ಜನರ ಸ್ಥಳಾಂತರ ಮಾಡುವ ಯೋಚನೆ ಕೂಡ ಇದೆ ಎಂದು ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಹಕ್ಕಾಡಿ ಗ್ರಾ.ಪಂ. ಉಪಾಧ್ಯಕ್ಷ ಸುಭಾಸ್ ಶೆಟ್ಟಿ ಹೊಳ್ಮಗೆ, ಸದಸ್ಯ ಕೋಟಿ ಸುಧಾಕರ ಶೆಟ್ಟಿ, ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಹಕ್ಲಾಡಿ, ಶ್ರೀನಿವಾಸ ಮೊಗವೀರ, ಹಕ್ಲಾಡಿ ಗ್ರಾ.ಪಂ. ಪಿಡಿಒ ಚಂದ್ರ ಪೂಜಾರಿ, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕುಂದಾಪುರ, ಜು. 11: ಯಡಾಡಿ – ಮತ್ಯಾಡಿ ಗ್ರಾಮದ ಸಿರಿಮಠ ಎನ್ನುವಲ್ಲಿ ಸರೋಜಿನಿ ಎನ್. ಶೆಟ್ಟಿ ಅವರ ತೋಟಕ್ಕೆ ಬುಧವಾರ ಗಾಳಿ – ಮಳೆಗೆ ಸುಮಾರು 100 ಅಡಿಕೆ ಮರ, 8 ತೆಂಗಿನ ಮರ, ಮಾವಿನ ಮರ, ಇತರೆ ಮರಗಳು ಧರೆಗುರುಳಿವೆ.
ಅಂದಾಜು ಸುಮಾರು 2 ಲಕ್ಷ ರೂ. ಗೂ ಮಿಕ್ಕಿ ನಷ್ಟ ಸಂಭವಿಸಿರಬಹುದು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಯಡಾಡಿ – ಮತ್ಯಾಡಿ ಗ್ರಾಮ ಲೆಕ್ಕಾಧಿಕಾರಿ ಆನಂದ, ಕುಂದಾಪುರ ತೋಟಗಾರಿಕಾ ಇಲಾಖಾ ಸಿಬಂದಿ ಮಧುಕರ, ಸ್ಥಳೀಯ ಜನಪ್ರತಿನಿಧಿಗಳಾದ ಬಿ. ಅರುಣ ಕುಮಾರ ಹೆಗ್ಡೆ, ಸಿ. ಜಗನ್ನಾಥ ಶೆಟ್ಟಿ ಚಿಟ್ಟೆಬೈಲು, ನರಾಡಿ ಬಾಲಕೃಷ್ಣ ಹೆಗ್ಡೆ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ