ಅಪಾಯದ ಭೀತಿಯಲ್ಲಿದ್ದ ಟ್ರಾನ್ಸ್ಫಾರ್ಮರ್: ಸ್ಪಂದನೆ
Team Udayavani, Aug 24, 2017, 7:55 AM IST
ಶಿರ್ವ: ಆತ್ರಾಡಿ-ಶಿರ್ವ-ಬಜಪೆ ರಾಜ್ಯ ಹೆದ್ದಾರಿಯ ಶಿರ್ವ-ಕಾಡಿಕಂಬಳ ಬಳಿ ಮುಖ್ಯ ರಸ್ತೆಗೆ ವಾಲಿಕೊಂಡು ನಿಂತಿದ್ದು ಅಪಾಯದ ಭೀತಿಯಲ್ಲಿದ್ದ ಹೈ-ಟೆನ್ಶನ್ವಿದ್ಯುತ್ ಕಂಬ ಮತ್ತು ಟ್ರಾನ್ಸ್ಫಾರ್ಮರ್ನ್ನು ಶಿರ್ವ ಮೆಸ್ಕಾಂ ಸೋಮವಾರ ಸರಿಪಡಿಸಿದೆ.
ರಸ್ತೆ ವಿಸ್ತರಣೆ ಸಂದರ್ಭದಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಗೊಳಿಸುವಲ್ಲಿ ಹೆದ್ದಾರಿ ಇಲಾಖೆಯ ವಿದ್ಯುತ್ ಗುತ್ತಿಗೆದಾರ ನಿರ್ಲಕ್ಷé ವಹಿಸಿದ್ದು ಹೈ-ಟೆನ್ಶನ್ ವಿದ್ಯುತ್ ಕಂಬ ಮತ್ತು ಟ್ರಾನ್ಸ್ಫಾರ್ಮರ್ ಮುಖ್ಯ ರಸ್ತೆಗೆ ವಾಲಿ ನಿಂತು ಅಪಾಯ ಎದುರಾಗಿತ್ತು.
ಉದಯವಾಣಿ ವರದಿಗೆ ಸ್ಪಂದನೆ
ವಿದ್ಯುತ್ ಕಂಬ ರಸ್ತೆಗೆ ವಾಲಿದ್ದು ಅಪಾಯ ಸಂಭವಿಸುವ ಭೀತಿ ಎದುರಾಗಿದ್ದ ಬಗ್ಗೆ ಉದಯವಾಣಿ ಶನಿವಾರ ಸಚಿತ್ರ ವರದಿ ನೀಡಿತ್ತು. ವರದಿಗೆ ತತ್ಕ್ಷಣ ಸ್ಪಂದಿಸಿದ ಶಿರ್ವ ಮೆಸ್ಕಾಂ ಸೆಕ್ಷನ್ ಆಫೀಸರ್ ರಹಮತುಲ್ಲಾ ನೇತೃತ್ವದಲ್ಲಿ ಸಿಬಂದಿ ಸೋಮವಾರವೇ ನಿಟ್ಟೆಯಿಂದ ಕ್ರೇನ್ ತರಿಸಿ ವಾಲಿ ನಿಂತ ಕಂಬಗಳನ್ನು ಸರಿಪಡಿಸಿದ್ದಾರೆ. ಉದಯವಾಣಿ ಕಾಳಜಿ ಮತ್ತು ಮೆಸ್ಕಾಂನ ಸೂಕ್ತ ಸ್ಪಂದನೆಗೆ ಶಿರ್ವದ ನಾಗರಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
MUST WATCH
ಹೊಸ ಸೇರ್ಪಡೆ
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ