ಬುಲ್ಟ್ರಾಲ್, ಬೆಳಕು ಮೀನುಗಾರಿಕೆ ನಿಷೇಧ ಜಾರಿಗೆ ತರಲು ಆಗ್ರಹ
Team Udayavani, Jun 12, 2019, 6:10 AM IST
ಮಲ್ಪೆ: ಮೀನುಗಾರಿಕೆಯ ಭವಿಷ್ಯದ ಹಿತದೃಷ್ಟಿಯಿಂದ ಕೇಂದ್ರ, ರಾಜ್ಯ ಸರಕಾರ ಬುಲ್ಟ್ರಾಲ್ ಮತ್ತು ಬೆಳಕು ಮೀನುಗಾರಿಕೆ ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಿದ್ದು, ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮಲ್ಪೆಯ ಬೇಸಗೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
ಹೈಕೋರ್ಟ್ ಲೈಟ್ ಫಿಶಿಂಗ್ ನಿಷೇಧಿಸಿ ತೀರ್ಪು ನೀಡಿದ್ದರೂ ಸಾರಾಸಗಟಾಗಿ ಉಲ್ಲಂಘಿಸಿ ಬಂದರು ವ್ಯಾಪ್ತಿಯಲ್ಲಿ ಲೈಟ್ಫಿಶಿಂಗ್, ಬುಲ್ಟ್ರಾಲ್ ಮೀನುಗಾರಿಕೆ ನಡೆಯುತ್ತಿದೆ. ಇದರಿಂದ ತೊಂದರೆಯಾಗುತ್ತಿದೆ.
ಮಂಗಳೂರಿನಿಂದ ಬೈಂದೂರು ತನಕ ಸಮುದ್ರ ತೀರಪ್ರದೇಶದಲ್ಲಿ ಬದಿಗೆ ಬಂದ ಮೀನನ್ನು ಹಿಡಿದು ಜೀವನ ಸಾಗಿಸುವ ನಾಡದೋಣಿ ಮೀನುಗಾರಿಗೆ ಸಮಸ್ಯೆಯಾಗುತ್ತಿದ್ದು, ತೀರ ಪ್ರದೇಶದಲ್ಲಿ ಕೈರಂಪಣಿ, ಕಂತಲೆ, ಟ್ಯೂಬನ್ನು ಹಿಡಿದು ಈಜಿ ಬಲೆ ಹಾಕಿ ಮೀನು ಹಿಡಿಯುವವರಿಗೆ ಹೊಟ್ಟೆ ಹೊರೆಯಲು ಮೀನು ಸಿಗದಂತಾಗಿದ್ದು ಸರಕಾರ, ನ್ಯಾಯಾಲಯದ ಆದೇಶ ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಸಂಘದ ಅಧ್ಯಕ್ಷ ಚಂದ್ರಕಾಂತ ಕರ್ಕೇರ, ಕಾರ್ಯದರ್ಶಿ ರತ್ನಾಕರ ಮೆಂಡನ್, ಲಕ್ಷ್ಮೀನಾರಾಯಣ ಕೋಟ್ಯಾನ್, ಪ್ರವೀಣ್ ಶ್ರೀಯಾನ್, ರಾಜೇಶ್ ಕೋಟ್ಯಾನ್, ಹರೀಶ್ ತಿಂಗಳಾಯ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್