ಕಾರ್ಕಳ: ಅಪಾಯಕಾರಿ ವಿದ್ಯುತ್ ಸ್ವಿಚ್ಬೋರ್ಡ್ ತೆರವಿಗೆ ನಾಗರಿಕರ ಆಗ್ರಹ
Team Udayavani, Jun 12, 2019, 6:36 AM IST
ಕಾರ್ಕಳ: ಪುರಸಭಾ ವ್ಯಾಪ್ತಿಯ ಕಲ್ಲೊಟ್ಟೆ ಸದ್ಭಾವನ ನಗರಕ್ಕೆ ಸಂಪರ್ಕಿಸುವ ರಸ್ತೆ ಬದಿ ಬೀದಿದೀಪದ ಸ್ವಿಚ್ವೊಂದು ಮಕ್ಕಳ ಕೈಗೆಟಕುವಂತಿದ್ದು, ಅನಾಹುತವನ್ನು ಆಹ್ವಾನಿಸುವಂತಿದೆ. ಸುರಕ್ಷೆಯ ದೃಷ್ಟಿಯಿಂದ ಹೊಸ ಸ್ವಿಚ್ಬೋರ್ಡ್ ಅಳವಡಿ ಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿಕೊಂಡರೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತ ಪಡಿಸುತ್ತಾರೆ.
5 ವರ್ಷಗಳಿಂದ ಇದೇ ಪರಿಸ್ಥಿತಿ
ಪುರಸಭೆಯ ಮೂರನೇ ವಾರ್ಡ್ ನಲ್ಲಿರುವ ಕಲ್ಲೊಟ್ಟೆ ಪರಿಸರದಲ್ಲಿನ ಸ್ವಿಚ್ ಬೋರ್ಡ್ ಕಳೆದ 5 ವರ್ಷಗಳಿಂದ ಹೀಗೆಯೇ ಇದೆ. ತುಕ್ಕುಹಿಡಿದು ಬೀಳುವ ಸ್ಥಿತಿಯಲ್ಲಿದ್ದರೂ ಸಂಬಂಧ ಪಟ್ಟವರು ನಿಶ್ಚಿಂತೆಯಿಂದಿದ್ದಾರೆ. ಮಳೆ ಗಾಲ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಯಾರಾದರೂ ಸ್ವಿಚ್ ಬೋರ್ಡ್ ಸ್ಪರ್ಶಿಸಿ ದಲ್ಲಿ ಅನಾಹುತ ಸಂಭವಿಸ ಬಹುದು.
ಸ್ವಿಚ್ಬೋರ್ಡ್ ತೀರಾ ತಗ್ಗಿನಲ್ಲಿ ರುವುದು ಅಪಾಯಕಾರಿ. ಮಳೆಗಾಲ ಪ್ರಾರಂಭಗೊಂಡಿರುವುದರಿಂದ ಮೆಸ್ಕಾಂ ಇಲಾಖೆಯವರು ತಕ್ಷಣವೇ ಹೊಸ ಸ್ವಿಚ್ ಬೋರ್ಡ್ ಅಳವಡಿಸಿ, ಸಂಭಾವ್ಯ ಅಪಾಯ ತಪ್ಪಿಸಬೇಕು ಎಂದು ಪುರಸಭಾ ಸದಸ್ಯೆ ನೀತಾ ಪ್ರಶಾಂತ್ ಆಚಾರ್ಯ ಆಗ್ರಹಿಸಿದ್ದಾರೆ.
***