ಅಂಗವಿಕಲ ಸ್ವೋದ್ಯೋಗಿ ಚಂದ್ರಶೇಖರರಿಗೆ ನೆರವು ಬೇಕಿದೆ 


Team Udayavani, Jul 24, 2017, 9:00 AM IST

2107ra5e.gif

ಪಡುಬಿದ್ರಿ: ಅಂಗವಿಕಲರೆನಿಸಿದ್ದರೂ ಸ್ವೋದ್ಯೋಗಿಯಾಗಿ ಪಡುಬಿದ್ರಿ ಪೇಟೆಯಲ್ಲಿ ಈವರೆಗೆ ಜೀವನ ನಿರ್ವಹಣೆ ಗೈಯುತ್ತಿರುವ ಚಂದ್ರಶೇಖರ ಕಾಂಚನ್‌ (59) ಇದೀಗ ಮತ್ತೆ ಅತಂತ್ರರಾಗಿದ್ದಾರೆ. 

ಅವಿಭಜಿತ ಜಿಲ್ಲೆಯಲ್ಲಿ ದೂರಸಂಪರ್ಕ ಕ್ರಾಂತಿಯನ್ನೇ ಹರಿಸಿದ ಮಹಾಪುರುಷ ಕೆ. ರಾಮ ಅವರ ಕರುಣೆಯೊಂದಿಗೆ, ಸುಮಾರು 30ವರ್ಷಗಳ ಹಿಂದೆ ಪಡುಬಿದ್ರಿ ಪೇಟೆಯಲ್ಲಿ ಟೆಲಿಫೋನ್‌ ಬೂತ್‌ ಒಂದನ್ನು ಕಾಂಚನ್‌ ಆರಂಭಿಸಿದ್ದರು. ಕಾಲಾಂತರದಲ್ಲಿ ಬಿಎಸ್‌ಎನ್‌ಎಲ್‌ ಲೋಕಲ್‌ ಕಾಲ್‌ ಬೂತನ್ನು ಉಳಿಸಿಕೊಂಡು, ಅದನ್ನೇ ನಂದಿನಿ ಹಾಲಿನ ಬೂತ್‌, ತಂಪು ಪಾನೀಯಗಳ ವ್ಯಾಪಾರವನ್ನಾಗಿ ಕಾಂಚನ್‌ ಪರಿವರ್ತಿಸಿಕೊಂಡಿದ್ದರು. ಈಗ ಹೆದ್ದಾರಿ ಕಾಮಗಾರಿ ಕಾರಣದಿಂದಾಗಿ ಇÊರು ಸ್ಥಳಾಂತರಗೊಳ್ಳಬೇಕಿದೆ. ಇವರ ಮುಂದಿನ ಬದುಕು ಕಟ್ಟಿಕೊಳ್ಳಲು ಸಹೃದಯಿಗಳ ನೆರವು ಬೇಕಾಗಿದೆ.

ಪಡುಬಿದ್ರಿ ಪೇಟೆಯಲ್ಲಿ ಹೆದ್ದಾರಿ ಚತುಃಷ್ಪಥ ಕಾಮಗಾರಿಗಾಗಿ ಕೆಲಸ ಕಾರ್ಯಗಳು ಆರಂಭವಾಗಿದ್ದು ಶುಕ್ರವಾರದಂದು ಚಂದ್ರಶೇಖರ ಕಾಂಚನ್‌ರಲ್ಲಿ ಅವರ ಬೂತನ್ನು ಅಲ್ಲಿಂದ ತೆರವುಗೊಳಿಸುವಂತೆ ನವಯುಗ ನಿರ್ಮಾಣ ಕಂಪೆನಿ ಸೂಚಿಸಿದೆ. ಶೇಕಡಾ 77ರಷ್ಟು ವಿಕಲಾಂಗರಾಗಿದ್ದು ತಮ್ಮ ಪತ್ನಿ ನೆರವಿನಿಂದ ಪೇಟೆಗೆ ಬಂದು ತಮ್ಮ ವಹಿವಾಟು ಮುಗಿಸಿ ರಾತ್ರಿಯ ವೇಳೆ ಪತ್ನಿಯೊಂದಿಗೇ ವಾಪಸಾಗುತ್ತಿದ್ದ ಕಾಂಚನ್‌ರಿಗೆ ಈಗ ದಿಕ್ಕು ತೋಚದಂತಾಗಿದೆ. 

ಸರಕಾರಿ ಕಚೇರಿಗಳನ್ನು ಸುತ್ತಲಾಗದ ಸ್ಥಿತಿಯಲ್ಲಿ, ನಡೆಯಲೂ ಕಠಿನ ಪರಿಶ್ರಮ ವಹಿಸಬೇಕಾಗಿರುವ ಪರಿಸ್ಥಿತಿಯಲ್ಲಿ ಚಂದ್ರಶೇಖರ್‌ ಕಾಂಚನ್‌ರಿದ್ದಾರೆ. ಈ ನಡುವೆಯೂ ಪಡುಬಿದ್ರಿ ಗ್ರಾ. ಪಂ. ಗೆ ತಮಗೊಂದಿಷ್ಟು ಸ್ಥಳಾವಕಾಶವನ್ನು ಕರುಣಿಸುವಂತೆ ಅರ್ಜಿಯನ್ನು ಸಲ್ಲಿಸುವುದಾಗಿಯೂ ಇವರು ಹೇಳಿದ್ದಾರೆ. ಪತ್ನಿ, ಎಂಜಿನಿಯರಿಂಗ್‌ ಹಾಗೂ ಎಂಬಿಎ ವ್ಯಾಸಂಗ ಮಾಡುತ್ತಿರುವ ತನ್ನ ಇಬ್ಬರು ಮಕ್ಕಳು ತಮ್ಮ ಕಲಿಕೆಯನ್ನು ಪೂರೈಸುವಲ್ಲಿಯವರೆಗೆ ಬದುಕಿನ ಜಟಕಾ ಬಂಡಿಯನ್ನೆಳೆಯಲು ತನಗೆ ಶಾಸಕರು, ಜನನಾಯಕರು ಹಾಗೂ ಪಂಚಾಯತ್‌ ಪ್ರತಿನಿಧಿಗಳಾದರೂ ಸಹಕರಿಸ ಬೇಕಾಗಿ ಚಂದ್ರಶೇಖರ ಸಾಲ್ಯಾನ್‌ (ಮೊ: 9902176055) ಬಯಸಿದ್ದಾರೆ. ಕೇವಲ ಆಡು ಮಾತಾಗದೇ ನುಡಿದಂತೆ ನಡೆವ ಸರಕಾರವೇ ದೀನ ದಲಿತರ ಮನೆ ಬಾಗಿಲಿಗೆ ಬರಲೆಂಬ ಹಾರೈಕೆ ಕಾಂಚನ್‌ ಅವರ ಗೆಳೆಯರದ್ದಾಗಿದೆ. 

ಟಾಪ್ ನ್ಯೂಸ್

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.