ಬತ್ತಿಹೋದ ಕಂದಾವರದ ಹೇರಿಕೆರೆ: ಬೇಸಾಯಕ್ಕೆ ಸಿಗದ ನೀರು
Team Udayavani, Jan 17, 2019, 12:50 AM IST
ಬಸ್ರೂರು: ಇಲ್ಲಿನ ಬಿ.ಎಚ್. ರಸ್ತೆಯಿಂದ ಒಂದು ಕಿ.ಮೀ. ಹುಣ್ಸೆಮಕ್ಕಿಗೆ ಹೋಗುವ ರಸ್ತೆಯಲ್ಲಿ ಬಲಕ್ಕೆ ಇರುವ ವಿಶಾಲ ಕೆರೆ ಈಗ ನೆನಪು ಮಾತ್ರ. ನೀರು ತುಂಬಿ ಸಮೃದ್ಧವಾಗಿ ಜನರಿಗೆ, ಕೃಷಿಭೂಮಿಗೆ, ಪ್ರಾಣಿಗಳಿಗೆ ನೀರುಣಿಸಬೇಕಿದ್ದ ಈ ಕೆರೆ ಈಗ ಉಪಯೋಗಕ್ಕೆ ಇಲ್ಲದಂತಾಗಿದೆ.
ಕೃಷಿಗೆ ಅನುಕೂಲ
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಈ ಕೆರೆಯು 42 ಎಕರೆ ವಿಸ್ತೀರ್ಣದಲ್ಲಿದ್ದು ನೀರು ತುಂಬಿತ್ತು. ಈ ಕೆರೆಗೆ ಎರಡು ತೂಬುಗಳಿದ್ದು ಒಂದು ಮೂಡ್ಲಕಟ್ಟೆ ಸೇತುವೆವರೆಗೆ ಹೋಗುತ್ತದೆ. ಮತ್ತೂಂದು ತೂಬು ಬಸ್ರೂರು ಗುಂಡಿಗೋಳಿಯ ಮೂಲಕ ಸಾಂತಾವರದ ತನಕ ನೀರು ಹರಿಯುತ್ತದೆ. ಇದು ಈ ಭಾಗದ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದ್ದು, ಸಾಕಷ್ಟು ಕಡೆ ಉತ್ತಮ ಬೆಳೆಗೆ ಅವಕಾಶ ಕಲ್ಪಿಸಿತ್ತು.
ಕೆರೆ ಪ್ರದೇಶ ಒತ್ತುವರಿ
ಆದರೆ ಪ್ರಸ್ತುತ ಹೇರಿಕೆರೆಯ ವಿಸ್ತೀರ್ಣ ಸುಮಾರು ಆರು ಎಕರೆ ಮಾತ್ರ. ಅದರಲ್ಲೂ ನೀರಿಲ್ಲದೆ ಬತ್ತಿಹೋಗಿದೆ! ನೀರಿಲ್ಲದೆ ಒಣಗಿದ ಕೆರೆ ಪ್ರದೇಶದಲ್ಲಿ ಕೆಲವು ವರ್ಷಗಳ ಹಿಂದೆ ಅಕ್ರಮವಾಗಿ ಕಟ್ಟಿಕೊಂಡ ಮನೆ ನಿವೇಶನಗಳನ್ನು ಅಂದಿನ ತಹಶೀಲ್ದಾರ್ ಅವರು ತೆರವುಗೊಳಿಸಿದ್ದರು. ಸದ್ಯ ಈ ಕೆರೆಯ ನೀರು ಉಳ್ಳೂರಿನ ಗದ್ದೆಗಳಿಗೆ ಮಾತ್ರ ಹೋಗುತ್ತಿದ್ದು ಉಳಿದಂತೆ ಕೃಷಿಕರು ಬೇರೆ ನೀರಾವರಿ ವ್ಯವಸ್ಥೆಯಿಲ್ಲದೆ ಪರಿತಪಿಸುತ್ತಿದ್ದಾರೆ. ಇದರಿಂದ ಕೆಲವೆಡೆ ಕೃಷಿ ಭೂಮಿ ಹಡಿಲು ಬೀಳಲೂ ಕಾರಣವಾಗಿದೆ.
ಇಲಾಖೆಯ ಮೌನ
ಸ್ಥಳೀಯಾಡಳಿತ ಅಥವಾ ಸಣ್ಣ ನೀರಾವರಿ ಇಲಾಖೆ ಈ ಹೇರಿಕೆರೆಯನ್ನು ಹೂಳೆತ್ತಿದರೆ ಬೇಸಗೆಯ ಈ ದಿನಗಳಲ್ಲಿ ಮೂಡ್ಲಕಟ್ಟೆ, ಸಾತಾವರ, ಗುಂಡಿಗೋಳಿ ಮತ್ತಿತರ ಪ್ರದೇಶದ ಬೇಸಾಯಗಾರರಿಗೆ ನೀರಿನ ಸೆಲೆ ಸಿಕ್ಕು ಉತ್ತಮ ಬೆಳೆಯಲು ಸಾಧ್ಯ. ಆದರೆ ನೀರಾವರಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಮೌನವಾಗಿ ಕುಳಿತಿರುವುದು ರೈತರ ಪಾಲಿಗೆ ಸಂಕಟವಾಗಿ ಪರಿಣಮಿಸಿದೆ.
ಅನುದಾನದ ಕೊರತೆ
ಗ್ರಾ.ಪಂ.ನಿಂದ ಹೂಳೆತ್ತಲು ಅನುದಾನದ ಕೊರತೆ ಇದೆ. ಪಂ. ಸಾಮಾನ್ಯ ಸಭೆಯಲ್ಲಿ ಈ ವಿಚಾರ ಮಂಡಿಸಿ ಸಣ್ಣ ನೀರಾವರಿ ಇಲಾಖೆಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
– ಗಣಪ ಮೊಗವೀರ, ಪಿಡಿಒ, ಕಂದಾವರ ಗ್ರಾ.ಪಂ.
ಸಂಬಂಧಪಟ್ಟ ಇಲಾಖೆ ಗಮನ ಹರಿಸಲಿ
ಹೇರಿಕೆರೆ ಈಗ ನೀರು ತುಂಬಿದ್ದರೆ ನಮಗೆ ಸುಗ್ಗಿ ಬೆಳೆ ಬೆಳೆಯಲು ಅನುಕೂಲವಾಗುತ್ತಿತ್ತು. ಆದರೆ ಕೆರೆಯನ್ನು ಹೂಳೆತ್ತದೆ ಕೆರೆ ನೀರು ಕೇವಲ ಉಳ್ಳೂರಿನ ಗದ್ದೆಗಳಿಗೆ ಮಾತ್ರ ಹೋಗುತ್ತಿದೆ. ವಾರಾಹಿ ಕಾಲುವೆ ನೀರನ್ನು ಹೇರಿಕೆರೆಗೆ ಬಿಟ್ಟರೂ ಮೂಡ್ಲಕಟ್ಟೆ, ಸಾತಾವರದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ. ಸಂಬಂಧಪಟ್ಟ ಇಲಾಖೆ ಇನ್ನಾದರೂ ಗಮನ ಹರಿಸಿ ತಕ್ಷಣ ಕಾರ್ಯಪ್ರವೃತ್ತರಾಗಬೇಕಾಗಿದೆ.
– ನಾರಾಯಣ ಪೂಜಾರಿ, ಸಾತಾವರದ ಕೃಷಿಕ
– ದಯಾನಂದ ಬಳ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ