ವಿಸ್ತರಣೆಗೊಂಡ ಅಪಾಯಕಾರಿ ನೆಂಪು ಜಂಕ್ಷನ್ನಲ್ಲಿ ಡಿವೈಡರ್ ನಿರ್ಮಾಣ
Team Udayavani, Aug 16, 2019, 5:02 AM IST
ಕೊಲ್ಲೂರು: ಹೆಮ್ಮಾಡಿಯಿಂದ ಹಾಲ್ಕಲ್ ವರೆಗಿನ ಮುಖ್ಯ ರಸ್ತೆಯ ದ್ವಿಪತ ಕಾಮಗಾರಿ ಪೂರ್ಣ ಗೊಂಡಿದ್ದರು ನೆಂಪು ವೃತ್ತದ ಬಳಿ ಸುರಕ್ಷತಾ ಕ್ರಮವಿಲ್ಲದೇ ಅಪಾಯಕಾರಿ ಆಗಿರುವ ಬಗ್ಗೆ ಪ್ರಕಟವಾದ ಉದಯವಾಣಿಯ ವಿಶೇಷ ವರದಿಗೆ ಸ್ಪಂದಿಸಿರುವ ಲೋಕೋಪಯೋಗಿ ಇಲಾಖೆ ಇದೀಗ ಸುಗಮ ವಾಹನ ಸಂಚಾರಕ್ಕೆ ಪ್ರಾಯೋಗಿಕ ವೃತ್ತ ನಿರ್ಮಿಸಿ ಗೊಂದಲ ನಿಭಾಯಿಸಿದೆ.
ಹೆಮ್ಮಾಡಿ ಮಾರ್ಗವಾಗಿ ಕೊಲ್ಲೂರು ಕ್ಷೇತ್ರಕ್ಕೆ ಸಾಗುವ ರಾ. ಹೆದ್ದಾರಿ ಪ್ರಮುಖ ರಸ್ತೆಗಳಲ್ಲೊಂದು ಇಲ್ಲಿನ ಬಹುತೇಕ ತಿರುವುಗಳಿರುವ ಮಾರ್ಗವು ಅಗಲ ಕಿರಿದಾಗಿದ್ದು ಅಪಘಾತ ಝೋನ್ ಆಗಿ ಪರಿವರ್ತನೆ ಗೊಂಡಿತ್ತು. ದಿನಂಪ್ರತಿ ಒಂದಲ್ಲೊಂದೆಡೆ ವಾಹನ ಅಪಘಾತ ನಡೆಯುತಿತ್ತು. ವಾಹನಗಳ ಅಮಿತ ವೇಗದ ಮೇಲೆ ನಿಯಂತ್ರಣ ಸಾಗಿಸಲು ಈ ಮಾರ್ಗವಾಗಿ ಕೈಗೊಳ್ಳಬೇಕಾದ ಮಾರ್ಗೋಪಾಯದ ಬಗ್ಗೆ ಹಲವು ಭಾರೀ ಉದಯವಾಣಿ ವರದಿ ಮೂಲಕ ಬೆಳಕು ಚೆಲ್ಲಿತ್ತು.ಕಗ್ಗಂಟಾಗಿದ್ದ ಈ ಸಮಸ್ಯೆ ಬಗೆಹರಿಸಲು ಲೋಕೋಪಯೋಗಿ ಹಾಗೂ ಅರಣ್ಯ ಇಲಾಖೆಗೆ ಅಲ್ಲಿ ರಸ್ತೆಗೆ ಚಾಚಿ ಬೆಳದು ನಿಂತಿದ್ದ ಭಾರೀ ಗಾತ್ರದ ಮರಗಳು ತಡೆಯಾಗಿತ್ತು.
ನೆಂಪುವಿನಲ್ಲಿ ಡಿವೈಡರ್ ನಿರ್ಮಾಣ
ರಸ್ತೆಯ ಅಗಲೀಕರಣಗೊಂಡಿದ್ದರು, ಅಮಿತ ವೇಗದಿಂದ ಸಾಗುವ ವಾಹನಗಳ ವೇಗ ನಿಯಂತ್ರಣಕ್ಕೆ ಶಾಸಕರ ಸೂಚನೆಯಂತೆ ಪ್ರಾಯೋಗಿಕ ನೆಲೆಯಲ್ಲಿ ಡಿವೈಡರ್ ನಿರ್ಮಿಸಿದ್ದು ಅದುವೇ ವಾಹನ ಸವಾರರ ಗೊಂದಲಕ್ಕೊಂದು ಪರಿಹಾರ ಕಂಡುಕೊಂಡಂತಾಗಿದೆ.
ಶಾಸಕರ ಪ್ರಯತ್ನ ಫಲ
ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ರಸ್ತೆಯ ವಿಸ್ತರಣೆಯ ಬಗ್ಗೆ ರೂ. 5 ಕೋಟಿ ಅನುದಾನವನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಮಂಜೂರು ಮಾಡಿಸಿದ್ದರು. ಅವರ ಪ್ರಯತ್ನದ ಫಲವಾಗಿ ಹೆಮ್ಮಾಡಿಯಿಂದ ಕೊಲ್ಲೂರಿಗೆ ಸಾಗುವ ಭಾರೀ ತಿರುವು ಹೊಂದಿರುವ ರಸ್ತೆಯು ವಿಸ್ತರೀಕರಣ, ಡಾಮರೀಕರಣಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ