“ಸರಕಾರಿ ಆಸ್ಪತ್ರೆ ಖಾಸಗಿಯವರಿಗೆ ಬೇಡ: ಕೋರ್ಟಿಗೆ ಅಪೀಲು’
Team Udayavani, Mar 28, 2017, 3:50 AM IST
ಉಡುಪಿ: ಉಡುಪಿ ನಗರಸಭೆಯ ಮುಂಭಾಗದಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದ ಜಾಗವನ್ನು ಸರಕಾರ ಖಾಸಗಿ ಸಂಸ್ಥೆಗೆ ನೀಡಿರುವುದನ್ನು ವಿರೋಧಿಸಿ ಉಡುಪಿ ಕೋರ್ಟ್ಗೆ ಅಪೀಲು ಸಲ್ಲಿಕೆಯಾಗಿದೆ.
ದಾನಿ ದಿ| ಹಾಜಿ ಅಬ್ದುಲ್ಲಾ ಸಾಹೇಬ್ ಅವರು ವೀಲು ಬರೆದು ಸಾರ್ವಜನಿಕ ಸೇವೆಗಾಗಿ ಸರಕಾರಕ್ಕೆ ದಾನ ನೀಡಿದ್ದರು. ಆ ಜಾಗವನ್ನು ಸರಕಾರ ಖಾಸಗಿ ಸಂಸ್ಥೆಧಿಯವರಿಗೆ ನೀಡುವಾಗ ಯಾವುದೇ ನಿಯಮ ಪಾಲಿಸಿಲ್ಲ. ವೀಲ್ನ ನಿಯಮಾನುಸಾರ ಕೋರ್ಟ್ನ ಅನುಮತಿಯನ್ನೂ ಕೇಳಿಲ್ಲ. ಹಾಗೆಯೇ ಸಾರ್ವಜನಿಕರ ಸೇವೆಧಿಯನ್ನು ವ್ಯಾಪಾರ ಮಾಡಲು ಹೊರಧಿಟಿರುವುದನ್ನು ವಿರೋಧಿಸಿ ಹಾಜಿ ಅಬ್ದುಲ್ಲಾ ಸಾಹೇಬ್ ಅವರ ಸಂಬಂಧಿ ಖುರ್ಷಿದ್ ಅಹಮದ್ ಮತ್ತು ಇತರ 7 ಮಂದಿ ಸಂಬಂಧಿಗಳ ಸಹಿತ ನಾಗರಿಕರ ಪರವಾಗಿ 48 ಮಂದಿ ಒಟ್ಟಾಗಿ ಅಪೀಲು ಸಲ್ಲಿಸಿದ್ದಾರೆ.
ಇಂದು ನಿರ್ಣಯ
ಅಪೀಲನ್ನು ಸೋಮವಾರ ಕೈಗೆತ್ತಿಕೊಂಡ ಪ್ರಿನ್ಸಿಪಲ್ ಸಿವಿಲ್ ಕೋರ್ಟ್ನ ನ್ಯಾಯಾಧೀಶರು, ಪ್ರಕರಣ ಸ್ವೀಕರಿಸಿಕೊಂಡು ವಿಚಾರಣೆ ನಡೆಸಬೇಕೋ? ಯಾವ ಪೀಠದಲ್ಲಿ ವಿಚಾರಣೆ ನಡೆಸಬೇಕು ಎನ್ನುವ ನಿರ್ಣಯವನ್ನು ಸಿವಿಲ್ ನ್ಯಾಯಾಧೀಶರು ಮಂಗಳವಾರ ತಿಳಿಸಲಿದ್ದಾರೆ ಎಂದು ಅಪೀಲು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತದಾರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ