ಜಿಲ್ಲಾ ಆಸ್ಪತ್ರೆ ಸಮೀಪ ¬ಬಾಯ್ದೆರೆದ ಚರಂಡಿ
Team Udayavani, Feb 3, 2019, 1:00 AM IST
ಉಡುಪಿ: ಇಲ್ಲಿನ ಜಿಲ್ಲಾ ಆಸ್ಪತ್ರೆಯ ಪ್ರವೇಶ ದ್ವಾರದ ಎಡಭಾಗದ ಫುಟ್ಪಾತ್ನಲ್ಲಿ ಡ್ರೈನೇಜ್ ಚರಂಡಿಯ ಸ್ಲಾಬ್ ಕಿತ್ತುಹೋಗಿ ಬೃಹತ್ಗಾತ್ರದ ಹೊಂಡ ಉಂಟಾಗಿದ್ದು, ನಡೆದಾಡಲು ಕಷ್ಟಕರವಾಗಿದೆ.
ಆಸ್ಪತ್ರೆ ಪ್ರವೇಶಿಸುವ ಎರಡೂ ಬದಿಗಳಲ್ಲಿ ಹೊಂಡ ಇದ್ದು ಪಾದಚಾರಿಗಳಿಗೆ ಅನನುಕೂಲವಾಗಿದೆ.
ಪ್ರತಿನಿತ್ಯ ಹಲವಾರು ಮಂದಿ ರೋಗಿಗಳು ಇಲ್ಲಿ ಚಿಕಿತ್ಸೆಗೆಂದು ಬರುತ್ತಿದ್ದು, ನಡೆದುಕೊಂಡು ಬರುವವರಿಗೆ ಇಲ್ಲಿ ಅಪಾಯ ತಪ್ಪಿದ್ದಲ್ಲ. ವಾಹನ ಚಲಿಸುವ ದಾರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ.
ಇದು ನಗರಸಭೆ ವ್ಯಾಪ್ತಿಗೊಳಪಟ್ಟ ಫುಟ್ಪಾತ್ ಆಗಿದ್ದು, ಶೀಘ್ರವಾಗಿ ಈ ಡ್ರೈನೇಜ್ ಹೊಂಡ ಮುಚ್ಚುವ ಕೆಲಸವಾಗಬೇಕು. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪಾದಚಾರಿಗಳಿಗೆ ತೊಂದರೆ
ಚರಂಡಿ ಕಾಮಗಾರಿಗೆಂದು ಇದನ್ನು ಅಗೆಯಲಾಗಿದೆ. ಮುಚ್ಚುವ ಕೆಲಸ ನಗರ ಸಭೆಯಿಂದ ಆಗಬೇಕಿದೆ. ಸಧ್ಯ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.
– ಡಾ| ಮಧುಸೂದನ್ ನಾಯಕ್ ಜಿಲ್ಲಾ ಸರ್ಜನ್, ಜಿಲ್ಲಾಸ್ಪತ್ರೆ, ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್