ಬಹುದ್ದೂರ್ ಷಾ ವಾರ್ಡ್: ಮುಳುಗಡೆ ಭೀತಿ
Team Udayavani, Jun 8, 2018, 6:00 AM IST
ಕುಂದಾಪುರ: ಮುಂಗಾರು ನಿಧಾನಕ್ಕೆ ಚುರುಕುಗೊಂಡಿದ್ದು, ಕುಂದಾಪುರ ಪುರಸಭೆ ವ್ಯಾಪ್ತಿಯ ಬಹುದ್ದೂರ್ ಷಾ ವಾರ್ಡಿನ ಹಲವೆಡೆ ಇನ್ನೂ ಚರಂಡಿಯ ಸ್ವತ್ಛತೆಯೇ ಆಗಿಲ್ಲ. ಇನ್ನೂ ಕೆಲವು ರಸ್ತೆಗೆ ಚರಂಡಿಯೇ ಇಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಬಹಾದ್ದೂರ್ ಷಾ ರಸ್ತೆಯ ಸುತ್ತಮುತ್ತಲಿನ ಮನೆಗಳು ಈ ಬಾರಿಯೂ ಮುಳುಗಡೆ ಭೀತಿ ಎದುರಿಸುತ್ತಿದೆ.
ಕುಂದಾಪುರ ಪುರಸಭೆಯ ಹೆಚ್ಚಿನ ಎಲ್ಲ ವಾರ್ಡಿನ ಚರಂಡಿ ನೀರೆಲ್ಲ ಬಹುದ್ದೂರ್ ಷಾ ವಾರ್ಡಿನ ಸುಡುಗಾಡು ತೋಡಿಗೆ ಹರಿದು ಬರುತ್ತಿದ್ದು, ಈ ಬಾರಿಯೂ ಪುರಸಭೆ ಹೆಚ್ಚಿನ ಮುಂಜಾಗ್ರತೆ ವಹಿಸಿಲ್ಲ. ಈ ವ್ಯಾಪ್ತಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿದ್ದು, ಮುಳುಗಡೆ ಭೀತಿ ಆವರಿಸಿದೆ.
ಕಳೆದ ಬಾರಿ ಸುರಿದ ಕುಂಭದ್ರೋಣ ಮಳೆಗೆ ಈ ವಾರ್ಡಿನ ಹೆಚ್ಚಿನ ಮನೆಗಳೆಲ್ಲ ಮಳೆ ನೀರಿಗೆ ತುತ್ತಾಗಿದ್ದವು. ಈ ಬಾರಿ ಸ್ಲಾéಬ್ ನಿರ್ಮಾಣ ಕಾರ್ಯ ಆರಂಭವಾಗಿದ್ದರೂ, ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದೆ ಎನ್ನುತ್ತಾರೆ ಸ್ಥಳೀಯ ವಾರ್ಡ್ ಸದಸ್ಯ ಚಂದ್ರಶೇಖರ್ ಖಾರ್ವಿ.
ಸಾಂಕ್ರಮಿಕ ರೋಗ ಭೀತಿ
ಸುಡುಗಾಡು ತೋಡಿನಲ್ಲಿ ಮಳೆ ನೀರು ಮಾತ್ರ ಹರಿದು ಬರುತ್ತಿಲ್ಲ, ಬದಲಾಗಿ ತ್ಯಾಜ್ಯ ನೀರು ಕೂಡ ಹರಿದು ಬರುತ್ತಿದ್ದು, ಇದರಿಂದ ಆ ತೋಡಿನಲ್ಲಿ ನೀರು ಹೋಗಲು ಜಾಗವಿಲ್ಲದೆ, ಅಲ್ಲೇ ನಿಂತು, ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಮಾರ್ಪಡುವ ಸಾಧ್ಯತೆಯಿದ್ದು, ಇದರಿಂದ ಸಾಂಕ್ರಮಿಕ ರೋಗಗಳು ಕಾಣಿಸಿಕೊಳ್ಳುವ ಭೀತಿ ಇಲ್ಲಿನ ಜನರದ್ದು.
ಚರಂಡಿ ಸ್ವಚ್ಛತೆಯೇ ಆಗಿಲ್ಲ
ಈ ವಾರ್ಡಿನಲ್ಲಿರುವ ಅನೇಕ ಚರಂಡಿಗಳಲ್ಲಿ ಸ್ವತ್ಛ ಮಾಡುವ ಕಾರ್ಯ ಇನ್ನೂ ಆಗಿಲ್ಲ. ಸ್ವಚ್ಛತಾ ಸಪ್ತಾಹದಡಿ ಅಲ್ಲಲ್ಲಿ ಕೆಲವೆಡೆ ಮಾತ್ರ ಕ್ಲೀನ್ ಮಾಡಲಾಗಿದೆ. ಮಳೆಯಿಂದಾಗಿ ಚರಂಡಿ ಸ್ವತ್ಛತಾ ಕಾರ್ಯಕ್ಕೆ ಅಡೆಚಣೆ ಉಂಟಾಗಿದೆ ಎನ್ನುವುದು ಪುರಸಭೆ ಅಧಿಕಾರಿಗಳ ವಾದ. ಇನ್ನೂ ಕೆಲವು ಕಡೆಗಳ ರಸ್ತೆಗೆ ನೀರು ಹರಿದು ಹೋಗಲು ಚರಂಡಿ ಅಥವಾ ತೋಡಿನ ವ್ಯವಸ್ಥೆಯೇ ಇಲ್ಲ. ಇದರಿಂದ ಮಳೆ ನೀರೆಲ್ಲ ರಸ್ತೆಯಲ್ಲೇ ಹರಿದು ಹೋಗುತ್ತಿದ್ದು, ಪಾದಚಾರಿಗಳಿಗೆ ನಿತ್ಯ ನೀರಾಭಿಷೇಕವಾಗುತ್ತಿದೆ.
ಶೀಘ್ರ ಟೆಂಡರ್
ಸುಡುಗಾಡು ತೋಡಿಗೆ ಸ್ಲ್ಯಾಬ್ ನಿರ್ಮಿಸುವ ಸಂಬಂಧ ನೀತಿ ಸಂಹಿತೆ ಅಡ್ಡಿಯಾಗಿದ್ದು, ಅನುದಾನದ ಕೊರತೆಯೂ ಇತ್ತು. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು.
– ಚಂದ್ರಶೇಖರ ಖಾರ್ವಿ,
ಸ್ಥಳೀಯ ವಾರ್ಡ್ ಸದಸ್ಯ
ಮುಳುಗುವ ಆತಂಕ
ಈ ಪ್ರದೇಶದಲ್ಲಿರುವ ನಮ್ಮ ಮನೆಯೂ ಇನ್ನು ಒಂದೆರಡು ಮಳೆಗೆ ಮುಳುಗುತ್ತದೆ. ಇದಕ್ಕೆ ಮುಖ್ಯ ಕಾರಣ ನೀರು ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಪ್ರತಿ ಬಾರಿಯೂ ಮುಳುಗುತ್ತದೆ. ಈ ಬಾರಿಯೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ.
– ದೇವೇಂದ್ರ, ಸ್ಥಳೀಯರು
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್