ಹೆಗ್ಗುಂಜೆ, ಕಾಡೂರಿನಲ್ಲಿ ಜಲಕ್ಷಾಮ: ಟ್ಯಾಂಕರ್ ನೀರಿಗೆ ಆಗ್ರಹ
Team Udayavani, Apr 6, 2018, 7:00 AM IST
ಬ್ರಹ್ಮಾವರ: ಮಳೆಗಾಲ ಪ್ರಾರಂಭಕ್ಕೆ ಇನ್ನೂ ಭರ್ತಿ ಎರಡು ತಿಂಗಳು ಇರುವಾಗಲೇ ಹೆಗ್ಗುಂಜೆ ಮತ್ತು ಕಾಡೂರು ಗ್ರಾ.ಪಂ. ವ್ಯಾಪ್ತಿಯ ಹಲವೆಡೆ ಜಲಕ್ಷಾಮ ಬಾಧಿಸಿದೆ.
ಬಾವಿ,ಬೋರ್ವೆಲ್ ಬರಿದು
ಹೆಗ್ಗುಂಜೆ ವ್ಯಾಪ್ತಿಯ ಹಲವು ಬಾವಿ, ಬೋರ್ವೆಲ್ಗಳು ನಿರುಪಯುಕ್ತವಾಗಿವೆ. ಅಂತರ್ಜಲ ಮಟ್ಟ ತೀವ್ರ ಇಳಿಕೆಯಿಂದ ಈ ಭಾಗದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಕಳೆದ ವರ್ಷ ಪಂಚಾಯತ್ ವತಿಯಿಂದ ವಿತರಣೆ ವಿಳಂಬವಾದಾಗ ಜನಪ್ರತಿನಿಧಿಗಳು ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ನೀರು ಪೂರೈಸಿದ್ದರು. ಈ ಬಾರಿ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನೀರು ಪೂರೈಕೆಯಾಗಿಲ್ಲ.
ಖಾಸಗಿ ನೀರಿಗೆ ಒಡಂಬಡಿಕೆ
ಬೇಸಗೆಯಲ್ಲಿ ದಿನಕ್ಕೆ ಒಂದು ಟ್ಯಾಂಕರ್ ನೀರು ನೀಡಬೇಕೆನ್ನುವ ಒಡಂಬಡಿಕೆಯಂತೆ ಖಾಸಗಿಯವರಿಗೆ ಬೋರ್ವೆಲ್ ತೋಡಲು ಅನುಮತಿ ನೀಡಲಾಗಿದೆ. ಸರಕಾರಿ ಬಾವಿ, ಬೋರ್ವೆಲ್ ಬರಿದಾದ ಹಿನ್ನಲೆಯಲ್ಲಿ ಇದು ಅನಿವಾರ್ಯವಾಗಿದೆ.
ಹನೆಹಳ್ಳಿಗೆ ಪರಿಹಾರ
ಎರಡು ವರ್ಷಗಳ ಹಿಂದೆ ಈ ಪಂಚಾಯತ್ವ್ಯಾಪ್ತಿಯ ಮಾಸ್ತಿನಗರ, ನವಗ್ರಾಮದಲ್ಲಿ ತೀವ್ರ ನೀರಿನ ಸಮಸ್ಯೆ ಇತ್ತು. ಈ ವರ್ಷ ಸಮಸ್ಯೆ ಅಷ್ಟಾಗಿ ಇಲ್ಲ. ಮೂಡುತೋಟ, ಶೇಡಿಗುಡ್ಡೆ, ಕೂರಾಡಿ, ಬಂಡೀಮಠದಲ್ಲಿ ತೆರೆದ ಬಾವಿಗಳಿವೆ. ನೀಲಾವರ ಕಿಂಡಿ ಅಣೆಕಟ್ಟಿನಿಂದ ನೀರನ್ನು ಶುದ್ಧೀಕರಿಸಿ ಪೂರೈಸುವ ಯೋಜನೆ ಜಾರಿಯಾದರೆ ಶಾಶ್ವತ ಪರಿಹಾರ ದೊರೆಯಲಿದೆ.
ಎಲ್ಲೆಲ್ಲಿ ನೀರಿಲ್ಲ?
ಹೆಗ್ಗುಂಜೆ ವ್ಯಾಪ್ತಿಯ ಹೆಮ್ಮಣಿಕೆ ಗುಡ್ಡೆ, ಹೊಳೆಬಾಗಿಲು, ಮೈರ್ಕೊಮೆ,ನಾಕೋಡಿ ಎಸ್ಸಿ ಕಾಲನಿ, ಸುರ್ಗಿಕಟ್ಟೆ, ನೀರ್ಜೆಡ್ಡು, ಚಟ್ಟಾರಿಕಲ್ಲು, ಒಳಮಕ್ಕಿ, ಬಾರಾಳಿ, ಜಾರ್ಕಲ್ಗಳಲ್ಲಿ ನೀರಿಲ್ಲ. ಪರಿಣಾಮ ಜನ ಟ್ಯಾಂಕರ್ ನೀರು ಪೂರೈಕೆಗೆ ಬೇಡಿಕೆ ಇಟ್ಟಿದ್ದಾರೆ.
ಶಾಶ್ವತ ಪರಿಹಾರಕ್ಕೆ ಮೊರೆ
ಪಂಚಾಯತ್ ತುತ್ತತುದಿಯಾದ ಕಾಡಿನಕೊಡೆR ಬಳಿ ಸೀತಾನದಿಗೆ ಅಡ್ಡಲಾಗಿ ಯಾಪಿಕಡು ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಇಲ್ಲಿ ಯತೇತ್ಛ ನೀರಿನ ಸಂಪನ್ಮೂಲವಿದೆ. ಇಲ್ಲಿರುವ ಬಾವಿಯಿಂದ ನೀರನ್ನು ಪೂರೈಸುವ ಶಾಶ್ವತ ಯೋಜನೆ ಕೈಗೊಂಡರೆ ಪಂಚಾಯತ್ ವ್ಯಾಪ್ತಿಯ ನೀರಿನ ಸಮಸ್ಯೆ ಬಗೆಹರಿಯುತ್ತದೆ. ವಾರಾಹಿ ನೀರು ಉಡುಪಿ ಕೊಂಡೊಯ್ಯುವ ಯೋಜನೆಯಲ್ಲಿ, ಪೈಪ್ಲೈನ್ ಹೆಗ್ಗುಂಜೆ ಪಂಚಾಯತ್ ವ್ಯಾಪ್ತಿಯಲ್ಲಿ ಹಾದುಹೋಗುವುದರಿಂದ ವಾರಾಹಿ ನೀರನ್ನು ನೀಡಬೇಕೆಂದು ಆಗ್ರಹಿಸಿ ಪಂಚಾಯತ್ ನಿರ್ಣಯ ಕೈಗೊಂಡಿದೆ.
ನಡೂರು ತೀವ್ರ ಸಮಸ್ಯೆ
ಕಾಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಡೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ರೂಪದಲ್ಲಿದೆ. ನಡೂರು, ಬರದಕಲ್ಲು, ಪ್ರಗತಿನಗರ, ರಂಗನಕೆರೆ ಮೊದಲಾದ ಪ್ರದೇಶಗಳಲ್ಲಿ ಅಂತರ್ಜಲ ಪಾತಾಳಕ್ಕಿಳಿದಿದೆ. ಪುಟ್ಟುಗುಡ್ಡೆಯಲ್ಲಿ ಈ ವರ್ಷ ಕೆರೆ ಹೂಳೆತ್ತಿರುವುದರಿಂದ ಸಮಸ್ಯೆ ಸ್ವಲ್ಪ ಕಡಿಮೆ ಇದೆ. ಪ್ರಸ್ತುತ ಅಲೆಯದಲ್ಲಿ ಸೀತಾ ನದಿ ಸಮೀಪದ ಪಂಚಾಯತ್ ಬಾವಿಯಿಂದ ನೀರಿನ ಪೂರೈಕೆಯಾಗುತ್ತಿದೆ. ಆದರೆ ನದಿಯಲ್ಲೇ ನೀರಿನ ಪ್ರಮಾಣ ತೀವ್ರ ಕುಸಿಯುತ್ತಿರುವುದರಿಂದ ಆತಂಕ ತಪ್ಪಿದ್ದಲ್ಲ. ಇಲ್ಲೂ ಉಡುಪಿಗೆ ಸಾಗಿಸುವ ವಾರಾಹಿ ನೀರಿನಲ್ಲಿ ಕಾಡೂರಿಗೂ ನೀರು ಹರಿಸಿದರೆ ಶಾಶ್ವತ ಪರಿಹಾರ ದೊರೆಯಲಿದೆ ಎನ್ನುವ ಅಭಿಪ್ರಾಯವಿದೆ.
ಟ್ಯಾಂಕರ್ ನೀರು ಪೂರೈಕೆ
ತೀವ್ರ ನೀರಿನ ಸಮಸ್ಯೆ ಇರುವ ಜನವಸತಿ ಪ್ರದೇಶಗಳಿಗೆ ಶೀಘ್ರದಲ್ಲೇ ಟ್ಯಾಂಕರ್ ನೀರು ಪೂರೈಸಲಾಗುವುದು.
-ಮಹೇಶ್ ಕೆ.,
ಪಿಡಿಒ, ಕಾಡೂರು ಗ್ರಾ.ಪಂ.
ಗುರುವಾರದಿಂದ ನೀರು ವಿತರಣೆ
ತೀವ್ರ ಸಮಸ್ಯೆ ಇರುವಲ್ಲಿ ಟಾಸ್ಕ್ಫೋರ್ಸ್ ಯೋಜನೆಯಡಿ ಗುರುವಾರದಿಂದಲೇ ಟ್ಯಾಂಕರ್ ಮೂಲಕ ನೀರಿನ ವಿತರಣೆ ಪ್ರಾರಂಭಿಸಲಾಗಿದೆ.
-ಸುಭಾಸ್,
ಪ್ರಭಾರ ಪಿಡಿಒ, ಹೆಗ್ಗುಂಜೆ
– ಪ್ರವೀಣ್ ಮುದ್ದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
MUST WATCH
ಹೊಸ ಸೇರ್ಪಡೆ
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ
Vote ಮಾಡದಿದ್ದರೆ ಬ್ಯಾಂಕ್ ಖಾತೆಯಿಂದ 350 ರೂ. ಕಡಿತ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ