ಇನ್ನಂಜೆ : ಅರ್ಧಕ್ಕೇ ನಿಂತಿದ್ದ ಉಂಡಾರು ಸೇತುವೆ ಕಾಮಗಾರಿಗೆ ಚಾಲನೆ
Team Udayavani, Feb 9, 2019, 12:30 AM IST
ಕಾಪು: ಇನ್ನಂಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾದು ಹೋಗುವ ಕಾಪು – ಬಂಟಕಲ್ – ಶಂಕರಪುರ ರಸ್ತೆಯಲ್ಲಿ ಅರ್ಧಕ್ಕೆ ನಿಂತು ಹೋಗಿದ್ದ ಉಂಡಾರು ಸೇತುವೆ ಕಾಮಗಾರಿಗೆ ಚಾಲನೆ ದೊರಕಿದೆ.
ಉಂಡಾರು ದೇಗುಲದ ಬಳಿ 40 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ ನಡೆದು, ಕಾಮಗಾರಿ ಆರಂಭವಾಗಿ ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿರಲಿಲ್ಲ.ಈ ಹಿನ್ನೆಲೆಯಲ್ಲಿ ಜ. 23ರಂದು ಉದಯವಾಣಿ ವರದಿ ಪ್ರಕಟಿಸಿತ್ತು. ಬಳಿಕ ಲೋಕೋಪಯೋಗಿ ಇಲಾಖೆ ಮತ್ತು ಸ್ಥಳೀಯ ಗ್ರಾ.ಪಂ. ಒತ್ತಡಕ್ಕೆ ಮಣಿದು ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ. ಜತೆಗೆ ರಸ್ತೆಗೆ ತಾಗಿಕೊಂಡಂತಿರುವ ದೈವದ ಗುಡಿ ಸ್ಥಳಾಂತರಕ್ಕೂ ಯೋಜನೆ ರೂಪಿಸಿದ್ದಾರೆ.