ಮಳೆಗಾಲದಲ್ಲಿ ತಾಜಾ ಮೀನಿಗೆ ಬರ; ಗಗನಕ್ಕೇರಿದ ದರ
Team Udayavani, Jun 24, 2019, 5:09 AM IST
ಮಲ್ಪೆ: ಮಳೆಗಾಲದಲ್ಲಿ ಯಾಂತ್ರಿಕ ಮೀನುಗಾರಿಕೆ ನಿಷೇಧ ಹಿನ್ನೆಲೆ, ನಾಡದೋಣಿ ಮೀನುಗಾರಿಕೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳದ ಪರಿಣಾಮ ಮೀನು ಮಾರುಕಟ್ಟೆಯಲ್ಲಿ ತಾಜಾ ಮೀನಿನ ಅಭಾವ ಸೃಷ್ಟಿಯಾಗಿದೆ. ಮೀನಿನ ಬೆಲೆ ಗಗನಕ್ಕೆ ಏರಿದ್ದು, ಮೀನು ಪ್ರಿಯರು ದುಬಾರಿ ದರ ತೆತ್ತು ಹೊರರಾಜ್ಯದ ಮೀನು, ಸ್ಥಳೀಯ ಹೊಳೆಮೀನು ಮತ್ತು ಶೀತಲೀಕೃತ ಮೀನಿಗೆ ಮೊರೆ ಹೋಗಿದ್ದಾರೆ.
ಹೊಳೆ ಮೀನಿನ ದರವೂ ಕೂಡ ದುಬಾರಿ ಯಾಗಿದೆ. ರುಚಿಕರವಾದ ಕಾಣೆ, ಬಯ್ಯ ಮೀನುಗಳು ತುಟ್ಟಿಯಾಗಿದೆ.
ನಾಡದೋಣಿ ಮೀನುಗಾರಿಕೆ ವಿಳಂಬ
ಉತ್ತಮ ಮಳೆಯಾಗಿ, ಸಮುದ್ರದಲ್ಲಿ ತೂಫಾನ್ ಬಂದರೆ ನಾಡದೋಣಿ ಮೀನುಗಾರರಿಗೆ ಹೇರಳ ಮೀನು ಸಿಗುತ್ತದೆ. ಆದರೆ ಈ ಬಾರಿ ಇದುವರೆಗೂ ಸರಿಯಾಗಿ ತೂಫಾನ್, ಮಳೆಯಾಗದ ಕಾರಣ ನಾಡದೋಣಿಗಳು ಕಡಲಿಗಿಳಿದಿಲ್ಲ.
ಹೊರರಾಜ್ಯದ ಮೀನಿಗೂ ಡಿಮ್ಯಾಂಡ್
ಮೀನು ವ್ಯಾಪಾರಿಗಳು ಹೊರರಾಜ್ಯದಿಂದಲೂ ಲಾರಿ ಮೂಲಕ ಮೀನನ್ನು ತರಿಸಿ ಇಲ್ಲಿ ವ್ಯಾಪಾರ ನಡೆಸುತ್ತಾರೆ. ಮಲ್ಪೆ ಬಂದರಿನಲ್ಲಿ ಆಂಧ್ರಪ್ರದೇಶ ಮತ್ತು ಚೆನ್ನೈಯಿಂದ ಇಲ್ಲಿಗೆ ಬಂಗುಡೆ, ಬೂತಾಯಿ, ಮಡಂಗು, ರೆಬ್ಟಾಯಿ ಮೀನು ಸರಬರಾಜು ಆಗುತ್ತಿದೆ. ರವಿವಾರ ಬಂಗುಡೆ ಕೆಜಿಗೆ 180 ರೂ., ಬೂತಾಯಿ 110 ರೂ.ಗೆ ಮಾರಾಟವಾಗಿದೆ. ಇಲ್ಲಿ ಚಿಲ್ಲರೆ ಮಾರಾಟ ಇಲ್ಲ. ಏನಿದ್ದರೂ ರಖಂ ಮಾತ್ರ ಎನ್ನುತ್ತಾರೆ ಮೀನು ವ್ಯಾಪಾರಿ ಹುಸೇನ್ ಸಾಹೇಬ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ